Advertisement
ಸುದ್ದಿಗಳು

ಸಂಚಾರಿ ನಿಯಮವನ್ನ ಸರಿಯಾಗಿ ಪಾಲಿಸದಿದ್ದರೆ ಹೆಚ್ಚಿನ ದಂಡಕ್ಕೆ ಒಳಗಾಗುವಿರಿ :ಬೆಳ್ಳಾರೆ ಠಾಣೆಯಿಂದ ಮಾಹಿತಿ

Share

ಬೆಳ್ಳಾರೆ: ಪೋಲಿಸ್ ಇಲಾಖೆಯು ಸಾರ್ವಜನಿಕರಿಗೆ ಮಹತ್ವದ ಮಾಹಿತಿ  ನೀಡಿದೆ. ಇದನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಇಲಾಖೆಯು ಮಹತ್ವದ ಸಂದೇಶ ಹೊರಡಿಸಿದೆ.
ಠಾಣಾ ವ್ಯಾಪ್ತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ಹೊಸ ನಿಯಮಕ್ಕೆ ಅಂದರೆ ಕೇಂದ್ರ ಸರಕಾರ ಹೊಸದಾಗಿ ನಿಗದಿಪಡಿಸಿರುವ ಹೆಚ್ಚು ಮೊತ್ತದ ದಂಡಕ್ಕೆ ಒಳಗಾಗುವಿರಿ ಎಂದು ತಿಳಿಯಪಡಿಸಿದೆ. ಆದುದರಿಂದ ವಾಹನ ಚಾಲನೆ ಮಾಡುವಾಗ ತಮ್ಮ ವಾಹನದ ದಾಖಲೆಗಳು ನಿಯಮಗಳನ್ನು ಪಾಲಿಸಿ ನಡೆಯಿರಿ ಎಂದು ಬೆಳ್ಳಾರೆ ಠಾಣೆಯ ಠಾಣಾಧಿಕಾರಿ ಈರಯ್ಯ ಡಿ ಎನ್ ತಿಳಿಸಿದ್ದಾರೆ.

ಹೆಲ್ಮೆಟ್ ಇಲ್ಲದೆ ಮೋಟಾರು ಸೈಕಲ್ ಚಲಾವಣೆ ಮಾಡಿದಲ್ಲಿ ಹಿಂದಿನ ಮೊತ್ತ 100 ರೂ ಈಗಿನ ದಂಡ 1000 ರೂಪಾಯಿ ಹಾಗೂ 3 ತಿಂಗಳು ಲೈಸೆನ್ಸ್ ರದ್ದು ,

ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದಲ್ಲಿ ಹಿಂದಿನ ಮೊತ್ತ 100 ರೂ ಈಗಿನ ದಂಡದ ಮೊತ್ತ 1000 ರೂ ,

ಮೊಬೈಲ್ ಉಪಯೋಗಿಸಿ ವಾಹನ ಚಲಾವಣೆ ಮಾಡಿದಲ್ಲಿ ಈ ಹಿಂದಿನ ಮೊತ್ತ 100 ಈಗಿನ ಮೊತ್ತ 1000 ಹಾಗೂ 3 ತಿಂಗಳು ಲೈಸೆನ್ಸ್ ರದ್ದು ,

ಕುಡಿದು ವಾಹನ ಚಲಾವಣೆ ಮಾಡಿದಲ್ಲಿ ಈ ಹಿಂದಿನ ಮೊತ್ತ 2000 ,ಈಗಿನ ದಂಡದ ಮೊತ್ತ 10,000 ,

ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದ್ದಲ್ಲಿ ಈ ಹಿಂದಿನ ಮೊತ್ತ 500 ಈಗಿನ ದಂಡದ ಮೊತ್ತ 5000 ರೂಪಾಯಿ ,

ಅತಿವೇಗದ ವಾಹನ ಚಲಾವಣೆ ಮಾಡಿದಲ್ಲಿ 400 ರೂ ,ಈಗಿನ ದಂಡದ ಮೊತ್ತ ಲಘು ವಾಹನಗಳಿಗೆ 1000 ಘನ ವಾಹನಗಳಿಗೆ 2000 ರೂ ,

ಅಪಾಯಕಾರಿ ವಾಹನ ಚಾಲನೆ ಮಾಡಿದಲ್ಲಿ ಈ ಹಿಂದಿನ ಮೊತ್ತ 1000 ಈಗಿನ ದಂಡದ ಮೊತ್ತ 5000 ರೂ ,

ಪರ್ಮಿಟ್ ಇಲ್ಲದೆ ವಾಹನ ಚಲಾಯಿಸಿದಲ್ಲಿ ಹಿಂದಿನ ಮೊತ್ತ 5000 ರೂ ಈಗಿನ ಮೊತ್ತ 10000 ರೂ ದಂಡ ,

ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನ ಸಾಗಿಸುವುದು ಕಂಡು ಬಂದಲ್ಲಿ ಈ ಹಿಂದಿನ ಮೊತ್ತ 5000 ಈಗಿನ ದಂಡದ ಮೊತ್ತ 1000 ಪ್ರತಿ ಪ್ರಯಾಣಿಕರಿಗೆ ,

ದ್ವಿಚಕ್ರ ವಾಹನದಲ್ಲಿ ಓವರ್ ಲೋಡಿಂಗ್ 100 ರೂ ಈ ಹಿಂದಿನ ಮೊತ್ತ ಈಗಿನ ದಂಡದ ಮೊತ್ತ 2000 ಹಾಗೂ ಲೈಸೆನ್ಸ್ 3 ತಿಂಗಳು ರದ್ದು ,

ವಿಮೆ ಇಲ್ಲದೆ ವಾಹನ ಚಲಾಯಿಸಿ ದಲ್ಲಿ ಈ ಹಿಂದಿನ ದಂಡ 1000 ಈಗಿನ ದಂಡದ ಮೊತ್ತ 2000 ,

ಆಂಬುಲೆನ್ಸ್ ಗೆ ದಾರಿಮಾಡಿ ಕೊಡದಿದ್ದಲ್ಲಿ ಈ ಹಿಂದಿನ ಮೊತ್ತ 1000 ಈಗಿನ ದಂಡದ ಮೊತ್ತ 10000

ಅಪ್ರಾಪ್ತ ರಿಗೆ ವಾಹನ ಚಲಾವಣೆ ಮಾಡಲು ನೀಡಿದರೆ ಈ ಹಿಂದಿನ ದಂಡದ ಮೊತ್ತ 1000 ಆದರೆ ಈಗಿನ ದಂಡದ ಮೊತ್ತದ್ದಂತೆ 25,000 ,3 ವರುಷ ಗಳ ಕಾಲ ಜೈಲು ಶಿಕ್ಷೆ ,ವಾಹನದ ನೊಂದಣಿ ರದ್ದಾಗಲಿರುವುದು.

ಪ್ರಸ್ತುತ ಕೇಂದ್ರ ಸರಕಾರ ವು ಇತ್ತೀಚಿನ ಕೆಲವೊಂದು ಸನ್ನಿವೇಶಗಳು ಘಟನೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿ ಅದಕ್ಕೆ ಸೂಕ್ತವಾಗಿ ಹಿಂದಿನ ದರಕ್ಕಿಂತ ದಂಡವನ್ನು ಹೆಚ್ಚಿಸಿ ಸಾರ್ವಜನಿಕ ರೆಲ್ಲರಿಗೂ ಎಚ್ಚರಿಕೆ ಯ ಸಂದೇಶ ರವಾನಿಸಿದ್ದು ಇಲ್ಲವಾದಲ್ಲಿ ಸಾರ್ವಜನಿಕ ರು ದುಪ್ಪಟ್ಟು ದಂಡಕ್ಕೆ ಒಳಗಾಗಿ ಅದನ್ನ ಯಾವುದೇ ಮುಲಾಜಿಲ್ಲದೆ ಭರಿಸಬೇಕಾದ ಕ್ರಮಕ್ಕೆ ಒಳಗಾಗುತ್ತೀರಿ ಹಾಗಾಗಿ ಮೇಲೆ ತಿಳಿಸಿದ ದಂಡವನ್ನ ಸಾರ್ವಜನಿಕ ರು ಎಚ್ಚರದಿಂದ ಗಮನಿಸಿ, ಇಲಾಖೆ ಹೊರಡಿಸಿದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ , ವಾಹನ ಚಲಾಯಿಸಿರಿ ಎಂದು ಠಾಣಾಧಿಕಾರಿ ಈರಯ್ಯ ಡಿ ಎನ್ ಮಾಹಿತಿ ನೀಡಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

11 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

1 day ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

1 day ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

1 day ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

1 day ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago