Advertisement
ಅನುಕ್ರಮ

ವಿಶ್ವ ಪರಿಸರ ದಿನಕ್ಕೊಂದು ನಮನ

Share

ಶಾಲಾ ಬಾಲಕನೊಬ್ಬ ಮನೆಯಿಂದ ಹೊರಡುವಾಗ ಎರಡು ಬಾಟಲ್ ನೀರು ಹಿಡಿದುಕೊಂಡು ಹೊರಡುತ್ತಿದ್ದ. ಅಮ್ಮನಿಗೆ ಕುತೂಹಲ. ಮಗ ಯಾಕೆ ಎರಡು ಬಾಟಲ್ ಗಳನ್ನು ಹಿಡಿದುಕೊಂಡು  ಹೋಗುತ್ತಾನೆ ? ಅಮ್ಮ ಹಿಂಬಾಲಿಸಿ ಹೋದಳು. ಶಾಲೆಯ ದಾರಿಯ ಪಕ್ಕದಲ್ಲಿ ಒಂದು ಗಿಡಕ್ಕೆ ತನ್ನ ಒಂದು ಬಾಟಲಿಯ ನೀರುಣಿಸುವುದನ್ನು  ಅಮ್ಮ  ಕಂಡಳು. ಅಮ್ಮನಿಗೆ ಎಲ್ಲಾ ಅರ್ಥವಾಯಿತು. ಮಗನ ಬಗ್ಗೆ ಹೆಮ್ಮೆಯೆನಿಸಿತು. 

ಈ ಘಟನೆಯನ್ನು ನಮ್ಮ ಪತ್ರಿಕೋದ್ಯಮ ವಿಭಾಗದ ಪ್ರಥಮ ತರಗತಿಯಲ್ಲಿ ಉಪನ್ಯಾಸಕರಾದ ಭಾಸ್ಕರ ಹೆಗಡೆಯವರು ಹೇಳಿದರು. ಹುಡುಗನ ಈ ವರ್ತನೆ ಯನ್ನು ದಿನನಿತ್ಯ ಅವರು ಗಮನಿಸುತ್ತಿದ್ದರು. ನೀರು ಹಾಕುವುದು ಮಾತ್ರವಲ್ಲದೆ ಗಿಡದ ಸುತ್ತಲಿನ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛವಾಗಿರುವಂತೆ ಕಾಳಜಿ ವಹಿಸುತ್ತಿದ್ದ ಹುಡುಗನ ವರ್ತನೆ ಅನುಕರಣೀಯ. ಹುಡುಗನ ಈ ಗುಣವನ್ನು, ಪ್ರತಿಯೊಂದು ತರಗತಿ ಯಲ್ಲಿಯೂ ಹೇಳಿ ಮಕ್ಕಳ ಮನಪರಿವರ್ತನೆಗೆ ಪ್ರಯತ್ನಿಸುತ್ತಿದ್ದರು.
ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಗುರುಗಳು ಏನು ಹೇಳುತ್ತಾರೋ ಅದನ್ನೇ ಪಾಲಿಸುತ್ತಾರೆ. ಅಲ್ಲಿ ಹೇಳುವ  ವಿಷಯವನ್ನೇ ಮಕ್ಕಳು ನಂಬುವುದು,      ಒಪ್ಪುವುದು. ಮನೆಯ ಹಿರಿಯರು ಹೇಳಿದ ಎಷ್ಟೋ ವಿಷಯಗಳನ್ನು ರೂಡಿಸಿ ಕೊಳ್ಳದ ಮಕ್ಕಳು ಗುರು ಗಳು ಹೇಳಿದ ಕೂಡಲೇ ಮಾಡಿಬಿಡುತ್ತಾರೆ.  ಪರಿಸರದ  ಕುರಿತು ಬಾಲ್ಯದಲ್ಲಿ ಕೇಳಿದ ಮಾತುಗಳು ನೋಡಿದ ಚಿತ್ರಗಳು ಗಾಢವಾದ ಪರಿಣಾಮ ಬೀರುತ್ತವೆ. ಹಾಗಾಗಿ  ಒಳ್ಳೆಯ ಅಧ್ಯಾಪಕರು ಶಾಲೆಗಳಲ್ಲಿ ಇದ್ದರೆ ಅದೇ ಮಕ್ಕಳ ,ಪೋಷಕರ ಪುಣ್ಯ.
ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಕಾರ್ಯ ಕ್ರಮಗಳು ಎಲ್ಲೆಡೆಯೂ ನಡೆಯುತ್ತಿದೆ.ಈ ಸಂಬಂಧ ಹೆಚ್ಚಿನ ಕಾಳಜಿ ಜನರಲ್ಲಿ  ಮೂಡುವ ಅಗತ್ಯವಿದೆ. ಪರಿಸರ ಚೆನ್ನಾಗಿ ಇದ್ದರೆ  ನಾವು ಆರೋಗ್ಯವಾಗಿರ ಬಹುದು.  ಪರಿಸರ ಬೇರೆಯಲ್ಲ, ನಾವು ಬೇರೆಯಲ್ಲ ಎಂಬ ಸೂಕ್ಷ್ಮ ವಿಷಯ ಜನರಿಗೆ ಅರ್ಥವಾದ ದಿನವೇ ನಿಜವಾದ  ಪರಿಸರ ದಿನ . ಆಗಲೇ ವಿಶ್ವ ಪರಿಸರ ದಿನದ ಆಚರಣೆಗೊಂದು ಮಹತ್ವ. ದೊರೆಯುವುದು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

2 hours ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

3 hours ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

3 hours ago

ಗೋಮಯದಿಂದ ಗಣೇಶನ ಮೂರ್ತಿ – ದೇಶದಾದ್ಯಂತ ಸಾವಿರಾರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ

ತಂದೆಯ ನೆನಪಿಗಾಗಿ ಇಂದೋರ್‌ನ ವ್ಯಕ್ತಿಯೊಬ್ಬರು ಗೋಮಯದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ…

7 hours ago

ಹವಾಮಾನ ವರದಿ | 17-09-2026 | ಕರ್ನಾಟಕದಲ್ಲಿ ಇಂದಿನಿಂದ ಮಳೆ ಚುರುಕು ಸಾಧ್ಯತೆ

ಸೆ.18ರಿಂದ ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಚುರುಕಾಗುವ ಸೂಚನೆ ಇದ್ದು, ಸೆ.19ರಿಂದ ಉತ್ತರ…

2 days ago

ಬರಪೀಡಿತ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿಗೆ 12 ತಿಂಗಳ ವಿಸ್ತರಣೆ

ಬರಪೀಡಿತ ಎಂದು ಘೋಷಿಸಿರುವ ರಾಜ್ಯದ 101 ತಾಲೂಕುಗಳ ರೈತರಿಗೆ ಸಾಲ ಮರುಪಾವತಿ ಅವಧಿಯನ್ನು…

2 days ago