ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

August 5, 2026
9:09 AM
ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು ರಾಘವೇಶ್ವರ ಶ್ರೀ ಹೇಳಿದರು. ದೇಹದ ಸಹಜ ಕ್ರಮವನ್ನು ಗೌರವಿಸಿ, ದಾಹವಾದಾಗ ಮಾತ್ರ ನೀರು ಕುಡಿಯುವಂತೆ ಅವರು ಸಲಹೆ ನೀಡಿದರು.

ಅಕಾಲದಲ್ಲಿ ಹಸಿವಾಗುವುದು ಅಥವಾ ಅಸಮಯದಲ್ಲಿ ನಿದ್ದೆ ಬರುವುದು ದೇಹದ ಸಹಜ ವ್ಯವಸ್ಥೆ ಹದಗೆಟ್ಟಿರುವ ಲಕ್ಷಣವಾಗಿದೆ. ದೇಹದ ಯಂತ್ರವನ್ನು ಕೃತಕವಾಗಿ ಬದಲಾಯಿಸಲು ಹೋಗದೆ, ಜೀವನಕ್ರಮವನ್ನು ಸರಿಪಡಿಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

Advertisement

ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಧರ್ಮಸಭೆಯಲ್ಲಿ ‘ಅನ್ನಂ ಬ್ರಹ್ಮ’ ಪ್ರವಚನ ಸರಣಿಯಲ್ಲಿ ಆಶೀರ್ವಚನ ನೀಡಿದ ಅವರು, ದೇಹದ ಸಹಜ ಕ್ರಮದಲ್ಲಿ ಕೃತಕ ಹಸ್ತಕ್ಷೇಪ ಮಾಡುವುದು ವಿರುದ್ಧ ಪರಿಣಾಮ ಉಂಟುಮಾಡಬಹುದು ಎಂದು ಎಚ್ಚರಿಸಿದರು.

ದೇಹದ ಸಹಜ ವೇಗಗಳನ್ನು ತಡೆಯಬೇಡಿ :  ಮಲ, ಮೂತ್ರ ಸೇರಿದಂತೆ ದೇಹದ ಸಹಜ ವೇಗಗಳನ್ನು ತಡೆಹಿಡಿಯುವುದು ಆರೋಗ್ಯಕ್ಕೆ ಹಾನಿಕಾರಕ. ಧಾರ್ಮಿಕ ಆಚರಣೆಗಳ ಹೆಸರಲ್ಲಿಯೂ ಇಂತಹ ವೇಗಗಳನ್ನು ತಡೆದು ಪೂಜೆ-ಪಾರಾಯಣ ಮಾಡುವುದು ಸಮಂಜಸವಲ್ಲ. ಆದರೆ ದುರಾಸೆ, ದ್ವೇಷ, ಸಿಟ್ಟು, ದುರಭಿಮಾನ, ಲಜ್ಜೆ ಮೊದಲಾದ ಮನಸ್ಸಿನ ದುಷ್ಟ ಪ್ರವೃತ್ತಿಗಳನ್ನು ಮಾತ್ರ ನಿಯಂತ್ರಿಸುವುದು ಜೀವನಕ್ಕೆ ಹಿತಕರ ಎಂದು ಹೇಳಿದರು.

ಸರಿಯಾದ ನಿದ್ದೆ ಆರೋಗ್ಯಕ್ಕೂ, ಆಧ್ಯಾತ್ಮಿಕ ಜೀವನಕ್ಕೂ ಅಗತ್ಯ : ಅತಿಯಾದ ನಿದ್ದೆ ಹಾಗೂ ನಿದ್ರಾಹೀನತೆ ಎರಡೂ ಮಾನವನ ಆರೋಗ್ಯ ಮತ್ತು ಆಯುಷ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಆಧುನಿಕ ವಿಜ್ಞಾನವೂ ಹೇಳುತ್ತದೆ. ಆಯುರ್ವೇದವೂ ಸಹ ಅಧಿಕ ನಿದ್ದೆ ಆಯಸ್ಸು ಮತ್ತು ಆರೋಗ್ಯಕ್ಕೆ ಒಳಿತಲ್ಲ ಎಂದು ತಿಳಿಸುತ್ತದೆ. ಸಮಪ್ರಮಾಣದ ನಿದ್ದೆ ಪರಮಾತ್ಮನ ದರ್ಶನಕ್ಕೆ ಹೆದ್ದಾರಿಯಂತಿದೆ ಎಂದು ಭಾರತೀಯ ಶಾಸ್ತ್ರಗಳು ತಿಳಿಸಿವೆ ಎಂದು ಶ್ರೀಗಳು ಹೇಳಿದರು.

‘ಹೃದಯ ಕಮಲ’ ಮತ್ತು ಹೃದಯ ಬೇರೆಬೇರೆ : ಶಾಸ್ತ್ರಗಳಲ್ಲಿ ಉಲ್ಲೇಖವಾಗುವ ‘ಹೃದಯ ಕಮಲ’ ದೇಹದಲ್ಲಿರುವ ಹೃದಯ ಅಂಗಕ್ಕಿಂತ ಭಿನ್ನವಾಗಿದೆ. ಎದೆಗುಂಡಿಗೆಯ ಹಿಂಭಾಗದಲ್ಲಿರುವ ತೇಜೋಮಯ ಕೇಂದ್ರವನ್ನೇ ಹೃದಯ ಕಮಲ ಅಥವಾ ಅನಾಹತ ಚಕ್ರ ಎಂದು ಯೋಗಶಾಸ್ತ್ರ ವಿವರಿಸುತ್ತದೆ. ನಿದ್ದೆಯ ಸಮಯದಲ್ಲಿ ಇದು ಮುದುಗುತ್ತದೆ, ಜಾಗೃತ ಸ್ಥಿತಿಯಲ್ಲಿ ಅರೆ ಅರಳಿರುತ್ತದೆ ಮತ್ತು ಸತ್ವಗುಣ ಪ್ರಾಬಲ್ಯ ಹೊಂದಿದ ಜ್ಞಾನಿಗಳಲ್ಲಿ ಸಂಪೂರ್ಣ ಅರಳುತ್ತದೆ ಎಂದು ಅವರು ವಿವರಿಸಿದರು.

ಗೂಗಲ್ ನೋಡಿ ನೀರು ಕುಡಿಯಬೇಡಿ! : ಇತ್ತೀಚಿನ ದಿನಗಳಲ್ಲಿ ಗೂಗಲ್ ಅಥವಾ ಸಾಮಾಜಿಕ ಜಾಲತಾಣಗಳ ಸಲಹೆ ನೋಡಿ ನಿಗದಿತ ಪ್ರಮಾಣದಲ್ಲಿ ನೀರು ಕುಡಿಯುವ ಪ್ರವೃತ್ತಿ ಹೆಚ್ಚುತ್ತಿದೆ. ಆದರೆ ದೇಹಕ್ಕೆ ಎಷ್ಟು ನೀರು ಬೇಕು ಎಂಬುದನ್ನು ದೇಹವೇ ಬಾಯಾರಿಕೆಯ ಮೂಲಕ ತಿಳಿಸುತ್ತದೆ. ದೇಹದ ಸೂಚನೆಯಂತೆ ನೀರು ಕುಡಿಯಬೇಕು. ಅತಿಯಾದ ನೀರಿನ ಸೇವನೆಯೂ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಶ್ರೀಗಳು ಸಲಹೆ ನೀಡಿದರು.

Jagadguru Shankaracharya Sri Raghaveshwara Bharathi Swamiji said that irregular hunger and untimely sleep are signs of an unhealthy body system. Speaking at the Annam Brahma discourse during the Annabrahma Chaturmasya at Gokarna, he stressed living in tune with the body’s natural rhythms, avoiding unnecessary artificial interventions, maintaining balanced sleep, and drinking water according to the body’s thirst rather than following internet advice.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ
August 5, 2026
8:41 AM
by: ದ ರೂರಲ್ ಮಿರರ್.ಕಾಂ
ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ
August 4, 2026
11:23 PM
by: ದ ರೂರಲ್ ಮಿರರ್.ಕಾಂ
ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ
August 4, 2026
9:14 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 04-08-2026 | ರಾಜ್ಯದಲ್ಲಿ ಆಗಸ್ಟ್‌ 12 ರವರೆಗೆ ಮಳೆ ಸಾಧ್ಯತೆ – ಮುಂಗಾರು ದುರ್ಬಲವಾಗುವ ಲಕ್ಷಣ
August 4, 2026
2:07 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror