Advertisement
ಅನುಕ್ರಮ

ಸಮಯಕ್ಕಿಲ್ಲ ಬ್ರೇಕ್

Share

ಮನೆಯಲ್ಲಿ ಹ್ಯಾಗೆ ಸಮಯ ಕಳೀತೀರಿ ಅತ್ತಿಗೆ ಎಂದು ಪೇಟೆಯಿಂದ ನಮ್ಮಲ್ಲಿಗೆ ಬಂದ ಮಾವನ ಮಗಳ ಪ್ರಶ್ನೆ.  ಏನ್ನನ್ನಲಿ ಗೊತ್ತಾಗಲಿಲ್ಲ. ಅಣ್ಣ ಫೋನ್ ಮಾಡಿ ಏನೇ ಕಾಲ್ ರಿಸೀವ್ ಮಾಡ್ತಾ ಇಲ್ಲ, ಮೆಸೇಜ್ ಗೆ ರಿಪ್ಲೈನೂ ಇಲ್ಲ, ಏನು ಕಥೆ ? ಎಂದು ಕೇಳಿದ್ದಕ್ಕೆ ಸ್ವಲ್ಪ ಬ್ಯುಸಿ ಇದ್ದೆ  ಗೊತ್ತಾಗಲ್ಲಿಲ್ಲ, ಅಂದೆ.  ಹೇಯ್ ತೋಟದ  ಕೆಲಸ ಯಾರು ಮಾಡುವುದು, ನೀನಾ? ಅನ್ನುವುದೇ? ಇಲ್ಲ ಅದಕ್ಕೆ ಬೇರೆ ಜನ ಇದ್ದಾರೆ. ಆ ಕೆಲಸ ನಂಗೆ ಇಲ್ಲ. ಹಮ್ ಮತ್ತೆ  ಆರಾಮಾಗಿ ಇರುವುದು ಬಿಟ್ಟು ಸಮಯ ಇಲ್ಲ ಹೇಳಬಾರಾದಲ್ವಾ?. ಎಂತ ಹೇಳಬೇಕು ಎಂದು ಗೊತ್ತಾಗದೆ  ತಲೆ ತುರಿಸತೊಡಗಿದೆ.

ನನಗಂತೂ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಹಳ್ಳಿ ಮನೆಗಳಲ್ಲಿ ಕೈ ತುಂಬಾ ಕೆಲಸ ಇದ್ದದ್ದೇ. ಮನೆ ಒಳಗಿನ  ಕೆಲಸ, ದನ ಕರುಗಳ ಉಸ್ತುವಾರಿ, ಕೈ ತೋಟದಲ್ಲಿ ಬೆಳೆಯುವ ಹಣ್ಣು ತರಕಾರಿ ಹೂ ಗಿಡಗಳತ್ತ ಗಮನ, ಊಟ ಕಾಫಿಗೆ ಜನಗಳಿದ್ದರಂತೂ ಕೇಳುವುದೇ ಬೇಡ. ಹೀಗೆ ರಿಲೇ  ಓಡಿದಂತೆ ಪುರುಸೊತ್ತಿಲ್ಲದ ಜೀವನ. ಹೀಗೆ ಪೂರ್ಣ ಪ್ರಮಾಣದಲ್ಲಿ ವ್ಯಸ್ತರಾಗಿರುವುದೂ ಸಂತೋಷವೇ.
ಕೆಲವೊಮ್ಮೆ ಕೆಲಸಗಳು ಒಂದರ ಹಿಂದೊಂದು ಮಾಡುವುದು ಅನಿವಾರ್ಯ. ಆಯಾ ಸಮಯದಲ್ಲಿ ನಡೆಯಬೇಕಾದ್ದನ್ನು ಮಾಡಬೇಕಷ್ಟೆ. ಉದಾಹರಣೆಗೆ  ವೆನಿಲ್ಲಾ ಬೆಳೆಸುವವರು ಬೆಳಗಿನ ಹೊತ್ತೇ ತೋಟಗಳಿಗೆ  ಹೋಗಿ ಹೂವುಗಳ   ಪರಾಗ ಸ್ಪರ್ಶ ಮಾಡಬೇಕು, ಸರಿಯಾದ ಸಮಯದಲ್ಲಿ   ಪರಾಗಸ್ಪರ್ಶ  ಮಾಡಿದರೆ   ಮಾತ್ರವೇ ವೆನಿಲ್ಲಾ ಕೋಡುಗಳು ಉಳಿಯುತ್ತವೆ, ಕೈಗೆ ನಾಲ್ಕು ಕಾಸು ಬರುತ್ತದೆ. ಮಳೆ ಹೆಚ್ಚು ಕಮ್ಮಿಯಾದರೆ ವೆನಿಲ್ಲಾ ಕೋಡು ನೆಲಕ್ಕೆ. ಅಡಿಕೆ ಬೆಳೆಗಾರರ ಕಥೆಯೂ ಬೇರೆಯಲ್ಲಾ. ಕಾಲ ಕಾಲಕ್ಕೆ ಸರಿಯಾಗಿ ಆಗ  ಬೇಕಾದ ಕೆಲಸಗಳನ್ನು ಮಾಡುವ ಅನಿವಾರ್ಯತೆ.  ನುರಿತ ಕೆಲಸಗಾರರ ಕೊರತೆ ಅತಿಯಾಗಿಿದೆ. ಹಾಗಾಾಗಿ ಯಾವುದೇ ಕೆಲಸಗಳನ್ನು ಸಮಯದಲ್ಲಿ ಮಾಡಿ ಮುಗಿಸುವ ನಂಬಿಕೆ ಯಾರಿಗೂ ಇಲ್ಲ. ಮಳೆಗಾಲದ ಆರಂಭಿಕ ಹಂತದಲ್ಲಿ ಮದ್ದು ಬಿಡುವ ಸಂಭ್ರಮ. ಬಿಸಿಲು ಮಳೆಯ ಕಣ್ಣಾಮುಚ್ಚಾಲೆ ಗೆ ರೈತ ಕಂಗಾಲು.
ಯಾರಿಗೂ ಕಾಯದೇ ಮುಂದೆ ಹೋಗುವುದೇ ನನ್ನ ಕೆಲಸ ಎಂದು  ಸಮಯ  ನಡೆಯುತ್ತಲೇ ಇರುತ್ತದೆ ಬ್ರೇಕ್ ಇಲ್ಲದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

22 hours ago

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

1 day ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

1 day ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

1 day ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

2 days ago