ಸಂಚಾರಿ ನಿಯಮವನ್ನ ಸರಿಯಾಗಿ ಪಾಲಿಸದಿದ್ದರೆ ಹೆಚ್ಚಿನ ದಂಡಕ್ಕೆ ಒಳಗಾಗುವಿರಿ :ಬೆಳ್ಳಾರೆ ಠಾಣೆಯಿಂದ ಮಾಹಿತಿ

September 3, 2019
11:00 AM

ಬೆಳ್ಳಾರೆ: ಪೋಲಿಸ್ ಇಲಾಖೆಯು ಸಾರ್ವಜನಿಕರಿಗೆ ಮಹತ್ವದ ಮಾಹಿತಿ  ನೀಡಿದೆ. ಇದನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಇಲಾಖೆಯು ಮಹತ್ವದ ಸಂದೇಶ ಹೊರಡಿಸಿದೆ.
ಠಾಣಾ ವ್ಯಾಪ್ತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದಲ್ಲಿ ಹೊಸ ನಿಯಮಕ್ಕೆ ಅಂದರೆ ಕೇಂದ್ರ ಸರಕಾರ ಹೊಸದಾಗಿ ನಿಗದಿಪಡಿಸಿರುವ ಹೆಚ್ಚು ಮೊತ್ತದ ದಂಡಕ್ಕೆ ಒಳಗಾಗುವಿರಿ ಎಂದು ತಿಳಿಯಪಡಿಸಿದೆ. ಆದುದರಿಂದ ವಾಹನ ಚಾಲನೆ ಮಾಡುವಾಗ ತಮ್ಮ ವಾಹನದ ದಾಖಲೆಗಳು ನಿಯಮಗಳನ್ನು ಪಾಲಿಸಿ ನಡೆಯಿರಿ ಎಂದು ಬೆಳ್ಳಾರೆ ಠಾಣೆಯ ಠಾಣಾಧಿಕಾರಿ ಈರಯ್ಯ ಡಿ ಎನ್ ತಿಳಿಸಿದ್ದಾರೆ.

Advertisement
Advertisement

ಹೆಲ್ಮೆಟ್ ಇಲ್ಲದೆ ಮೋಟಾರು ಸೈಕಲ್ ಚಲಾವಣೆ ಮಾಡಿದಲ್ಲಿ ಹಿಂದಿನ ಮೊತ್ತ 100 ರೂ ಈಗಿನ ದಂಡ 1000 ರೂಪಾಯಿ ಹಾಗೂ 3 ತಿಂಗಳು ಲೈಸೆನ್ಸ್ ರದ್ದು ,

Advertisement

ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿದಲ್ಲಿ ಹಿಂದಿನ ಮೊತ್ತ 100 ರೂ ಈಗಿನ ದಂಡದ ಮೊತ್ತ 1000 ರೂ ,

ಮೊಬೈಲ್ ಉಪಯೋಗಿಸಿ ವಾಹನ ಚಲಾವಣೆ ಮಾಡಿದಲ್ಲಿ ಈ ಹಿಂದಿನ ಮೊತ್ತ 100 ಈಗಿನ ಮೊತ್ತ 1000 ಹಾಗೂ 3 ತಿಂಗಳು ಲೈಸೆನ್ಸ್ ರದ್ದು ,

Advertisement

ಕುಡಿದು ವಾಹನ ಚಲಾವಣೆ ಮಾಡಿದಲ್ಲಿ ಈ ಹಿಂದಿನ ಮೊತ್ತ 2000 ,ಈಗಿನ ದಂಡದ ಮೊತ್ತ 10,000 ,

ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದ್ದಲ್ಲಿ ಈ ಹಿಂದಿನ ಮೊತ್ತ 500 ಈಗಿನ ದಂಡದ ಮೊತ್ತ 5000 ರೂಪಾಯಿ ,

Advertisement

ಅತಿವೇಗದ ವಾಹನ ಚಲಾವಣೆ ಮಾಡಿದಲ್ಲಿ 400 ರೂ ,ಈಗಿನ ದಂಡದ ಮೊತ್ತ ಲಘು ವಾಹನಗಳಿಗೆ 1000 ಘನ ವಾಹನಗಳಿಗೆ 2000 ರೂ ,

ಅಪಾಯಕಾರಿ ವಾಹನ ಚಾಲನೆ ಮಾಡಿದಲ್ಲಿ ಈ ಹಿಂದಿನ ಮೊತ್ತ 1000 ಈಗಿನ ದಂಡದ ಮೊತ್ತ 5000 ರೂ ,

Advertisement

ಪರ್ಮಿಟ್ ಇಲ್ಲದೆ ವಾಹನ ಚಲಾಯಿಸಿದಲ್ಲಿ ಹಿಂದಿನ ಮೊತ್ತ 5000 ರೂ ಈಗಿನ ಮೊತ್ತ 10000 ರೂ ದಂಡ ,

ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನ ಸಾಗಿಸುವುದು ಕಂಡು ಬಂದಲ್ಲಿ ಈ ಹಿಂದಿನ ಮೊತ್ತ 5000 ಈಗಿನ ದಂಡದ ಮೊತ್ತ 1000 ಪ್ರತಿ ಪ್ರಯಾಣಿಕರಿಗೆ ,

Advertisement

ದ್ವಿಚಕ್ರ ವಾಹನದಲ್ಲಿ ಓವರ್ ಲೋಡಿಂಗ್ 100 ರೂ ಈ ಹಿಂದಿನ ಮೊತ್ತ ಈಗಿನ ದಂಡದ ಮೊತ್ತ 2000 ಹಾಗೂ ಲೈಸೆನ್ಸ್ 3 ತಿಂಗಳು ರದ್ದು ,

ವಿಮೆ ಇಲ್ಲದೆ ವಾಹನ ಚಲಾಯಿಸಿ ದಲ್ಲಿ ಈ ಹಿಂದಿನ ದಂಡ 1000 ಈಗಿನ ದಂಡದ ಮೊತ್ತ 2000 ,

Advertisement

ಆಂಬುಲೆನ್ಸ್ ಗೆ ದಾರಿಮಾಡಿ ಕೊಡದಿದ್ದಲ್ಲಿ ಈ ಹಿಂದಿನ ಮೊತ್ತ 1000 ಈಗಿನ ದಂಡದ ಮೊತ್ತ 10000

ಅಪ್ರಾಪ್ತ ರಿಗೆ ವಾಹನ ಚಲಾವಣೆ ಮಾಡಲು ನೀಡಿದರೆ ಈ ಹಿಂದಿನ ದಂಡದ ಮೊತ್ತ 1000 ಆದರೆ ಈಗಿನ ದಂಡದ ಮೊತ್ತದ್ದಂತೆ 25,000 ,3 ವರುಷ ಗಳ ಕಾಲ ಜೈಲು ಶಿಕ್ಷೆ ,ವಾಹನದ ನೊಂದಣಿ ರದ್ದಾಗಲಿರುವುದು.

Advertisement

ಪ್ರಸ್ತುತ ಕೇಂದ್ರ ಸರಕಾರ ವು ಇತ್ತೀಚಿನ ಕೆಲವೊಂದು ಸನ್ನಿವೇಶಗಳು ಘಟನೆಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿ ಅದಕ್ಕೆ ಸೂಕ್ತವಾಗಿ ಹಿಂದಿನ ದರಕ್ಕಿಂತ ದಂಡವನ್ನು ಹೆಚ್ಚಿಸಿ ಸಾರ್ವಜನಿಕ ರೆಲ್ಲರಿಗೂ ಎಚ್ಚರಿಕೆ ಯ ಸಂದೇಶ ರವಾನಿಸಿದ್ದು ಇಲ್ಲವಾದಲ್ಲಿ ಸಾರ್ವಜನಿಕ ರು ದುಪ್ಪಟ್ಟು ದಂಡಕ್ಕೆ ಒಳಗಾಗಿ ಅದನ್ನ ಯಾವುದೇ ಮುಲಾಜಿಲ್ಲದೆ ಭರಿಸಬೇಕಾದ ಕ್ರಮಕ್ಕೆ ಒಳಗಾಗುತ್ತೀರಿ ಹಾಗಾಗಿ ಮೇಲೆ ತಿಳಿಸಿದ ದಂಡವನ್ನ ಸಾರ್ವಜನಿಕ ರು ಎಚ್ಚರದಿಂದ ಗಮನಿಸಿ, ಇಲಾಖೆ ಹೊರಡಿಸಿದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ , ವಾಹನ ಚಲಾಯಿಸಿರಿ ಎಂದು ಠಾಣಾಧಿಕಾರಿ ಈರಯ್ಯ ಡಿ ಎನ್ ಮಾಹಿತಿ ನೀಡಿದ್ದಾರೆ.

 

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯ | ರಾಜ್ಯದಲ್ಲಿ 70.03% ಮತದಾನ
May 8, 2024
9:54 PM
by: The Rural Mirror ಸುದ್ದಿಜಾಲ
ಕೊಕ್ಕೋ ಧಾರಣೆ ಇಳಿಕೆ | ವಾರದಲ್ಲಿ 100 ರೂಪಾಯಿ ಕುಸಿತ ಕಂಡ ಕೊಕ್ಕೋ ಧಾರಣೆ |
May 8, 2024
1:55 PM
by: ದ ರೂರಲ್ ಮಿರರ್.ಕಾಂ
Karnataka Weather | 08-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ |
May 8, 2024
11:07 AM
by: ಸಾಯಿಶೇಖರ್ ಕರಿಕಳ
ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |
May 7, 2024
3:13 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror