ಸುಳ್ಯ: ದ ಕ ಜಿಲ್ಲಾ ವಿಖಾಯ ಸಮಿತಿ ಹಾಗೂ ಸುಳ್ಯ ಝೋನ್ ವಿಖಾಯ ಸಮಿತಿಯ ವತಿಯಿಂದ ಮಂಗಳೂರಿನಿಂದ ಸುಳ್ಯಕ್ಕೆ ವಿಖಾಯ ಮೆಡಿ ಚೈನ್ ಮೂಲಕ ಔಷಧಗಳನ್ನು ರೋಗಿಗಳಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಸುಳ್ಯದ ಮೆಡಿಕಲ್ ಶಾಪ್ ಗಳಲ್ಲಿ ಸಿಗದಂತಹ ಔಷಧಗಳನ್ನು ವಿಖಾಯ ಕಾರ್ಯಕರ್ತರಿಗೆ ತಿಳಿಸಿದಾಗ, ಮಂಗಳೂರು ವಿಖಾಯ ಕಾರ್ಯಕರ್ತರು ಅಲ್ಲಿನ ಮೆಡಿಕಲ್ ಗಳಿಂದ ಖರೀದಿಸಿ ಬೆಳಿಗ್ಗೆ 10 ಗಂಟೆಗೆ ಬಿ,ಸಿ,ರೋಡ್ ತಲುಪಿಸಲಾಗುತ್ತದೆ. ಅಲ್ಲಿಂದ ಚೈನ್ ಸಿಸ್ಟಮ್ ಮೂಲಕ ಮಾಣಿ, ಕಬಕ, ಪುತ್ತೂರು, ಕುಂಬ್ರ, ತಿಂಗಳಾಡಿ ,ಮಾಡಾವು, ಬೆಳ್ಳಾರೆ, ಪೈಚಾರ್, ಮೂಲಕ ಸುಳ್ಯಕ್ಕೆ ಬರಲಿದೆ. ಸುಳ್ಯಕ್ಕೆ ಬಂದ ಔಷಧಗಳನ್ನು ಸುಳ್ಯದ ವಿಖಾಯ ಸ್ವಯಂ ಸೇವಕರು ನೇರವಾಗಿ ರೋಗಿಗಳ ಮನೆಯವರೆಗೆ ತಲುಪಿಸುತ್ತಾರೆ.
ಸುಳ್ಯ ನಗರದಿಂದ ಕೂಡಾ ಗ್ರಾಮೀಣ ಪ್ರದೇಶಗಳಿಗೆ ಇದೇ ರೀತಿ ಚೈನ್ ಸಿಸ್ಟಮ್ ಮೂಲಕ ಔಷಧಗಳನ್ನು ತಲುಪಿಸಲಾಗುತ್ತಿದೆ. ಇಂದು ಮಂಗಳೂರಿನಿಂದ,ಬೆಳ್ಳಾರೆಯ ಒಬ್ಬ ರೋಗಿಗೆ,ಸುಳ್ಯದ ಒಬ್ಬರಿಗೆ ಹಾಗೂ ಕಲ್ಲುಗುಂಡಿಯ ಒಬ್ಬರಿಗೆ ಔಷಧಗಳನ್ನು ಮೆಡಿ ಚೈನ್ ಮೂಲಕ ತಲುಪಿಸಲಾಗಿದೆ. ಸುಳ್ಯದಲ್ಲಿ ಸಿಗದಂತಹ ಔಷಧಗಳನ್ನು ಮಂಗಳೂರಿನ ಮೆಡಿಕಲ್ ಗಳಿಂದ ಖರೀದಿಸಿ ಸುಳ್ಯದ ಮನೆಗಳಿಗೆ ತಲುಪಿಸಲು ಸುಳ್ಯ ಝೋನ್ ವಿಖಾಯ ಸಮಿತಿಯ ಸದಸ್ಯರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಿ.ಎಸ್ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…
ಮಧ್ಯಪ್ರದೇಶದಲ್ಲಿ ಹೊಸ ತಿರುವಿಕೆ ಪರಿಣಾಮ: ಕರಾವಳಿ, ಮಲೆನಾಡಿನಲ್ಲಿ ಮಳೆ ಚುರುಕು ಸಾಧ್ಯತೆ ಕರ್ನಾಟಕದ…
ಕಡಿಮೆ ಸಂಪನ್ಮೂಲ ಬಳಸಿ ಹೆಚ್ಚು ಉತ್ಪಾದನೆ ಪಡೆಯಲು ಸ್ಮಾರ್ಟ್ ಸಂಪನ್ಮೂಲ ನಿರ್ವಹಣೆ ಅಗತ್ಯವಾಗಿದೆ.…
ತೀವ್ರ ಬರ ಮತ್ತು ಉಷ್ಣಾಂಶದಿಂದ ಇಂಗ್ಲೆಂಡ್ನಲ್ಲಿ ಕೃಷಿ ಉತ್ಪಾದನೆ ಕುಸಿದಿದ್ದು, ಆಹಾರ ಕೊರತೆ…
ಕರಾವಳಿ ಜಿಲ್ಲೆಗಳಲ್ಲಿ ಸಣ್ಣ ಅವಧಿಯ ಸಾಮಾನ್ಯ ಮಳೆ ಮಾತ್ರ; ಮಲೆನಾಡಿನಲ್ಲಿ ಮಳೆ ಕಡಿಮೆಯಾಗುವ…