ಪುತ್ತೂರು: ಮಹತ್ತರವಾದ ಸಾಹಿತ್ಯಗಳು ಮೂಡಿಬರಲು, ದಾಸರ ಮೂಲಕ ಸಂಕೀರ್ತನೆಯಾಗಿ ರಚನೆಯಾಗಲು, ಭಗವಂತನೇ ಶಕ್ತಿಯನ್ನು ನೀಡಿದ್ದಾನೆ. ವೇದದ ಸಾರವನ್ನು ದಾಸರ ಮೂಲಕ ಸಾರಿದ್ದಾನೆ. ಅದರ ಸಾರವನ್ನು ತಿಳಿದು ಬದುಕನ್ನು ಸಾರ್ಥಕಗೊಳಿಸಲು ಸಾಧ್ಯ. ಭಜನೆಯೊಂದಕ್ಕೆ ದೇವರನ್ನು ತಲುಪುವ ಶಕ್ತಿಯಿದೆ. ಅಂತಹ ಭಗವಂತನ ನಾಮದ ಮೆಲುಕು ಹಾಕುವುದರಿಂದ ಧನ್ಯತೆಯನ್ನು ಪಡೆಯಬಹುದು. ಇಂತಹ ಒಂದು ಮಹತ್ತರವಾದ ಕಾರ್ಯ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಆಯೋಜಿಸಲ್ಪಟ್ಟ 38ನೇ ವರುಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಮಂಗಳವಾರ ಬೆಳಗ್ಗೆ ನಡೆದ ದಾಸ ಸಂಕೀರ್ತನೆ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ನಡೆಯಿತು.
ವಿಘ್ನವಿನಾಶಕನ ಸುತ್ತಿಯೊಂದಿಗೆ ದಾಸ ಸಂಕೀರ್ತನೆಯು ಆರಂಭಗೊಡಿತು. ‘ಗಜಾನನ ಗಜಾನನ ಪಾರ್ವತಿ ಸುತ’ ಎಂದು ವಿನಾಶಕನನ್ನು ಸ್ತುತಿಸುತ್ತಾ ಬಂದ ಭಕ್ತರಲ್ಲಿ ಧನ್ಯತೆಯನ್ನು ತುಂಬುತ್ತ, ನೇರ ಭಕ್ತರು ವಿಘ್ನವಿನಾಶಕನ ಸುತ್ತಿಗೆ ಭಾಗಿಗಳಾಗುವಂತೆ ಮಾಡಿತು. ‘ಬಾರೋ ರಾಘವೇಂದ್ರ’ ಎಂದು ನೀನು ವಿನಾಶಕನೊಂದಿಗೆ ಬಂದು ಭಕ್ತರನ್ನು ಸಲಹು ಎಂದು ಬೇಡಿಕೊಳ್ಳಲಾಯಿತು. ‘ಬಾರೆ ಮಣಿ ತನಕ’, ‘ರಂಗಾ ಕೃಷ್ಣಯ್ಯನೇ ಬಾರಯ್ಯ’, ‘ಕಣ್ಣಿನೊಳಗೆ ನೋಡು ಒಳಗಣ್ಣಿನೊಳಗೆ ನೋಡು’ ಎಂದು ಭಕ್ತಿಯಿಂದ ಮಾತ್ರ ದೇವರನ್ನು ತಲುಪಲು ಸಾಧ್ಯ ಎಂದು ಸ್ತುತಿಸುತ್ತಾ ‘ಲಂಕೆ ಹರಿದ ಹನುಮಂತ’ ಹನುಮನ ರಾಮ ಭಕ್ತಿಯನ್ನು ಚಿತ್ರಿಸಿದರು. ‘ಎನ್ನ ಬಿಟ್ಟು ನೀ ಅಗಲದಿರು ಶ್ರೀನಿವಾಸ’ ಎನ್ನುವ ಹಾಡಿನ ಮೂಲಕ ಶ್ರೀನಿವಾಸನನ್ನು ಧ್ಯಾನಿಸಿದರು. ಈ ದಾಸ ಸಂಕೀರ್ತನೆಯ ಹಿಮ್ಮೇಳದಲ್ಲಿ ಕಿಶೋರ್ ಪಲ್ಯ ಮೃದಂಗದಲ್ಲಿ ಹಾಗೂ ತಬಲದಲ್ಲಿ ಗಿರೀಶ್ ಪೆರ್ಲ ಸಹಕರಿಸಿದರು.
ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…
ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…
ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…
ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…
ಕರ್ನಾಟಕ(Karnataka), ತಮಿಳುನಾಡು(Tamilnadu), ಆಂಧ್ರಪ್ರದೇಶ(Andra Pradesh) ಮತ್ತು ಕೇರಳ(Kerala) ಒಳಗೊಂಡ ದಕ್ಷಿಣ ಭಾರತದ ನಾಲ್ಕು…
ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…