ಸವಣೂರು: ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಈದ್ ಉಲ್ ಫಿತ್ರ್ ಹಬ್ಬವನ್ನು ಬುಧವಾರ ಸಡಗರದಿಂದ ಆಚರಿಸಲಾಯಿತು.
ಮಸೀದಿಯ ಮುದರ್ರಿಸ್ ಮುಹಮ್ಮದ್ ಅಶ್ರಫ್ ಫಾಝಿಲ್ ಬಾಖವಿರವರು ವಿಶೇಷ ಈದ್ ನಮಾಝಿನ ಮೊದಲು ಈದ್ ಸಂದೇಶ ನೀಡಿದ ಅವರು `ಕಳೆದ ಒಂದು ತಿಂಗಳಿನಿಂದ ರಂಝಾನ್ ಉಪವಾಸ ಆಚರಿಸುತ್ತಾ ನಾವು ಆತ್ಮ ಸಂಸ್ಕರಣೆಗೆ ಒಡ್ಡಿಕೊಂಡಿದ್ದೇವೆ.ಅನುಗ್ರಹೀತ ರಂಝಾನ್ ಮಾಸ ನಮ್ಮಿಂದ ವಿದಾಯ ಕೋರಿದೆ. ರಂಝಾನಿನಲ್ಲಿ ನಮ್ಮ ಜೀವನಕ್ರಮದಲ್ಲಿ ಯಾವ ರೀತಿಯ ಧನಾತ್ಮಕ ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆಯೋ ಅದನ್ನು ಮುಂಬರುವ ದಿನಗಳಲ್ಲಿ ಅನುಸರಿಸುವ ಮೂಲಕ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗಲು ಪರಿಶ್ರಮಿಸೋಣ.ಶಾಂತಿ ಮತ್ತು ಸೌಹಾರ್ದತೆಯ ಪ್ರತೀಕವಾದ ಈದ್ ಉಲ್ ಫಿತ್ರ್ ನಾಡಿನೆಲ್ಲೆಡೆ ಹರ್ಷೋಲ್ಲಾಸವನ್ನು ಉಂಟುಮಾಡಲಿ’ ಎಂದು ಶುಭ ಹಾರೈಸಿದರು.
ವಿಶೇಷ ಈದ್ ನಮಾಝಿನ ಬಳಿಕ ಕುತುಬಾ ಪಾರಾಯಣ ನಡೆಯಿತು. ನಂತರ ಅಗಲಿದ ಗುರುಹಿರಿಯರ ಸದ್ಗತಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ನಮಾಝಿನ ಬಳಿಕ ಪರಸ್ಪರ ಆಲಂಗಿಸಿ ಶುಭಾಶಯ ಸಲ್ಲಿಸುವ ಮೂಲಕ ಈದ್ ಉಲ್ ಫಿತ್ರ್ ಸಂಭ್ರಮವನ್ನು ಹಂಚಿಕೊಳ್ಳಲಾಯಿತು.
ಈಗಿನಂತೆ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದ್ದು, ಮಾರ್ಚ್ 11 ಹಾಗೂ 12ರಂದು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದಾ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಮಾರುಕಟ್ಟೆಯಲ್ಲಿ ಅಡಿಕೆ ಇರುವ ಕೊರತೆ ಬಗ್ಗೆ ವಿದೇಶದಲ್ಲೂ ಚರ್ಚೆ ಆರಂಭವಾಗಿದೆ. ಹೀಗಾಗಿ ಭಾರತದ…
ಬಿಸಿಯಾದ ಅನ್ನದ ಜೊತೆ, ದೋಸೆ ಜೊತೆ ಹಲಸಿನಕಾಯಿ ರಚ್ಚೆಯ ಚಟ್ನಿ ಬಲು ಸೂಪರ್.
ಲೋಕ ಅದಾಲತ್ನಲ್ಲಿ ಐದು ಜಿಲ್ಲೆಗಳಲ್ಲಿ 31 ಸಾವಿರಕ್ಕೂ ಅಧಿಕ ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ಚಿತ್ರದುರ್ಗದಲ್ಲಿ…
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇತ್ತೀಚೆಗೆ ಎರಡು ಹುಲಿಗಳು ಒಟ್ಟು 6 ಮರಿಗಳಿಗೆ ಜನ್ಮ…