Advertisement
ಸುದ್ದಿಗಳು

ಶ್ರೀ ಚೆನ್ನಕೇಶವ ಪ್ರವಾಸಿ ತಂಡದಿಂದ ಕಾಶಿ ಕ್ಷೇತ್ರಯಾತ್ರೆ

Share

ಸುಳ್ಯ : ಶ್ರೀ ಚೆನ್ನಕೇಶವ ಪ್ರವಾಸಿ ತಂಡದಿಂದ ನಿವೃತ್ತ ಕ್ಷೇತ್ರಾಭಿವೃದ್ಧಿ ಅಧಿಕಾರಿ ಎಂ.ಮೀನಾಕ್ಷಿ ಗೌಡ ನೇತೃತ್ವದಲ್ಲಿ 23 ಮಂದಿ ಕಾಶಿ, ಪ್ರಯಾಗ, ಗಯ, ಬೋದಗಯಾ ಇನ್ನಿತರ ಸ್ಥಳಗಳಿಗೆ ಪ್ರವಾಸ ನಡೆಸಿತು.

Advertisement
Advertisement
Advertisement
Advertisement

ಮಂಗಳೂರಿನಿಂದ , ಮುಂಬೈ ಮೂಲಕ ವಾರಣಾಸಿಗೆ ವಿಮಾನ ಪ್ರಯಾಣ ತೆರಳಿ ಅಲ್ಲಿ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿತು. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಕಾಲಬೈರವೇಶ್ವರ , ಕಾಶಿ ವಿಶ್ವನಾಥ ದೇವಸ್ಥಾನ, ಕಾಶಿ ವಿಶಾಲಾಕ್ಷಿ, ಹರಿಶ್ಚಂದ್ರ ಘಾಟ್, ಬಿಂದು ಮಾಧವ ದೇವಸ್ಥಾನ, ತುಳಸಿ ಮಾನಸ ಮಂದಿರ, ಸಂಕಟ ಮೋಚನ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಬಳಿಕ ಗಂಗಾರತಿ ವೀಕ್ಷಿಸಲಾಯಿತು.

Advertisement

ಮರುದಿನ ಪ್ರಯಾಗರಾಜ್ (ಅಲಹಾಬಾದ್)ಗೆ ತೆರಳಿ ಅಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಬಡಾ ಹನುಮಾನ್ ದೇವರ ದರ್ಶನ ಮಾಡಲಾಯಿತು.
ಮೂರನೇ ದಿನ ಬಿಹಾರದ ಬುದ್ದಗಯಾಕ್ಕೆ ತೆರಳಿ ಬುದ್ದ ನಿಗೆ ಜ್ಞಾನೋದಯ ಆದ ಪ್ರಸಿದ್ಧ ಸ್ಥಳ ಮಹಾಬೋದಿ ದೇವಸ್ಥಾನ, ಅಶೋಕ ಸ್ತಂಭ, ಬೋದಿವೃಕ್ಷ ಮೊದಲಾದ ಸ್ಥಳವನ್ನು ಸಂದರ್ಶಿಸಲಾಯಿತು. ಅಲ್ಲಿಯೇ ಬಳಿಯಲ್ಲಿದ್ದ 25 ಮೀಟರ್ ಎತ್ತರದ ಮಹಾ ಬುದ್ದನ ವಿಗ್ರಹವನ್ನು ವೀಕ್ಷಿಸಲಾಯಿತು.

ನಾಲ್ಕನೇ ದಿನ ಗಯಾಕ್ಕೆ ತೆರಳಿ ಅಲ್ಲಿ ವಿಷ್ಣುಪಾದ ದೇವಸ್ಥಾನ, ಅಕ್ಷಯ ವಟ, ಸರಯೂ ನದಿಯನ್ನು ದರ್ಶಿಸಲಾಯಿತು. ಗಯಾದಿಂದ ಕಲ್ಕತ್ತಾ ಮತ್ತು ಅಲ್ಲಿಂದ ಬೆಂಗಳೂರಿಗೆ ವಾಯುಯಾನ ಮೂಲಕ ತಲುಪಿ ಆನಂತರ ಬಸ್ಸಿನ ಮೂಲಕ ಸುಳ್ಯಕ್ಕೆ ಹಿಂತಿರುಗಲಾಯಿತು.

Advertisement

ಪ್ರವಾಸಿ ತಂಡದಲ್ಲಿ ಎಂ.ಮೀನಾಕ್ಷಿ ಗೌಡ, ಶೋಭಾ ಚಿದಾನಂದ, ಡಾ|ಹರಪ್ರಸಾದ್ ತುದಿಯಡ್ಕ, ಶಶಿಕಲಾ ಹರಪ್ರಸಾದ್, ಡಾ|ರೇವತಿ ನಂದನ್, ಕೆ.ಬಿ.ರಾಮಚಂದ್ರ, ಭವಾನಿ, ರಘುರಾಮ ಕೆ,ಬಿ., ಪದ್ಮಾವತಿ, ಕುಶಾಲಪ್ಪ ಗೌಡ ಕಾರಿಂಜ, ಪುಷ್ಪಾವತಿ, ದಿನಕರ ಕೆ.ಬಿ., ಶೀಲಾ ದಿನಕರ್, ಎಂ.ವಿ.ಗಿರಿಜಾ, ವೆಂಕಟ್ರಮಣ ಗೌಡ ಹುಲಿಮನೆ, ರಾಜಮ್ಮ, ಡಾ|ವೀಣಾ ವಿಜಯಕುಮಾರ್ ಮೈಸೂರು, ಗೀತಾ ಬೆಂಗಳೂರು, ಅರುಣ ಬೆಂಗಳೂರು, ದಾಮೋದರ ಕುಂದಲ್ಪಾಡಿ, ಲೀಲಾ ದಾಮೋದರ್, ಗಂಗಾಧರ ಮಟ್ಟಿ, ಚಿತ್ರಾ ಮಟ್ಟಿ ಪಾಲ್ಗೊಂಡಿದ್ದರು.
ಕಳೆದ ವರ್ಷ ಈ ತಂಡ ವೈಷ್ಣೋವದೇವಿ, ಅಮೃತಸರ್, ವಾಘಾಬಾರ್ಡರ್ ಪ್ರವಾಸ ಕೈಗೊಂಡಿತ್ತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

17 hours ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

17 hours ago

ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಜಾರಿಗೆ ರಾಜ್ಯ ರೈತ ಸಂಘಟನೆಗಳ ಮನವಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…

17 hours ago

ಗ್ರೇಟರ್ ಹೆಸರಗಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ಶುದ್ಧ ಪರಿಸರಕ್ಕೆ ಸಹಕಾರಿ | ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆ

ಬೆಂಗಳೂರಿನ ಯಲಹಂಕ ತಾಲ್ಲೂಕಿನ ಒಟ್ಟು 5678 ಎಕರೆ ಗುಂಟೆ ಪ್ರದೇಶವನ್ನು ಪರಿಸರ ಸಂರಕ್ಷಣೆ…

17 hours ago