Advertisement
ಅನುಕ್ರಮ

ವಿಶ್ವ ಪರಿಸರ ದಿನಕ್ಕೊಂದು ನಮನ

Share

ಶಾಲಾ ಬಾಲಕನೊಬ್ಬ ಮನೆಯಿಂದ ಹೊರಡುವಾಗ ಎರಡು ಬಾಟಲ್ ನೀರು ಹಿಡಿದುಕೊಂಡು ಹೊರಡುತ್ತಿದ್ದ. ಅಮ್ಮನಿಗೆ ಕುತೂಹಲ. ಮಗ ಯಾಕೆ ಎರಡು ಬಾಟಲ್ ಗಳನ್ನು ಹಿಡಿದುಕೊಂಡು  ಹೋಗುತ್ತಾನೆ ? ಅಮ್ಮ ಹಿಂಬಾಲಿಸಿ ಹೋದಳು. ಶಾಲೆಯ ದಾರಿಯ ಪಕ್ಕದಲ್ಲಿ ಒಂದು ಗಿಡಕ್ಕೆ ತನ್ನ ಒಂದು ಬಾಟಲಿಯ ನೀರುಣಿಸುವುದನ್ನು  ಅಮ್ಮ  ಕಂಡಳು. ಅಮ್ಮನಿಗೆ ಎಲ್ಲಾ ಅರ್ಥವಾಯಿತು. ಮಗನ ಬಗ್ಗೆ ಹೆಮ್ಮೆಯೆನಿಸಿತು. 

ಈ ಘಟನೆಯನ್ನು ನಮ್ಮ ಪತ್ರಿಕೋದ್ಯಮ ವಿಭಾಗದ ಪ್ರಥಮ ತರಗತಿಯಲ್ಲಿ ಉಪನ್ಯಾಸಕರಾದ ಭಾಸ್ಕರ ಹೆಗಡೆಯವರು ಹೇಳಿದರು. ಹುಡುಗನ ಈ ವರ್ತನೆ ಯನ್ನು ದಿನನಿತ್ಯ ಅವರು ಗಮನಿಸುತ್ತಿದ್ದರು. ನೀರು ಹಾಕುವುದು ಮಾತ್ರವಲ್ಲದೆ ಗಿಡದ ಸುತ್ತಲಿನ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛವಾಗಿರುವಂತೆ ಕಾಳಜಿ ವಹಿಸುತ್ತಿದ್ದ ಹುಡುಗನ ವರ್ತನೆ ಅನುಕರಣೀಯ. ಹುಡುಗನ ಈ ಗುಣವನ್ನು, ಪ್ರತಿಯೊಂದು ತರಗತಿ ಯಲ್ಲಿಯೂ ಹೇಳಿ ಮಕ್ಕಳ ಮನಪರಿವರ್ತನೆಗೆ ಪ್ರಯತ್ನಿಸುತ್ತಿದ್ದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಗುರುಗಳು ಏನು ಹೇಳುತ್ತಾರೋ ಅದನ್ನೇ ಪಾಲಿಸುತ್ತಾರೆ. ಅಲ್ಲಿ ಹೇಳುವ  ವಿಷಯವನ್ನೇ ಮಕ್ಕಳು ನಂಬುವುದು,      ಒಪ್ಪುವುದು. ಮನೆಯ ಹಿರಿಯರು ಹೇಳಿದ ಎಷ್ಟೋ ವಿಷಯಗಳನ್ನು ರೂಡಿಸಿ ಕೊಳ್ಳದ ಮಕ್ಕಳು ಗುರು ಗಳು ಹೇಳಿದ ಕೂಡಲೇ ಮಾಡಿಬಿಡುತ್ತಾರೆ.  ಪರಿಸರದ  ಕುರಿತು ಬಾಲ್ಯದಲ್ಲಿ ಕೇಳಿದ ಮಾತುಗಳು ನೋಡಿದ ಚಿತ್ರಗಳು ಗಾಢವಾದ ಪರಿಣಾಮ ಬೀರುತ್ತವೆ. ಹಾಗಾಗಿ  ಒಳ್ಳೆಯ ಅಧ್ಯಾಪಕರು ಶಾಲೆಗಳಲ್ಲಿ ಇದ್ದರೆ ಅದೇ ಮಕ್ಕಳ ,ಪೋಷಕರ ಪುಣ್ಯ.
ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯ ಕ್ರಮಗಳು ಎಲ್ಲೆಡೆಯೂ ನಡೆಯುತ್ತಿದೆ.ಈ ಸಂಬಂಧ ಹೆಚ್ಚಿನ ಕಾಳಜಿ ಜನರಲ್ಲಿ  ಮೂಡುವ ಅಗತ್ಯವಿದೆ. ಪರಿಸರ ಚೆನ್ನಾಗಿ ಇದ್ದರೆ  ನಾವು ಆರೋಗ್ಯವಾಗಿರ ಬಹುದು.  ಪರಿಸರ ಬೇರೆಯಲ್ಲ, ನಾವು ಬೇರೆಯಲ್ಲ ಎಂಬ ಸೂಕ್ಷ್ಮ ವಿಷಯ ಜನರಿಗೆ ಅರ್ಥವಾದ ದಿನವೇ ನಿಜವಾದ  ಪರಿಸರ ದಿನ . ಆಗಲೇ ವಿಶ್ವ ಪರಿಸರ ದಿನದ ಆಚರಣೆಗೊಂದು ಮಹತ್ವ. ದೊರೆಯುವುದು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!

ದೇಶದ 651 ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ಹೆಚ್ಚು ದುರ್ಬಲವೆಂದು…

20 hours ago

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!

26.03.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ರಾಜ್ಯದ ವಿವಿಧ…

2 days ago

ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!

ರಾಜ್ಯದ ಹಲವು ಭಾಗಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆ ಮುಂದುವರಿದಿದೆ. ಮಾರ್ಚ್‌…

3 days ago

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿದೆ. ಮಾನವ–ಆನೆ…

3 days ago

ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು INSPIRE Award ಗೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ…

3 days ago

ನೆಮ್ಮದಿಗಾಗಿ ಬದುಕಿ; ಹಣ-ಅಧಿಕಾರಕ್ಕಾಗಿ ಅಲ್ಲ

ನೆಮ್ಮದಿಗಾಗಿ ಬದುಕಬೇಕು, ಹಣ-ಅಧಿಕಾರಕ್ಕಾಗಿ ಅಲ್ಲ ಎಂದು ರಾಮಚಂದ್ರಾಪುರ ಶ್ರೀಗಳು ಕರೆ ನೀಡಿದರು. ಸಂನ್ಯಾಸ…

3 days ago