Advertisement
ಜಿಲ್ಲೆ

ವಿಜಯನಗರ ಕಾಲದ ಶಾಸನ ಬೆಳಕಿಗೆ

Share

ಧರ್ಮಸ್ಥಳ :  ಪುನರ್ ಪ್ರತಿಷ್ಠೆ ಮತ್ತು  ಬ್ರಹ್ಮಕಲಶೋತ್ಸವ ನಡೆಯುತ್ತಿರುವ ಬೆಳ್ತಂಗಡಿ ತಾಲೂಕಿನ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ  ವಿಜಯನಗರ ಸಾಮ್ರಾಜ್ಯದ ಅಮೂಲ್ಯ ಶಿಲಾಶಾಸನವೊಂದು ಬೆಳಕಿಗೆ ಬಂದಿದೆ.

ಮಧ್ಯದಲ್ಲಿ ತುಂಡರಿಸಲ್ಪಟ್ಟ ಈ ಜೀರ್ಣಗೊಂಡ ಶಾಸನವನ್ನು ಈಗ ಕಬ್ಬಿಣದ ಪಂಜರದಲ್ಲಿ  ಸಂರಕ್ಷಿಸಿಡಲಾಗಿದೆ. ಆಳೆತ್ತರದ ಶಿಲಾ ಫಲಕದ ಮೇಲೆ ಸುಮಾರು ನಲ್ವತ್ತಏಳು ದೀರ್ಘಪಂಕ್ತಿಗಳಲ್ಲಿ ಇದನ್ನು ಬರೆಯಲಾಗಿದೆ. ಕನ್ನಡ ಭಾಷೆ ಹಾಗೂ ಕನ್ನಡ ಲಿಪಿಯಲ್ಲೇ ಇದ್ದರೂ ಇದನ್ನು ಯಾರೂ ಅಧ್ಯಯನ ಮಾಡಲು ಪ್ರಯತ್ನಸಿರಲಿಲ್ಲ. ನಿವೃತ್ತ ಇತಿಹಾಸ ಪ್ರಾಧ್ಯಾಪಕರೂ, ಶಾಸನ ತಜ್ಞರೂ ಆದ ಡಾ| ವೈ. ಉಮಾನಾಥ ಶೆಣೈಯವರು ಇದನ್ನು ಅಧ್ಯಯನ ಮಾಡಿದಾಗ ಹಲವಾರು ಐತಿಹಾಸಿಕ ವಿಚಾರಗಳು ಬೆಳಕನ್ನು ಕಂಡಿವೆ.

ಈ ಶಿಲಾಶಾಸನ ಶಾಲಿವಾಹನ ಶಕ ಸಾವಿರದ ಮುನ್ನೂರ ಮೂವತ್ತೊಂಭತ್ತನೆಯ ದುರ್ಮುಖಿ ಸಂವತ್ಸರದ ಪುಷ್ಯ ಬಹಳ ಅಮಾವಾಸ್ಯೆ (ಕ್ರಿ.ಶ. 1417ನೇ ಇಸವಿ ಜನವರಿ ತಿಂಗಳ 17ನೇ ತಾರೀಖು) ಆದಿತ್ಯವಾರದಂದು ವಿಜಯನಗರ ಸಾಮ್ರಾಜ್ಯದ ಸಾರ್ವಭೌಮ ಶ್ರೀ ಮನ್ಮಹಾರಾಜಾಧಿರಾಜ ರಾಜ ಪರಮೇಶ್ವರ ಶ್ರೀ ವೀರದೇವರಾಯ ಮಹಾರಾಯರ ಆದೇಶದಂತೆ ಬರೆಯಲಾಗಿತ್ತು. ಇದರಲ್ಲಿ ಭಕ್ತ ಜನರು ಚಂದಕೂರು ದುರ್ಗಾಪರಮೇಶ್ವರಿಯ ದೇವಾಲಯದಲ್ಲಿ ಆಗತಕ್ಕ ಸೇವಾದಿಗಳಿಗೆ ಹಾಗೂ ಬ್ರಾಹ್ಮಣ ಸಂತರ್ಪಣೆಗೆ ಬೇಕಾದ ಭೂಮಿಯನ್ನು ಉಂಬಳಿ ಬಿಟ್ಟ ವಿಚಾರವನ್ನು ತಿಳಿಸಿ ಆ ಬಿಟ್ಟ ಭೂಮಿಯ ಗಡಿರೇಖೆಗಳನ್ನು ಈ ಶಾಸನದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

ಈ ದೇವಾಲಯಕ್ಕೆ ಸಂಬಂಧಿಸಿ ಒಂದು ಅನ್ನಛತ್ರವೂ ಅದನ್ನು ವ್ಯವಸ್ಥಿತವಾಗಿ ನಡೆಸುವ ಒಂದು ಮಠವೂ ಇಲ್ಲಿ ಇದ್ದಂತೆ ಈ ಶಾಸನದಿಂದ ತಿಳಿಯುತ್ತದೆ. ಬಂಗ ಅರಸರು, ನಡ ಗುತ್ತಿನವರು, ಕೆಲವು ಬ್ರಾಹ್ಮಣರು, ಇನ್ನುಳಿದಂತೆ ಅನೇಕ ಶ್ರೀಮಂತ ಭೂಮಾಲಿಕರು, ಈ ವಿನಿಯೋಗಾದಿಗಳಿಗೆ ಭೂಮಿಯನ್ನು ಧಾರೆಯೆರೆದು ಕೊಟ್ಟಿದ್ದರು. ಉಳಿದವರು ಪ್ರತೀ ವರ್ಷ ತಮ್ಮ ಭೂಮಿಯಿಂದ ಬರುವ ಉತ್ಪತ್ತಿಯ ನಿರ್ದಿಷ್ಟ ಅಂಶವನ್ನು ಭತ್ತದ ರೂಪದಲ್ಲಿ ದೇವಾಲಯಕ್ಕೆ ಕೊಡಬೇಕಾಗಿತ್ತು. ಸುಮಾರು 1600 ಮುಡಿ ಭತ್ತ ದೇಣಿಗೆಯ ರೂಪದಲ್ಲಿ ಬರುತಿತ್ತು. ಇದರ ಸರಿಯಾದ ನಿರ್ವಹಣೆಯನ್ನು ಬಂಗರ ಅರಮನೆಯವರು, ನಡದವರು, ಬೀರಣ್ಣ ಎಂಬ ಅಧಿಕಾರಿ ಮತ್ತು ನಾಲ್ಕೂರು ಗ್ರಾಮದವರು ನೋಡಿಕೊಳ್ಳಬೇಕು. ಇದಕ್ಕೆ ಸೂರ್ಯ, ಚಂದ್ರರೇ ಸಾಕ್ಷಿ. ದಾನ ಮಾಡುವವನು ಸ್ವರ್ಗವನ್ನು ಪಡೆಯುತ್ತಾನೆ. ಯಾವಾತನು ಅದನ್ನು ನಡೆಸುತ್ತಾನೋ ಆತನಿಗೆ ಶ್ರೀ ಮಹಾವಿಷ್ಣುಪದ ಪ್ರಾಪ್ತವಾಗುತ್ತದೆ. ಈ ಊರವರು ಇದನ್ನು ನಡೆಸಿಕೊಂಡು ಬರುತ್ತಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

10 hours ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

10 hours ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

11 hours ago

ಗೋಮಯದಿಂದ ಗಣೇಶನ ಮೂರ್ತಿ – ದೇಶದಾದ್ಯಂತ ಸಾವಿರಾರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ

ತಂದೆಯ ನೆನಪಿಗಾಗಿ ಇಂದೋರ್‌ನ ವ್ಯಕ್ತಿಯೊಬ್ಬರು ಗೋಮಯದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ…

15 hours ago

ಹವಾಮಾನ ವರದಿ | 17-09-2026 | ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು ಸಾಧ್ಯತೆ

ಸೆ.18ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಚುರುಕಾಗುವ ಸೂಚನೆ ಇದ್ದು, ಸೆ.19ರಿಂದ ಉತ್ತರ…

2 days ago

ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ

ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…

3 days ago