MIRROR FOCUS

ಶಿಕ್ಷಣಕ್ಕೆ ಕೂಡಿಟ್ಟ ಹಣ ಬಡವರಿಗೆ ನೀಡಿದ ಸೆಲೂನ್ ಮಾಲಕರ ಪುತ್ರಿಗೆ ಜಾಗತಿಕ ಮನ್ನಣೆ | ಈಗ “ಬಡವರ ಸದ್ಭಾವನಾ ರಾಯಭಾರಿ”ಯಾಗಿ ನೇಮಕ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಲಾಕ್ಡೌನ್ ನಡುವೆ ಧೈರ್ಯ ತುಂಬುವ, ಭರವಸೆ ನೀಡುವ ಸಂಗತಿ ಇದು. ದೇಶದಲ್ಲಿ ಇಂತಹ ನೂರಾರು ಸಂಗತಿಗಳು ನಡೆದಿದೆ. ಇದುವರೆಗೂ ಕೊರೊನಾ ವೈರಸ್ ಭಯವೇ ತುಂಬಿತೇ ಹೊರತು ಜಾಗೃತಿ ಇನ್ನೂ ಸರಿಯಾಗಿ ಮೂಡಿಲ್ಲ. ಈ ನಡುವೆಯೇ ಅನೇಕ ಧೈರ್ಯ ತುಂಬುವ ಸಂಗತಿಗಳು ನಡೆದು ಹೋದವು. ಅದಕ್ಕೀಗ ಮನ್ನಣೆ ಸಿಕ್ಕಿದೆ……

Advertisement

ಮಧುರೈ: ಶಿಕ್ಷಣಕ್ಕಾಗಿ ತಂದೆ ಕೂಡಿಟ್ಟಿದ್ದ 5 ಲಕ್ಷ ರೂಪಾಯಿ ಹಣವನ್ನು  ಲಾಕ್ಡೌನ್ ಸಮಯದಲ್ಲಿ  ಬಡವರಿಗೆ ನೀಡುವಂತೆ ತಂದೆಗೆ ಸೂಚಿಸಿ ಅನುಷ್ಠಾನ ಮಾಡಿದ ತಮಿಳುನಾಡಿನ ಮಧುರೈ ನಿವಾಸಿ ಸೆಲೂನ್ ಮಾಲಕ  ಮೋಹನ್ ಅವರ ಪುತ್ರಿ 13 ವರ್ಷದ ನೇತ್ರಾ ಎಂಬಾಕೆಯನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಶಾಂತಿ ಸಂಘಟನೆ (UNADAP) “ಬಡವರ ಸದ್ಭಾವನಾ ರಾಯಭಾರಿ“ಯಾಗಿ ನೇಮಕ ಮಾಡಲಾಗಿದೆ.

ತಮಿಳುನಾಡಿನ ಮಧುರೈಯಲ್ಲಿರುವ 13 ವರ್ಷದ ನೇತ್ರಾ, ಕೊರೊನಾ ವೈರಸ್ ಸಂದರ್ಭದಲ್ಲಿ ಬಡವರಿಗೆ 5 ಲಕ್ಷ ರೂಪಾಯಿಗಳನ್ನು ನೀಡುವಂತೆ ತನ್ನ ತಂದೆಗೆ ಮನವಿ ಮಾಡಿದ್ದಳು. ನೇತ್ರಾಳ ತಂದೆ ಸೆಲೂನ್ ನಡೆಸುತ್ತಿದ್ದು ಮಗಳ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹಿಸಿದ್ದರು. ಕೊರೊನಾ ಲಾಕ್ಡೌನ್ ಸಂದರ್ಭ ಬಡವರ ಸಂಕಷ್ಟ ನೋಡಿದ ನೇತ್ರಾ ನಾಗರಿಕ ಸೇವೆ ಮಾಡಲು ತನ್ನ ವಿದ್ಯಾಭ್ಯಾಸಕ್ಕಾಗಿ ಸಂಗ್ರಹಿಸಿದ್ದ ಹಣವನ್ನು  ನೀಡುವಂತೆ ತಂದೆಯಲ್ಲಿ  ಮನವಿ ಮಾಡಿದ್ದಳು. ಇದಕ್ಕೆ ಸ್ಪಂದಿಸಿದ ಮನೆಯವರು ಮಗಳ ಬೇಡಿಕೆಯನ್ನು  ಈಡೇರಿಸಲು ಮೋಹನ್ ಅವರು ತಮ್ಮ ಮಗಳ ಶಿಕ್ಷಣಕ್ಕಾಗಿ ಉಳಿಸಿದ ಹಣವನ್ನು ಬಳಸಿಕೊಂಡು ಲಾಕ್ಡೌನ್ ಮಧ್ಯೆ 600 ಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯ  ವಸ್ತುಗಳನ್ನು ಒದಗಿಸಿದರು. ಇದರ ಫಲವಾಗಿ ಇದೀಗ ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಶಾಂತಿ ಸಂಘಟನೆ (UNADAP) “ಬಡವರ ಸದ್ಭಾವನಾ ರಾಯಭಾರಿ“ಯಾಗಿ ನೇತ್ರಾಳನ್ನು  ನೇಮಕ ಮಾಡಿದೆ.

ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆಯ (ಯುಎನ್) ಸಮಾವೇಶಗಳಲ್ಲಿ ಮತ್ತು ಜಿನೀವಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ   ಮಾತನಾಡಲು ನೇತ್ರಾಗೆ ಅವಕಾಶ ನೀಡಲಾಗುವುದು ಎಂದು ಯುಎನ್‌ಎಡಿಎಪಿ ಘೋಷಣೆ ಮಾಡಿದೆ.  ಇದೇ ಸಂದರ್ಭ ವಿಶ್ವ ನಾಯಕರು, ಶಿಕ್ಷಣ ತಜ್ಞರು, ರಾಜಕಾರಣಿಗಳು ಮತ್ತು ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಮಾತನಾಡಲು ಆಕೆಗೆ ಅವಕಾಶ ಮತ್ತು ಜವಾಬ್ದಾರಿಯನ್ನು ನೀಡುತ್ತದೆ ಎಂದು ಸಂಸ್ಥೆ ಹೇಳಿದೆ, ಇನ್ನಷ್ಟು ಬಡವರನ್ನು ತಲುಪಲು ಸಹಕಾರ ಮಾಡಲಾಗುತ್ತದೆ ಎಂದೂ ಹೇಳಿದೆ.

ಕೊರೊನಾ ಲಾಕ್ಡೌನ್ ಸಂದರ್ಭ ಎರಡು ತಿಂಗಳುಗಳ ಕಾಲ ಸೆಲೂನ್ ಮುಚ್ಚಲಾಗಿತ್ತು, ಯಾವುದೇ ಆದಾಯ ಇರಲಿಲ್ಲ. ಹೀಗಿದ್ದರೂ ಈ ನಿಸ್ವಾರ್ಥ ಸೇವೆ ಮಾಡಿರುವ ಇವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು “ಮನ್ ಕಿ ಬಾತ್”  ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು.

ಇದೀಗ 13 ವರ್ಷದ ನೇತ್ರಾ ಸೇವೆಯ ಮೂಲಕ  ಗ್ರಾಮ ಮಟ್ಟದಿಂದ ದೇಶ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟಕ್ಕೆ ಏರಿದ್ದಾಳೆ.

 

 
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

20 hours ago

ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649

21 hours ago

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ

ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

1 day ago

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

2 days ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

2 days ago

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 days ago