ಸುಬ್ರಹ್ಮಣ್ಯ: ಕುಮಾರಪರ್ವತ ಚಾರಣಕ್ಕೆ ಹೋದ 12 ಜನ ಯುವಕರ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಬೆಂಗಳೂರು ಗಾಯತ್ರಿ ನಗರದ ನಿವಾಸಿ 25 ವರ್ಷದ ಯುವಕ ಸಂತೋಷ್ ಸುರಕ್ಷಿತವಾಗಿ ಸುಬ್ರಹ್ಮಣ್ಯ ತಲಪಿದ್ದಾರೆ. ಹೀಗಾಗಿ ಎರಡು ದಿನ ಸ್ಥಳೀಯರಿಗೂ , ಇಲಾಖೆಗಳಿಗೂ ಸಂತೋಷ್ ಕುಟುಂಬದ ಆತಂಕ ದೂರ ಮಾಡಿದ್ದ.
ಜೊತೆಯಾಗಿಯೇ ಎಲ್ಲರೂ ಬರುತ್ತಿದ್ದಾಗ ಮಳೆ ಹಿನ್ನೆಲೆಯಲ್ಲಿ ಜಾಕೆಟ್ ಬದಲಿಸುವ ವೇಳೆ ಸ್ವಲ್ಪ ಹಿಂದೆ ಉಳಿದ ಸಂತೋಷ್ ದಾರಿ ತಪ್ಪಿದ್ದರು. ಹೀಗಾಗಿ ಎರಡು ದಿನಗಳ ಬಳಿಕ ಸುಬ್ರಹ್ಮಣ್ಯ ಸೇರಿದರು. ಟ್ರಕ್ಕಿಂಗ್ ಟ್ರಿಕ್ಸ್ ಅರಿತಿರುವ ಎಲ್ಲರೂ ಕೂಡಾ ಪ್ರಾಣಿಗಳ ಭಯ ಇಲ್ಲದೇ ಇದ್ದರೆ ಹಾಗೂ ಊರಿನ ಹತ್ತಿರ ಇದ್ದರೆ ಸುರಕ್ಷಿತವಾಗಿ ಸೇರಲು ಸಾಧ್ಯವಿದೆ. ಇಲ್ಲೂ ಯುವಕ ಸಂತೋಷ್ ಅದೇ ದಾರಿಯಲ್ಲಿ ಸುರಕ್ಷಿತವಾಗಿ ಸೇರಿದ್ದಾರೆ. ಕಾಡಿನೊಳಗೆ ದಾರಿ ತಪ್ಪಿದರೆ ಮೊದಲು ನೀರಿನ ಮೂಲ ನೋಡಿದ ಬಳಿಕ ಹೊಳೆ ಹರಿದಂತೆ ಸಾಗಿದರೆ ಯಾವುದಾದರೊಂದು ಊರು ಸೇರುವುದು ನಿಶ್ಚಿತ. ಇಲ್ಲೂ ಯುವಕ ಸಂತೋಷ್ ದಾರಿ ತಪ್ಪಿದ ಬಳಿಕ ನೀರನ್ನು ಹುಡುಕಿದಾಗ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ನೀರಿನ ಪೈಪ್ ಲಭ್ಯವಾದ ಬಳಿಕ ಅದೇ ದಾರಿಯಲ್ಲಿ ಬಂದು ಕುಕ್ಕೆ ಸುಬ್ರಹ್ಮಣ್ಯ ತಲಪಿದ್ದಾನೆ. ಹೀಗಾಗಿ ಆತಂಕ ದೂರವಾಗಿದೆ.
ಗಿರಿಗದ್ದೆಯಿಂದ ಸುಬ್ರಹ್ಮಣ್ಯದವರೆಗೆ ಇದುವರೆಗೆ ಯಾವುದೇ ಪ್ರಾಣಿಗಳ ಭಯ ಇದ್ದಿರಲಿಲ್ಲ. ಆನೆಗಳು ಓಡಾಟ ನಡೆಸಿದರೂ ಜೀವಕ್ಕೆ ಅಪಾಯ ಮಾಡಿದ ಘಟನೆ ನಡೆದಿರಲಿಲ್ಲ. ಪ್ರತಿದಿನವೂ ಗಿರಿಗದ್ದೆಯಿಂದ ಸುಬ್ರಹ್ಮಣ್ಯದವರೆಗೆ ಜನರ ಸಂಚಾರ ಇರುತ್ತದೆ. ಹೀಗಾಗಿ ಯುವಕ ದಾರಿ ತಪ್ಪಿ ಹೋಗಿರಬೇಕು ಎಂದು ಸ್ಥಳೀಯರು ಅಂದಾಜಿಸಿದ್ದರು. ಅದು ನಿಜವಾಯ್ತು.
ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಕೈಜೋಡಿಸಿದ್ದರು.
ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳೀಯು ಪಶ್ಚಿಮಾಭಿಮುಖವಾಗಿ ಚಲಿಸುತ್ತಿದ್ದು, ಇದೇ ಸಂದರ್ಭದಲ್ಲಿ ಬಂಗಾಳಕೊಲ್ಲಿಯಲ್ಲೂ ಸಣ್ಣ…
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಒಟ್ಟು ಅಡಿಕೆಯ ಪ್ರಮಾಣ ಸುಮಾರು ಹದಿನಾರು ಲಕ್ಷ ಟನ್,…
1,486 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚೆನಾಬ್ ಸೇತುವೆಯನ್ನು ಸರ್ಕಾರವು "ಇತ್ತೀಚಿನ ಇತಿಹಾಸದಲ್ಲಿ…
ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಮಳೆ ಆರಂಭವಾಗಲಿದೆ. ಅಲ್ಲಲ್ಲಿ ಸಾಧಾರಣ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರವ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕತೆ 9535156490
ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…