Advertisement
MIRROR FOCUS

ಶಾಲೆಯಲ್ಲಿ ನವಾನ್ನ ಭೋಜನ…! : ಭತ್ತದ ಬೇಸಾಯದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ

Share

ಬೆಳ್ಳಾರೆ : ಸುಳ್ಯ ತಾಲೂಕಿನ ಬಾಳಿಲದ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ “ನವಾನ್ನ” ಭೋಜನದ ವಿಶೇಷ ಆಚರಣೆ ಹಾಗೂ ಭತ್ತದ ಬೇಸಾಯದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ಶಾಲೆಯ ಅಂಗಳದಲ್ಲಿ ಭತ್ತದ ಬೇಸಾಯ ಮಾಡಿ ಮಕ್ಕಳಿಗೆ ಅನ್ನದ ಹಿಂದಿನ ಶ್ರಮವನ್ನು ತಿಳಿಸಿ  ಹಿರಿಯರು ಆಚರಿಸುತ್ತಿದ್ದ “ನವಾನ್ನ”ದ ಸವಿ ಊಟವನ್ನು ಮಕ್ಕಳಿಗೆ ಉಣಬಡಿಸಿ ಹಿಂದಿನ ಸಂಸ್ಕೃತಿಯನ್ನು  ಅನಾವರಣಗೊಳಿಸಲಾಯಿತು. ಜೊತೆಗೆ ಮಕ್ಕಳಿಗೆ ಅನ್ನದ ಹಿಂದಿನ ಶ್ರಮವನ್ನು  ಪರಿಚಯಿಸಲಾಯಿತು.

 

“ನವಾನ್ನ ”  ಆಚರಣೆ ಹಾಗು ಭತ್ತ ಬೇಸಾಯದ ಮಹತ್ವ ಬಗ್ಗೆ ಡಾ.ಸುಂದರ ಕೇನಾಜೆ  ಮಾತನಾಡಿ, ಮಕ್ಕಳು ಸ್ವಾಲಂಬಿಗಳಾಗೋದನ್ನು ಕಲಿಸಬೇಕಾಗಿದೆ. ಬರಿಯ ತಿನ್ನುವ ಅಕ್ಕಿಮಾತ್ರ ಅಲ್ಲ, ಅದು ಒಂದು ಬದುಕನ್ನು ಕಟ್ಟಿದಂತಹ, ಒಂದು ಸಂಸ್ಕೃತಿಯನ್ನು ಉಳಿಸಿದಂತಹ ಇಡೀ ತುಳುವರ ಪರಿಕಲ್ಪನೆಗಳಲ್ಲಿ ಅವರನ್ನು ಬೆಳೆಸಿದ ವ್ಯವಸ್ಥೆ. ಬೇಸಾಯದ ಹಿನ್ನಲೆಯಲ್ಲಿ ತುಳು ಸಂಸ್ಕೃತಿ ನಿಂತಿದೆ.  ಸಂಸಾರದವರೆಲ್ಲ ಕೂಡಿ ಮಾಡುವ ನವಾನ್ನದ ಆಚರಣೆ ಬಂಧುತ್ವದ ಕಲ್ಪನೆ ಎಲ್ಲರನ್ನೂ ಒಂದುಗೂಡಿಸುವಂತಹದ್ದು. ಬಂಧುತ್ವ ಎಳೆಗಳು ನಮ್ಮಲ್ಲಿ ಬಹಳ ಮುಖ್ಯವಾಗಿ ಮಾತೃಪ್ರಧಾನವಾದ ವ್ಯವಸ್ಥೆ. ತಾಯಿಯನ್ನು ಮೂಲವಾಗಿಟ್ಟ ವ್ಯವಸ್ಥೆ ತುಳುವರದ್ದು. ಬಂಧುತ್ವದ ಸಂಕೇತವಾದ ಅಕ್ಕಿ ಬಹಳ ಮಹತ್ವದ್ದು. ಅದು ಸಮೃದ್ಧಿಯ ಸಂಕೇತ. ಪ್ರಕೃತಿಯ ಅನುಸಂಧಾನವನ್ನು ಕೂಡಾ ನಾವು ಬೇಸಾಯದಲ್ಲಿ ಕಾಣಬಹುದು ಎಂದರು.

ತಾಲೂಕು ಪಂಚಾಯತ್  ಉಪಾಧ್ಯಕ್ಷರಾದ ಶುಭದಾ ಎಸ್ ರೈ ಶುಭ ಹಾರೈಸಿದರು.

ಗ್ರಾಮಪಂಚಾಯತ್ ಬಾಳಿಲದ ಸದಸ್ಯರಾದ ರವೀಂದ್ರ ರೈ ಟಪಾಲುಕಟ್ಟೆ, ಎಸ್ ಡಿ ಯಂ ಸಿ ಯ ಉಪಾಧ್ಯಕ್ಷರಾದ ಭುವನೇಶ್ವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಕ್ಕಳು ರೈತ ಗೀತೆ ಹಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸುಬ್ಬಯ್ಯ ವೈ ಬಿ ಸ್ವಾಗತಿಸಿ, ಎಸ್ ಡಿ ಯಂ ಸಿ ಅಧ್ಯಕ್ಷರಾದ ಜಾಹ್ನವಿ ಕಾಂಚೋಡು ವಂದಿಸಿದರು. ಶಿಕ್ಷಕರಾದ ಶಿವಪ್ರಸಾದ್ ಜಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

11 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

20 hours ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

21 hours ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

1 day ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

1 day ago