ಸುದ್ದಿಗಳು

ಶ್ರೀ ಚೆನ್ನಕೇಶವ ಪ್ರವಾಸಿ ತಂಡದಿಂದ ಕಾಶಿ ಕ್ಷೇತ್ರಯಾತ್ರೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ : ಶ್ರೀ ಚೆನ್ನಕೇಶವ ಪ್ರವಾಸಿ ತಂಡದಿಂದ ನಿವೃತ್ತ ಕ್ಷೇತ್ರಾಭಿವೃದ್ಧಿ ಅಧಿಕಾರಿ ಎಂ.ಮೀನಾಕ್ಷಿ ಗೌಡ ನೇತೃತ್ವದಲ್ಲಿ 23 ಮಂದಿ ಕಾಶಿ, ಪ್ರಯಾಗ, ಗಯ, ಬೋದಗಯಾ ಇನ್ನಿತರ ಸ್ಥಳಗಳಿಗೆ ಪ್ರವಾಸ ನಡೆಸಿತು.

Advertisement
Advertisement

ಮಂಗಳೂರಿನಿಂದ , ಮುಂಬೈ ಮೂಲಕ ವಾರಣಾಸಿಗೆ ವಿಮಾನ ಪ್ರಯಾಣ ತೆರಳಿ ಅಲ್ಲಿ ವಿವಿಧ ಕ್ಷೇತ್ರಗಳನ್ನು ಸಂದರ್ಶಿಸಿತು. ಗಂಗಾ ನದಿಯಲ್ಲಿ ಸ್ನಾನ ಮಾಡಿದ ನಂತರ ಕಾಲಬೈರವೇಶ್ವರ , ಕಾಶಿ ವಿಶ್ವನಾಥ ದೇವಸ್ಥಾನ, ಕಾಶಿ ವಿಶಾಲಾಕ್ಷಿ, ಹರಿಶ್ಚಂದ್ರ ಘಾಟ್, ಬಿಂದು ಮಾಧವ ದೇವಸ್ಥಾನ, ತುಳಸಿ ಮಾನಸ ಮಂದಿರ, ಸಂಕಟ ಮೋಚನ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಬಳಿಕ ಗಂಗಾರತಿ ವೀಕ್ಷಿಸಲಾಯಿತು.

ಮರುದಿನ ಪ್ರಯಾಗರಾಜ್ (ಅಲಹಾಬಾದ್)ಗೆ ತೆರಳಿ ಅಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಬಡಾ ಹನುಮಾನ್ ದೇವರ ದರ್ಶನ ಮಾಡಲಾಯಿತು.
ಮೂರನೇ ದಿನ ಬಿಹಾರದ ಬುದ್ದಗಯಾಕ್ಕೆ ತೆರಳಿ ಬುದ್ದ ನಿಗೆ ಜ್ಞಾನೋದಯ ಆದ ಪ್ರಸಿದ್ಧ ಸ್ಥಳ ಮಹಾಬೋದಿ ದೇವಸ್ಥಾನ, ಅಶೋಕ ಸ್ತಂಭ, ಬೋದಿವೃಕ್ಷ ಮೊದಲಾದ ಸ್ಥಳವನ್ನು ಸಂದರ್ಶಿಸಲಾಯಿತು. ಅಲ್ಲಿಯೇ ಬಳಿಯಲ್ಲಿದ್ದ 25 ಮೀಟರ್ ಎತ್ತರದ ಮಹಾ ಬುದ್ದನ ವಿಗ್ರಹವನ್ನು ವೀಕ್ಷಿಸಲಾಯಿತು.

ನಾಲ್ಕನೇ ದಿನ ಗಯಾಕ್ಕೆ ತೆರಳಿ ಅಲ್ಲಿ ವಿಷ್ಣುಪಾದ ದೇವಸ್ಥಾನ, ಅಕ್ಷಯ ವಟ, ಸರಯೂ ನದಿಯನ್ನು ದರ್ಶಿಸಲಾಯಿತು. ಗಯಾದಿಂದ ಕಲ್ಕತ್ತಾ ಮತ್ತು ಅಲ್ಲಿಂದ ಬೆಂಗಳೂರಿಗೆ ವಾಯುಯಾನ ಮೂಲಕ ತಲುಪಿ ಆನಂತರ ಬಸ್ಸಿನ ಮೂಲಕ ಸುಳ್ಯಕ್ಕೆ ಹಿಂತಿರುಗಲಾಯಿತು.

ಪ್ರವಾಸಿ ತಂಡದಲ್ಲಿ ಎಂ.ಮೀನಾಕ್ಷಿ ಗೌಡ, ಶೋಭಾ ಚಿದಾನಂದ, ಡಾ|ಹರಪ್ರಸಾದ್ ತುದಿಯಡ್ಕ, ಶಶಿಕಲಾ ಹರಪ್ರಸಾದ್, ಡಾ|ರೇವತಿ ನಂದನ್, ಕೆ.ಬಿ.ರಾಮಚಂದ್ರ, ಭವಾನಿ, ರಘುರಾಮ ಕೆ,ಬಿ., ಪದ್ಮಾವತಿ, ಕುಶಾಲಪ್ಪ ಗೌಡ ಕಾರಿಂಜ, ಪುಷ್ಪಾವತಿ, ದಿನಕರ ಕೆ.ಬಿ., ಶೀಲಾ ದಿನಕರ್, ಎಂ.ವಿ.ಗಿರಿಜಾ, ವೆಂಕಟ್ರಮಣ ಗೌಡ ಹುಲಿಮನೆ, ರಾಜಮ್ಮ, ಡಾ|ವೀಣಾ ವಿಜಯಕುಮಾರ್ ಮೈಸೂರು, ಗೀತಾ ಬೆಂಗಳೂರು, ಅರುಣ ಬೆಂಗಳೂರು, ದಾಮೋದರ ಕುಂದಲ್ಪಾಡಿ, ಲೀಲಾ ದಾಮೋದರ್, ಗಂಗಾಧರ ಮಟ್ಟಿ, ಚಿತ್ರಾ ಮಟ್ಟಿ ಪಾಲ್ಗೊಂಡಿದ್ದರು.
ಕಳೆದ ವರ್ಷ ಈ ತಂಡ ವೈಷ್ಣೋವದೇವಿ, ಅಮೃತಸರ್, ವಾಘಾಬಾರ್ಡರ್ ಪ್ರವಾಸ ಕೈಗೊಂಡಿತ್ತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ರಾಜ್ಯದಲ್ಲಿ 15 ಬಗೆಯ ಔಷಧಗಳು, ಸೌಂದರ್ಯ ವರ್ಧಕಗಳ ಬಳಕೆಗೆ ನಿಷೇಧ

ರಾಜ್ಯದಲ್ಲಿ ಮಾರಾಟವಾಗುವ 15 ಬಗೆಯ ಔಷಧಗಳು ಹಾಗೂ ಸೌಂದರ್ಯ ವರ್ಧಕಗಳು ಪ್ರಾಮಾಣಿಕೃತ ಗುಣಮಟ್ಟದಲ್ಲಿ…

3 hours ago

ಬಾಹ್ಯಾಕಾಶ ಕೇಂದ್ರ ತಲುಪಿದ ಶುಭಾಂಶು ಶುಕ್ಲ | ಬಾಹ್ಯಾಕಾಶದಲ್ಲಿ ಧಾರವಾಡದ ಹೆಸರು, ಮೆಂತೆಕಾಳು

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಮ್-4 ಮಿಷನ್…

3 hours ago

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ | ಕೊಡಗಿನಲ್ಲಿ ವ್ಯಾಪಕ ಮಳೆ | ಕೆ ಆರ್ ಎಸ್ ಅಣೆಕಟ್ಟು ಭರ್ತಿ | ಶಿರಾಡಿ ಸಂಚಾರ ಸಂಕಷ್ಟ |

ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಕೊಡಗಿನಲ್ಲಿ…

3 hours ago

ಅಮ್ಮನ ಪ್ರೀತಿಗೆ ಎಣೆಯುಂಟೇ?

ಭಾರತದ ವೈಜ್ಞಾನಿಕ ಸಾಧನೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೇರಿಸುವ ಮಾನವ ಸಹಿತವಾದ ಗಗನಯಾನದ ನೌಕೆ…

3 hours ago

ಬೆಳಗಾವಿಯಲ್ಲಿ ಧಾರಾಕಾರ ಮಳೆ | ವ್ಯಾಪಕವಾಗಿ ಕೃಷಿಗೆ ಹಾನಿ

ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಮಹಾರಾಷ್ಟ್ರದ…

17 hours ago

ಪುತ್ತೂರಿನಲ್ಲಿ ಜೂನ್ 30 ರಿಂದ ಜುಲೈ 6 ರ ತನಕ ಯಕ್ಷಗಾನ ತಾಳಮದ್ದಳೆ ಸಪ್ತಾಹ | ‘ಕುರಿಯ ಪ್ರಶಸ್ತಿ’ ಪ್ರದಾನ

ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನ ಹಾಗೂ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ …

18 hours ago