ಲಘು ಉದ್ಯೋಗ ಭಾರತಿಯಿಂದ 30 ಮಾದರಿಗಳ ಆಯ್ಕೆ: ಅನ್ವೇಷಣಾ -2019 ಅಗ್ರಿ ಟಿಂಕರಿಂಗ್ ಫೆಸ್ಟ್ ನ ಫಲಶ್ರುತಿ

December 4, 2019
11:12 AM

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಲಘು ಉದ್ಯೋಗ ಭಾರತಿ ಹಾಗೂ ಕ್ಯಾಂಪ್ಕೋ ಆಶ್ರಯದಲ್ಲಿ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನ.30 ಹಾಗೂ ಡಿ.1ರಂದು ನಡೆದ ಅನ್ವೇಷಣಾ-2019 ರಾಜ್ಯಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್ ನಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಕೃಷಿ ಪೂರಕ ಆವಿಷ್ಕಾರಗಳ ಮೇಳದಲ್ಲಿ ಸುಮಾರು 350 ಮಾದರಿಗಳು ಗಮನಸೆಳೆದರೆ ಅವುಗಳಲ್ಲಿ ಲಘು ಉದ್ಯೋಗ ಭಾರತಿಯಿಂದ ಆಯ್ದ ಮೂವತ್ತನ್ನು ಒಂದು ವರ್ಷದೊಳಗೆ ಅಭಿವೃದ್ಧಿಪಡಿಸುವ ಮಾದರಿಗಳ ಪಟ್ಟಿ ಇಲ್ಲಿದೆ.

ಗಾಯತ್ರಿ ಕೆ. ಭಟ್ ಬಡೆಕ್ಕಿಲ ಇವರ ಬೆಳೆ ಸಂರಕ್ಷಣಾ ಮಾದರಿ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅನಘ ವಿಶ್ರಾಂತ ಇವರ ಅಡಿಕೆ ಒಣಗಿಸುವ ತಂತ್ರಜ್ಞಾನ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಮೃತ ಹಾಗೂ ಅನನ್ಯ ಇವರ ಪೋರ್ಟೆಬಲ್ ಟ್ರಾಲಿ ಮಾದರಿಯು, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಜಯಂತ ಹಾಗೂ ರಂಗರಾಜು ಇವರ ಕಳೆ ತೆಗೆಯುವ ಯಂತ್ರ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಮಿಥುನ್ ಹಾಗೂ ಕ್ಷಿತೀಶ್ ಇವರ ಸ್ಮಾರ್ಟ್ ಫಾರ್ಮಿಂಗ್ ಎಂಬ ಮಾದರಿಯು, ದೇವದತ್ತ ಭಟ್ ಧನುಷ್ ಘಾಟೆ ಇವರ ಕೀಟನಾಶಕ ಮಾದರಿ, ವಿಖಿಲ್ ಕೆ. ಹಾಗೂ ರವಿಶಂಕರ ಇವರ ಅಡಿಕೆ ಮರದ ಔಷಧಿ ಸಿಂಪಡಣೆ ಯಂತ್ರ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವೈಷ್ಣವಿ ಪಿ. ಹಾಗೂ ಜಾನ್ವಿ ಶೆಟ್ಟಿ ಅವರ ಸೌರಶಕ್ತಿ ಆಧಾರಿತ ನೀರಾವರಿ ಮಾದರಿ, ಶ್ರೀ ರಾಮ ವಿದ್ಯಾ ಕೇಂದ್ರ ಕಲ್ಲಡ್ಕದ ವಿಘ್ನೇಶ್ ಹಾಗೂ ಚರಿತ್ ಇವರ ಅಡಿಕೆ ಒಣಗಿಸುವ ತಂತ್ರಜ್ಞಾನ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಶಾಲೆಯ ಹೃತಿಕ್ ಹಾಗೂ ರಿಹಾನ್ ಇವರ ಚಾಲಕ ರಹಿತ ಉಳುಮೆ ಯಂತ್ರ ಆಯ್ಕೆ ಮಾಡಲಾಗಿದೆ.

ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಸಿಂಧೂರ ಪಿ. ಶೆಟ್ಟಿ ಇವರ ಪರಿಸರ ಸ್ನೇಹಿ ಉಪಕರಣಗಳು, ಚರಣ್ ಇವರ ಅಟೋ ಆರ್ಮ್, ವೈಭವ ಹಾಗೂ ಶ್ರೀಯಸ್ ಅವರ ಕಡಿಮೆ ಖರ್ಚಿನ ಹೈಡ್ರೋ ಫೋನಿಕ್ಸ್, ಎಸ್.ಡಿ.ಎಂ. ಸಿಬಿಎಸ್ಸಿ ಶಾಲೆ ಶರಧಿ ಬಿ.ಎಸ್. ಹಾಗೂ ಲಕ್ಷ್ಮಿ ಇವರ ತಂಬಾಕು ಆಧಾರಿತ ಕೀಟನಾಶಕ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರೇಕ್ಷಣ್ ಹಾಗೂ ತಮನ್ ಇವರ ಅಡಿಕೆ ಸಂರಕ್ಷಣಾ ಮಾದರಿ, ಸೈಂಟ್ ಫಿಲೋಮಿನಾ ಪ್ರೌಢ ಶಾಲೆಯ ಆಶ್ಮೀ ಅವರ ಸ್ನೇಕ್ ಗಾರ್ಡ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸನ್ಮಿತ್ ಹಾಗೂ ಪ್ರತೀಕ್ ಇವರ ಬಯೋಮ್ಯಾಟ್, ನೇಹಾ ಭಟ್ ಹಾಗೂ ಆಶ್ರಯ ಭಟ್ ಇವರ ಪರಿಸರ ಸ್ನೇಹಿ ಕೀಟನಾಶಕ ಸಿಂಪಡಣೆಯ ಯಂತ್ರ, ರಾಕೇಶ್ ಕೃಷ್ಣ ಅವರ ಬೀಜ ಬಿತ್ತುವ ಯಂತ್ರ, ಕೃಷ್ಣ ಪ್ರಸಾದ್ ಇವರ ಅರೇಕಾ ಸ್ಪ್ರೇಯರ್, ನರೇಂದ್ರ ಪದವಿ ಪೂರ್ವ ಕಾಲೇಜಿನ ಹೃದಯ್ ಇವರ ಪ್ರಾಣಿಗಳ ದೇಹದ ಕೀಟಗಳನ್ನು ತಡೆಯುವ ಮಾದರಿ, ಸೈಂಟ್ ಫಿಲೋಮಿನ ಪ್ರೌಢ ಶಾಲೆಯ ಸುಹಾನ್ ಬೈಲಾಡಿ ಇವರ ರೋಬೋ ಆರ್ಮ್ ಎಂಬ ಮಾದರಿ, ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಶ್ರೇಯಸ್ ಹಾಗೂ ಪ್ರಖ್ಯಾತ್ ತಂಡದ ಬಹೂಪಯೋಗಿ ನೀರಾವರಿ ಮಾದರಿ, ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಜ್ವಲ್ ಹಾಗೂ ಅಭಿಷೇಕ್ ರೂಪಿಸಿದ ಅಡಿಕೆ ಸಂರಕ್ಷಕ ಮಾದರಿಗಳನ್ನು ಆಯ್ಕೆ ಮಾಡಲಾಗಿದೆ.

ದನ ಎತ್ತುವ ಯಂತ್ರ: ಈ ಮೇಳದಲ್ಲಿ ಹೈನುಗಾರರಿಗೆ ಸಹಕಾರಿಯಾಗುವಂತಹ ಯಂತ್ರವನ್ನು ಪುತ್ತೂರಿನ ರಮೇಶ್ ಅಡ್ಯಾಲು ಇವರ ದನ ಎತ್ತುವ ಯಂತ್ರವನ್ನು ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆಯು ಅಭಿವೃದ್ಧಿ ಪಡಿಸಲು ಆಯ್ಕೆ ಮಾಡಿರುತ್ತದೆ. ಇದರಿಂದ ಕೃಷಿಕರಿಗೆ ಉಪಕಾರಿಯಾಗಲಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!
July 29, 2026
6:52 AM
by: ದ ರೂರಲ್ ಮಿರರ್.ಕಾಂ
ಮಲೆನಾಡಿನಿಂದ ಬಯಲುನಾಡಿನತ್ತ ಅಡಿಕೆ ಬೆಳೆ ವಿಸ್ತರಣೆ : ರಾಣೆಬೆನ್ನೂರಿನಲ್ಲಿ ಹೆಚ್ಚಿದ ರೈತರ ಆಸಕ್ತಿ
July 29, 2026
6:42 AM
by: ದ ರೂರಲ್ ಮಿರರ್.ಕಾಂ
ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ
July 28, 2026
11:25 PM
by: ಮಹೇಶ್ ಪುಚ್ಚಪ್ಪಾಡಿ
ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!
July 28, 2026
10:03 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror