Advertisement
ಸುದ್ದಿಗಳು

ವಿವೇಕಾನಂದ ವಿದ್ಯಾವರ್ಧಕ ಸಂಘದ ಗಣೇಶೋತ್ಸವದಲ್ಲಿ ದಾಸ ಸಂಕೀರ್ತನೆ ಮೂಲಕ ಭಗವಂತನ ನಾಮಸ್ಮರಣೆಯ ಮೆಲುಕು

Share

ಪುತ್ತೂರು: ಮಹತ್ತರವಾದ ಸಾಹಿತ್ಯಗಳು ಮೂಡಿಬರಲು, ದಾಸರ ಮೂಲಕ ಸಂಕೀರ್ತನೆಯಾಗಿ ರಚನೆಯಾಗಲು, ಭಗವಂತನೇ ಶಕ್ತಿಯನ್ನು ನೀಡಿದ್ದಾನೆ. ವೇದದ ಸಾರವನ್ನು ದಾಸರ ಮೂಲಕ ಸಾರಿದ್ದಾನೆ. ಅದರ ಸಾರವನ್ನು ತಿಳಿದು ಬದುಕನ್ನು ಸಾರ್ಥಕಗೊಳಿಸಲು ಸಾಧ್ಯ. ಭಜನೆಯೊಂದಕ್ಕೆ ದೇವರನ್ನು ತಲುಪುವ ಶಕ್ತಿಯಿದೆ. ಅಂತಹ ಭಗವಂತನ ನಾಮದ ಮೆಲುಕು ಹಾಕುವುದರಿಂದ ಧನ್ಯತೆಯನ್ನು ಪಡೆಯಬಹುದು. ಇಂತಹ ಒಂದು ಮಹತ್ತರವಾದ ಕಾರ್ಯ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಆಯೋಜಿಸಲ್ಪಟ್ಟ 38ನೇ ವರುಷದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಮಂಗಳವಾರ ಬೆಳಗ್ಗೆ ನಡೆದ ದಾಸ ಸಂಕೀರ್ತನೆ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ನಡೆಯಿತು.


ವಿಘ್ನವಿನಾಶಕನ ಸುತ್ತಿಯೊಂದಿಗೆ ದಾಸ ಸಂಕೀರ್ತನೆಯು ಆರಂಭಗೊಡಿತು. ‘ಗಜಾನನ ಗಜಾನನ ಪಾರ್ವತಿ ಸುತ’ ಎಂದು ವಿನಾಶಕನನ್ನು ಸ್ತುತಿಸುತ್ತಾ ಬಂದ ಭಕ್ತರಲ್ಲಿ ಧನ್ಯತೆಯನ್ನು ತುಂಬುತ್ತ, ನೇರ ಭಕ್ತರು ವಿಘ್ನವಿನಾಶಕನ ಸುತ್ತಿಗೆ ಭಾಗಿಗಳಾಗುವಂತೆ ಮಾಡಿತು. ‘ಬಾರೋ ರಾಘವೇಂದ್ರ’ ಎಂದು ನೀನು ವಿನಾಶಕನೊಂದಿಗೆ ಬಂದು ಭಕ್ತರನ್ನು ಸಲಹು ಎಂದು ಬೇಡಿಕೊಳ್ಳಲಾಯಿತು. ‘ಬಾರೆ ಮಣಿ ತನಕ’, ‘ರಂಗಾ ಕೃಷ್ಣಯ್ಯನೇ ಬಾರಯ್ಯ’, ‘ಕಣ್ಣಿನೊಳಗೆ ನೋಡು ಒಳಗಣ್ಣಿನೊಳಗೆ ನೋಡು’ ಎಂದು ಭಕ್ತಿಯಿಂದ ಮಾತ್ರ ದೇವರನ್ನು ತಲುಪಲು ಸಾಧ್ಯ ಎಂದು ಸ್ತುತಿಸುತ್ತಾ ‘ಲಂಕೆ ಹರಿದ ಹನುಮಂತ’ ಹನುಮನ ರಾಮ ಭಕ್ತಿಯನ್ನು ಚಿತ್ರಿಸಿದರು. ‘ಎನ್ನ ಬಿಟ್ಟು ನೀ ಅಗಲದಿರು ಶ್ರೀನಿವಾಸ’ ಎನ್ನುವ ಹಾಡಿನ ಮೂಲಕ ಶ್ರೀನಿವಾಸನನ್ನು ಧ್ಯಾನಿಸಿದರು. ಈ ದಾಸ ಸಂಕೀರ್ತನೆಯ ಹಿಮ್ಮೇಳದಲ್ಲಿ ಕಿಶೋರ್ ಪಲ್ಯ ಮೃದಂಗದಲ್ಲಿ ಹಾಗೂ ತಬಲದಲ್ಲಿ ಗಿರೀಶ್ ಪೆರ್ಲ ಸಹಕರಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 08-07-2026 | ರಾಜ್ಯದಲ್ಲಿ ಮುಂಗಾರು ಪರಿಸ್ಥಿತಿ ಹೇಗಿದೆ…? ಕರಾವಳಿಯಲ್ಲಿ ಮಳೆ ಕಡಿಮೆಯಾಗುತ್ತಿದೆಯೇ?

ಆಗಸ್ಟ್‌ 8ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಲಕ್ಷಣಗಳಿವೆ. ಆಗಸ್ಟ್‌…

2 hours ago

ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮ ಅಡಿಕೆ ಜಾಲ | ಮೂರು ಹಂತದ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದ ಇಡಿ

ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಮೂರು ಹಂತದ ಜಾಲವನ್ನು ಇಡಿ ತನಿಖೆಯಲ್ಲಿ…

6 hours ago

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ

ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…

14 hours ago

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…

16 hours ago

ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ

ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್‌ನ…

17 hours ago