Advertisement
ಅಂಕಣ

ವಿಶ್ವ ಪರಿಸರ ದಿನಕ್ಕೊಂದು ನಮನ

Share

ಶಾಲಾ ಬಾಲಕನೊಬ್ಬ ಮನೆಯಿಂದ ಹೊರಡುವಾಗ ಎರಡು ಬಾಟಲ್ ನೀರು ಹಿಡಿದುಕೊಂಡು ಹೊರಡುತ್ತಿದ್ದ. ಅಮ್ಮನಿಗೆ ಕುತೂಹಲ. ಮಗ ಯಾಕೆ ಎರಡು ಬಾಟಲ್ ಗಳನ್ನು ಹಿಡಿದುಕೊಂಡು  ಹೋಗುತ್ತಾನೆ ? ಅಮ್ಮ ಹಿಂಬಾಲಿಸಿ ಹೋದಳು. ಶಾಲೆಯ ದಾರಿಯ ಪಕ್ಕದಲ್ಲಿ ಒಂದು ಗಿಡಕ್ಕೆ ತನ್ನ ಒಂದು ಬಾಟಲಿಯ ನೀರುಣಿಸುವುದನ್ನು  ಅಮ್ಮ  ಕಂಡಳು. ಅಮ್ಮನಿಗೆ ಎಲ್ಲಾ ಅರ್ಥವಾಯಿತು. ಮಗನ ಬಗ್ಗೆ ಹೆಮ್ಮೆಯೆನಿಸಿತು. 

Advertisement
Advertisement
ಈ ಘಟನೆಯನ್ನು ನಮ್ಮ ಪತ್ರಿಕೋದ್ಯಮ ವಿಭಾಗದ ಪ್ರಥಮ ತರಗತಿಯಲ್ಲಿ ಉಪನ್ಯಾಸಕರಾದ ಭಾಸ್ಕರ ಹೆಗಡೆಯವರು ಹೇಳಿದರು. ಹುಡುಗನ ಈ ವರ್ತನೆ ಯನ್ನು ದಿನನಿತ್ಯ ಅವರು ಗಮನಿಸುತ್ತಿದ್ದರು. ನೀರು ಹಾಕುವುದು ಮಾತ್ರವಲ್ಲದೆ ಗಿಡದ ಸುತ್ತಲಿನ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛವಾಗಿರುವಂತೆ ಕಾಳಜಿ ವಹಿಸುತ್ತಿದ್ದ ಹುಡುಗನ ವರ್ತನೆ ಅನುಕರಣೀಯ. ಹುಡುಗನ ಈ ಗುಣವನ್ನು, ಪ್ರತಿಯೊಂದು ತರಗತಿ ಯಲ್ಲಿಯೂ ಹೇಳಿ ಮಕ್ಕಳ ಮನಪರಿವರ್ತನೆಗೆ ಪ್ರಯತ್ನಿಸುತ್ತಿದ್ದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಗುರುಗಳು ಏನು ಹೇಳುತ್ತಾರೋ ಅದನ್ನೇ ಪಾಲಿಸುತ್ತಾರೆ. ಅಲ್ಲಿ ಹೇಳುವ  ವಿಷಯವನ್ನೇ ಮಕ್ಕಳು ನಂಬುವುದು,      ಒಪ್ಪುವುದು. ಮನೆಯ ಹಿರಿಯರು ಹೇಳಿದ ಎಷ್ಟೋ ವಿಷಯಗಳನ್ನು ರೂಡಿಸಿ ಕೊಳ್ಳದ ಮಕ್ಕಳು ಗುರು ಗಳು ಹೇಳಿದ ಕೂಡಲೇ ಮಾಡಿಬಿಡುತ್ತಾರೆ.  ಪರಿಸರದ  ಕುರಿತು ಬಾಲ್ಯದಲ್ಲಿ ಕೇಳಿದ ಮಾತುಗಳು ನೋಡಿದ ಚಿತ್ರಗಳು ಗಾಢವಾದ ಪರಿಣಾಮ ಬೀರುತ್ತವೆ. ಹಾಗಾಗಿ  ಒಳ್ಳೆಯ ಅಧ್ಯಾಪಕರು ಶಾಲೆಗಳಲ್ಲಿ ಇದ್ದರೆ ಅದೇ ಮಕ್ಕಳ ,ಪೋಷಕರ ಪುಣ್ಯ.
ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯ ಕ್ರಮಗಳು ಎಲ್ಲೆಡೆಯೂ ನಡೆಯುತ್ತಿದೆ.ಈ ಸಂಬಂಧ ಹೆಚ್ಚಿನ ಕಾಳಜಿ ಜನರಲ್ಲಿ  ಮೂಡುವ ಅಗತ್ಯವಿದೆ. ಪರಿಸರ ಚೆನ್ನಾಗಿ ಇದ್ದರೆ  ನಾವು ಆರೋಗ್ಯವಾಗಿರ ಬಹುದು.  ಪರಿಸರ ಬೇರೆಯಲ್ಲ, ನಾವು ಬೇರೆಯಲ್ಲ ಎಂಬ ಸೂಕ್ಷ್ಮ ವಿಷಯ ಜನರಿಗೆ ಅರ್ಥವಾದ ದಿನವೇ ನಿಜವಾದ  ಪರಿಸರ ದಿನ . ಆಗಲೇ ವಿಶ್ವ ಪರಿಸರ ದಿನದ ಆಚರಣೆಗೊಂದು ಮಹತ್ವ. ದೊರೆಯುವುದು.
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ದಿಢೀರಾಗಿ ಬೆಳೆಯುವುದು , ಫಸಲು ನೀಡುವುದು ಅವಸರವೇ ಅಪಘಾತಕ್ಕೆ ಕಾರಣ | ಬೇಗ ಫಸಲು ಬಂದ ಸಸ್ಯ ಬೇಗನೇ ಸಾಯುತ್ತದೆ |

ದಶಕಗಳ ಹಿಂದೆ ವಿಮಾ ಸಂಸ್ಥೆಯೊಂದು ಸಾಗವಾನಿ ಬೆಳೆಯಲು ರೈತರ ಷೇರು ಪಡೆದುಕೊಂಡು ಹತ್ತೊ…

3 hours ago

ಮಾವು ಮಾಂತ್ರಿಕ ಹಾಗೂ ಸುಬ್ರಾಯ ಭಟ್ಟರ 200ಕ್ಕೂ ಹೆಚ್ಚು ನಾಡು ಮಾವು ಹಾಗೂ ಹಲಸು ತಳಿ ಸಂರಕ್ಷಣೆ

ನಾಡು ಮಾವು ಸಂರಕ್ಷಣೆ ಕೆಲಸದ ಮೊದಲ ದಿನವದು. ನವೆಂಬರ್ 2022. ಕಸಿ ಕಡ್ಡಿಗಳನ್ನು…

3 hours ago

ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |

ಭಾರತದಲ್ಲಿ(India) ಉರಿ ಬಿಸಿಲಿನ ತಾಪ(Heat) ಏರುತ್ತಿದ್ದರೆ ತಾಂಜೇನಿಯಾದಲ್ಲಿ (Tanzania) ಕಳೆದ ವಾರದಿಂದ ಭಾರೀ…

7 hours ago

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |

ಮಳೆ ಬರುವ ಕುರುಹೇ ಇಲ್ಲ. ಎಲ್ಲೆಲ್ಲೂ ಬಿಸಿಗಾಳಿಯ ಅಬ್ಬರ, ನೆತ್ತಿ ಸುಡುವ ಸೂರ್ಯ. ರಾಜ್ಯಾದ್ಯಂತ…

8 hours ago

ಹವಾಮಾನ ವೈಪರೀತ್ಯ | ಕೃಷಿ ಕಾರ್ಮಿಕರಿಗೆ ಈಗ ಬಿಸಿಗಾಳಿ ಸಂಕಷ್ಟ | ಕೃಷಿಗೂ ಸಮಸ್ಯೆ-ಕೃಷಿ ಬೆಳವಣಿಗೆ ಕುಂಠಿತ |

ತಾಪಮಾನ ಏರಿಕೆಯಿಂದ ಹಲವು ಕಡೆ ಸಮಸ್ಯೆಯಾಗುತ್ತಿದೆ. ಕೃಷಿ ನಷ್ಟದ ಜೊತೆಗೆ ಗ್ರಾಮೀಣ ಭಾಗದಲ್ಲಿ…

8 hours ago

ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |

ಮಳೆಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ ಪರ್ಜನ್ಯ ಜ‌ಪ ನೆರವೇರಿತು.

10 hours ago