ಧರ್ಮಸ್ಥಳ : ಸಮಗ್ರ ಸೃಷ್ಟಿಯೇ ಚಲನಶೀಲವಾಗಿದ್ದು ಚಲನೆಯ ಸಮಗ್ರ ತತ್ವ ಬಳಸಿ ಶ್ರೀಚಕ್ರ ರಚಿಸಲಾಗುತ್ತದೆ. ಪ್ರಕೃತಿಯಲ್ಲಿರುವ ಪಂಚಭೂತಗಳಲ್ಲಿಯೂ ದೇವರನ್ನು ಕಾಣುವ ನಾವು ಸಾಮಾನ್ಯವಾಗಿ ವಿಗ್ರಹ, ಮಂಡಲ ಮತ್ತು ಅಗ್ನಿ ಮೂಲಕ ಭಗವಂತನ ಆರಾಧನೆ ಮಾಡುತ್ತೇವೆ ಎಂದು ಕಾಸರಗೋಡಿನ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಹೇಳಿದರು.
ಅವರು ಶನಿವಾರ ರಾತ್ರಿ ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಶ್ರೀಚಕ್ರದ ಮಹತ್ವದ ಬಗ್ಯೆ ಉಪನ್ಯಾಸ ನೀಡಿದರು. ಭಗವಂತನ ಆರಾಧನೆಗೆ ಮಂಡಲಗಳನ್ನು ರಚಿಸುತ್ತಾರೆ. ಆರಾಧನೆ ಮತ್ತು ರಕ್ಷಣೆಗಾಗಿ ಯಂತ್ರಗಳನ್ನು ಬಳಸುತ್ತಾರೆ. ಶ್ರೀಚಕ್ರದಲ್ಲಿ ಬೇರೆ ಬೇರೆ ವಿನ್ಯಾಸಗಳಿವೆ.ಶ್ರೀಚಕ್ರ ವೃತ್ತಾಕಾರದ ರಚನೆಯಿಂದ ಕೂಡಿದ್ದು ಒಂಬತ್ತು ಆವರಣಗಳಿರುತ್ತವೆ. ಶ್ರೀಚಕ್ರ ಆರಾಧನೆ ಅತ್ಯಂತ ಶ್ರೇಷ್ಠವಾಗಿದ್ದು ಬಿಂದುವಿನಿಂದ ಆರಂಭಿಸಿ ಶ್ರೀಚಕ್ರ ರಚನೆ ಮಾಡುತ್ತಾರೆ ಎಂದು ಹೇಳಿ ಶ್ರೀಚಕ್ರ ಆರಾಧನೆಯ ಮಹತ್ವವನ್ನು ವಿವರಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು.
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…
ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…
ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…
ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…