Advertisement
ಸುದ್ದಿಗಳು

ವಿಖಾಯ ಮೆಡಿಚೈನ್ ಮೂಲಕ ತುರ್ತು ಔಷಧಗಳು ಮನೆ ಬಾಗಿಲಿಗೆ

Share

ಸುಳ್ಯ: ದ ಕ ಜಿಲ್ಲಾ ವಿಖಾಯ ಸಮಿತಿ ಹಾಗೂ ಸುಳ್ಯ ಝೋನ್ ವಿಖಾಯ ಸಮಿತಿಯ ವತಿಯಿಂದ ಮಂಗಳೂರಿನಿಂದ ಸುಳ್ಯಕ್ಕೆ ವಿಖಾಯ ಮೆಡಿ ಚೈನ್ ಮೂಲಕ ಔಷಧಗಳನ್ನು ರೋಗಿಗಳಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಸುಳ್ಯದ ಮೆಡಿಕಲ್ ಶಾಪ್ ಗಳಲ್ಲಿ ಸಿಗದಂತಹ ಔಷಧಗಳನ್ನು ವಿಖಾಯ ಕಾರ್ಯಕರ್ತರಿಗೆ ತಿಳಿಸಿದಾಗ, ಮಂಗಳೂರು ವಿಖಾಯ ಕಾರ್ಯಕರ್ತರು ಅಲ್ಲಿನ ಮೆಡಿಕಲ್ ಗಳಿಂದ ಖರೀದಿಸಿ ಬೆಳಿಗ್ಗೆ 10 ಗಂಟೆಗೆ ಬಿ,ಸಿ,ರೋಡ್ ತಲುಪಿಸಲಾಗುತ್ತದೆ. ಅಲ್ಲಿಂದ ಚೈನ್ ಸಿಸ್ಟಮ್ ಮೂಲಕ ಮಾಣಿ, ಕಬಕ, ಪುತ್ತೂರು, ಕುಂಬ್ರ, ತಿಂಗಳಾಡಿ ,ಮಾಡಾವು, ಬೆಳ್ಳಾರೆ, ಪೈಚಾರ್, ಮೂಲಕ ಸುಳ್ಯಕ್ಕೆ ಬರಲಿದೆ. ಸುಳ್ಯಕ್ಕೆ ಬಂದ ಔಷಧಗಳನ್ನು ಸುಳ್ಯದ ವಿಖಾಯ ಸ್ವಯಂ ಸೇವಕರು ನೇರವಾಗಿ ರೋಗಿಗಳ ಮನೆಯವರೆಗೆ ತಲುಪಿಸುತ್ತಾರೆ.

ಸುಳ್ಯ ನಗರದಿಂದ ಕೂಡಾ ಗ್ರಾಮೀಣ ಪ್ರದೇಶಗಳಿಗೆ ಇದೇ ರೀತಿ ಚೈನ್ ಸಿಸ್ಟಮ್ ಮೂಲಕ ಔಷಧಗಳನ್ನು ತಲುಪಿಸಲಾಗುತ್ತಿದೆ. ಇಂದು ಮಂಗಳೂರಿನಿಂದ,ಬೆಳ್ಳಾರೆಯ ಒಬ್ಬ ರೋಗಿಗೆ,ಸುಳ್ಯದ ಒಬ್ಬರಿಗೆ ಹಾಗೂ ಕಲ್ಲುಗುಂಡಿಯ ಒಬ್ಬರಿಗೆ ಔಷಧಗಳನ್ನು ಮೆಡಿ ಚೈನ್ ಮೂಲಕ ತಲುಪಿಸಲಾಗಿದೆ.  ಸುಳ್ಯದಲ್ಲಿ ಸಿಗದಂತಹ ಔಷಧಗಳನ್ನು ಮಂಗಳೂರಿನ ಮೆಡಿಕಲ್ ಗಳಿಂದ ಖರೀದಿಸಿ ಸುಳ್ಯದ ಮನೆಗಳಿಗೆ ತಲುಪಿಸಲು ಸುಳ್ಯ ಝೋನ್ ವಿಖಾಯ ಸಮಿತಿಯ ಸದಸ್ಯರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹೆಸರಘಟ್ಟ ಹಕ್ಕಿಜ್ವರ ನಿಯಂತ್ರಣದಲ್ಲಿ | ಜನರಿಗೆ ಯಾವುದೇ ಆತಂಕ ಬೇಡ ಎಂದ ಆರೋಗ್ಯ ಇಲಾಖೆ

ಹೆಸರಘಟ್ಟದಲ್ಲಿ ಕಂಡುಬಂದ ಹಕ್ಕಿಜ್ವರವನ್ನು ಆರೋಗ್ಯ ಇಲಾಖೆ ಸಂಪೂರ್ಣ ನಿಯಂತ್ರಣಕ್ಕೆ ತಂದಿದೆ. ಮಾನವ ಸೋಂಕಿನ…

45 minutes ago

ಬಿಸಿಲಿನ ಬೇಗೆಯಲ್ಲಿ ಕಾಡಿಗೆ ಜೀವಜಲ..! ವನ್ಯಜೀವಿಗಳಿಗಾಗಿ ಕೃತಕ ನೀರಿನ ತೊಟ್ಟಿಗಳ ಮಹಾಯೋಜನೆ

ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಡೆಯಲು ಅರಣ್ಯ ಇಲಾಖೆ ಕೃತಕ ನೀರಿನ ತೊಟ್ಟಿಗಳನ್ನು…

56 minutes ago

ಹವಾಮಾನ ವರದಿ | 26-04-2026 | ಸದ್ಯ ಸೆಖೆಯ ಉಗ್ರ ರೂಪ…! ಏಪ್ರಿಲ್ 28 ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ

ರಾಜ್ಯದಲ್ಲಿ ಭಾರಿ ಬಿಸಿಲು ಮುಂದುವರಿದಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯ ಲಕ್ಷಣಗಳಿವೆ. ಏಪ್ರಿಲ್…

20 hours ago

ಅಡಿಕೆ ಎಲೆಚುಕ್ಕೆರೋಗ – ಸಿಪಿಸಿಆರ್‌ಐ ನೇತೃತ್ವದಲ್ಲಿ ಸುಳ್ಯದ ಗುತ್ತಿಗಾರಿನಲ್ಲಿ ಸಂವಾದ

ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಮೂಹ ಕ್ರಮಗಳು ಫಲ ನೀಡುತ್ತಿವೆ. ಗುತ್ತಿಗಾರಿನಲ್ಲಿ ಸಂವಾದ…

1 day ago

2026 ಎಲ್ ನಿನೊ ಎಚ್ಚರಿಕೆ..! ಭಾರತ ಸೇರಿ ಏಷ್ಯಾದಲ್ಲಿ ಬರ-ಬಿಸಿಲಿನ ಡಬಲ್ ಶಾಕ್

2026ರಲ್ಲಿ ಎಲ್ ನಿನೊ ಪರಿಣಾಮದಿಂದ ಭಾರತ ಸೇರಿ ಏಷ್ಯಾದಲ್ಲಿ ಕಡಿಮೆ ಮಳೆ ಮತ್ತು…

2 days ago

ಭಾರೀ ಬಿಸಿ ಹೊಡೆತ..! ಜಗತ್ತಿನ 1 ಬಿಲಿಯನ್ ಜನರ ಬದುಕಿಗೆ ಬಿಸಿ ಹೊಡೆತ

ಹೆಚ್ಚುತ್ತಿರುವ ಉಷ್ಣತೆ ಕೃಷಿ, ಜಾನುವಾರು ಮತ್ತು ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು,…

2 days ago