ಸುದ್ದಿಗಳು

ವಿವೇಕಾನಂದ ವಿದ್ಯಾವರ್ಧಕ ಸಂಘದ ಗಣೇಶೋತ್ಸವದಲ್ಲಿ ದಾಸ ಸಂಕೀರ್ತನೆ ಮೂಲಕ ಭಗವಂತನ ನಾಮಸ್ಮರಣೆಯ ಮೆಲುಕು

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪುತ್ತೂರು: ಮಹತ್ತರವಾದ ಸಾಹಿತ್ಯಗಳು ಮೂಡಿಬರಲು, ದಾಸರ ಮೂಲಕ ಸಂಕೀರ್ತನೆಯಾಗಿ ರಚನೆಯಾಗಲು, ಭಗವಂತನೇ ಶಕ್ತಿಯನ್ನು ನೀಡಿದ್ದಾನೆ. ವೇದದ ಸಾರವನ್ನು ದಾಸರ ಮೂಲಕ ಸಾರಿದ್ದಾನೆ. ಅದರ ಸಾರವನ್ನು ತಿಳಿದು ಬದುಕನ್ನು ಸಾರ್ಥಕಗೊಳಿಸಲು ಸಾಧ್ಯ. ಭಜನೆಯೊಂದಕ್ಕೆ ದೇವರನ್ನು ತಲುಪುವ ಶಕ್ತಿಯಿದೆ. ಅಂತಹ ಭಗವಂತನ ನಾಮದ ಮೆಲುಕು ಹಾಕುವುದರಿಂದ ಧನ್ಯತೆಯನ್ನು ಪಡೆಯಬಹುದು. ಇಂತಹ ಒಂದು ಮಹತ್ತರವಾದ ಕಾರ್ಯ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಆಯೋಜಿಸಲ್ಪಟ್ಟ 38ನೇ ವರುಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಮಂಗಳವಾರ ಬೆಳಗ್ಗೆ ನಡೆದ ದಾಸ ಸಂಕೀರ್ತನೆ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ನಡೆಯಿತು.

Advertisement


ವಿಘ್ನವಿನಾಶಕನ ಸುತ್ತಿಯೊಂದಿಗೆ ದಾಸ ಸಂಕೀರ್ತನೆಯು ಆರಂಭಗೊಡಿತು. ‘ಗಜಾನನ ಗಜಾನನ ಪಾರ್ವತಿ ಸುತ’ ಎಂದು ವಿನಾಶಕನನ್ನು ಸ್ತುತಿಸುತ್ತಾ ಬಂದ ಭಕ್ತರಲ್ಲಿ ಧನ್ಯತೆಯನ್ನು ತುಂಬುತ್ತ, ನೇರ ಭಕ್ತರು ವಿಘ್ನವಿನಾಶಕನ ಸುತ್ತಿಗೆ ಭಾಗಿಗಳಾಗುವಂತೆ ಮಾಡಿತು. ‘ಬಾರೋ ರಾಘವೇಂದ್ರ’ ಎಂದು ನೀನು ವಿನಾಶಕನೊಂದಿಗೆ ಬಂದು ಭಕ್ತರನ್ನು ಸಲಹು ಎಂದು ಬೇಡಿಕೊಳ್ಳಲಾಯಿತು. ‘ಬಾರೆ ಮಣಿ ತನಕ’, ‘ರಂಗಾ ಕೃಷ್ಣಯ್ಯನೇ ಬಾರಯ್ಯ’, ‘ಕಣ್ಣಿನೊಳಗೆ ನೋಡು ಒಳಗಣ್ಣಿನೊಳಗೆ ನೋಡು’ ಎಂದು ಭಕ್ತಿಯಿಂದ ಮಾತ್ರ ದೇವರನ್ನು ತಲುಪಲು ಸಾಧ್ಯ ಎಂದು ಸ್ತುತಿಸುತ್ತಾ ‘ಲಂಕೆ ಹರಿದ ಹನುಮಂತ’ ಹನುಮನ ರಾಮ ಭಕ್ತಿಯನ್ನು ಚಿತ್ರಿಸಿದರು. ‘ಎನ್ನ ಬಿಟ್ಟು ನೀ ಅಗಲದಿರು ಶ್ರೀನಿವಾಸ’ ಎನ್ನುವ ಹಾಡಿನ ಮೂಲಕ ಶ್ರೀನಿವಾಸನನ್ನು ಧ್ಯಾನಿಸಿದರು. ಈ ದಾಸ ಸಂಕೀರ್ತನೆಯ ಹಿಮ್ಮೇಳದಲ್ಲಿ ಕಿಶೋರ್ ಪಲ್ಯ ಮೃದಂಗದಲ್ಲಿ ಹಾಗೂ ತಬಲದಲ್ಲಿ ಗಿರೀಶ್ ಪೆರ್ಲ ಸಹಕರಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆನೆ ದಾಳಿಗೆ ಮೂರು ವರ್ಷದಲ್ಲಿ 129 ರೈತರು ಬಲಿ | ವಿಧಾನಪರಿಷತ್‌ನಲ್ಲಿ ಮಾಹಿತಿ ನೀಡಿದ ಅರಣ್ಯ ಇಲಾಖೆ

ಕಳೆದ ಮೂರು ವರ್ಷಗಳಿಂದ ಕಾಡಾನೆ ದಾಳಿಗೆ ಒಟ್ಟು 129 ಮಂದಿ ರೈತರು ಬಲಿಯಾಗಿದ್ದಾರೆ.…

8 hours ago

ಹವಾಮಾನ ವರದಿ | 11-08-2025 | ಇಂದು ಸಾಮಾನ್ಯ ಮಳೆ | ಆ-12 ರಿಂದ ಆ-20 ರವರಗೆ ರಾಜ್ಯದ ವಿವಿದೆಡೆ ಮಳೆ |

ಬಂಗಾಳಕೊಲ್ಲಿಯ ಉತ್ತರ ಭಾಗದಲ್ಲಿ ಆಗಸ್ಟ್ 15ರಂದು ವಾಯುಭಾರ ಕುಸಿತ ಉಂಟಾಗುವ ಲಕ್ಷಣಗಳಿದ್ದು, ಈಗಿನಂತೆ…

15 hours ago

ವೈಜ್ಞಾನಿಕ ಶಿಫಾರಸ್ಸಿನಂತೆ ರಸಗೊಬ್ಬರದ ಬಳಕೆ ಸೂಕ್ತ – ರೈತರಿಗೆ ಸಲಹೆ

ವೈಜ್ಞಾನಿಕ ಶಿಫಾರಸ್ಸಿನಂತೆ ರಾಸಾಯನಿಕ ಗೊಬ್ಬರ ಬಳಕೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ…

20 hours ago

ರಾಜ್ಯದ ಹಲವೆಡೆ ಮುಂದಿನ 7 ದಿನಗಳ ಕಾಲ ವ್ಯಾಪಕ ಮಳೆ | ಬೆಂಗಳೂರಿಗೆ ಎಲ್ಲೋ ಅಲರ್ಟ್

ಕರಾವಳಿ ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ರಾಜ್ಯದ…

21 hours ago

ಬದುಕು ಪುರಾಣ | ಜ್ಞಾನದ ಪ್ರತಿನಿಧಿ ಗಂಗಾಪುತ್ರ

ತ್ಯಾಗಕ್ಕೊಂದು ಸ್ವ-ಸ್ವರೂಪ ಇದ್ದರೆ ಅದು ‘ಭೀಷ್ಮಾಚಾರ್ಯ’ರಿಗೆ ಹೊಂದುತ್ತದೆ. ತ್ಯಾಗವೆಂದರೆ ದೇಹವನ್ನು ಕಳೆದುಕೊಳ್ಳುವುದಲ್ಲ! ದೇಹವಿದ್ದೂ…

2 days ago

ಬೆಳೆ ಹಾನಿ ಕುರಿತು ಸಮಗ್ರವಾಗಿ ಸಮೀಕ್ಷೆಗೆ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಗ್ರಾಮೀಣ ರಸ್ತೆ, ಕೃಷಿ, ತೋಟಗಾರಿಕೆ ಬೆಳೆಗಳು, ಜನ-ಜಾನುವಾರುಗಳ…

2 days ago