ಗೌರೀಶ್ ಕಜಂಪಾಡಿ
ಪುತ್ತೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ 2020 ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಗೌರೀಶ್ ಕಜಂಪಾಡಿ ಇವರು ಇಂಜಿನಿಯರಿಂಗ್ನಲ್ಲಿ 9 ನೇ ರ್ಯಾಂಕ್ ಹಾಗೂ ಫಾರ್ಮಾದಲ್ಲಿ 10 ನೇ ರ್ಯಾಂಕ್ ಗಳಿಸಿದ್ದಾರೆ.
ಇವರು ಬಾಲರಾಜ ಕಜಂಪಾಡಿ ಹಾಗೂ ರಾಜನಂದಿನಿ ಇವರ ಪುತ್ರ.
ಪುತ್ತೂರಿನ ದಿನೇಶ್ ಪಾಂಗಾಳ್ ಹಾಗೂ ಸಂಧ್ಯಾ ಪಾಂಗಾಳ್ ಇವರ ಪುತ್ರನಾದ ಅಕ್ಷಯ್ ಪಾಂಗಾಳ್ ಇವರು ಇಂಜಿನಿಯರಿಂಗ್ ಬಿಎನ್ ವೈಎಸ್ ನಲ್ಲಿ 63, ಇಂಜಿನಿಯರಿಂಗ್ ನಲ್ಲಿ 364 ಅಗ್ರಿ ಬಿಎಸ್ಸಿಯಲ್ಲಿ 39, ವೆಟರ್ನರಿಯಲ್ಲಿ 127 ಹಾಗೂ ಫಾರ್ಮಾದಲ್ಲಿ 217 ನೇ ರ್ಯಾಂಕ್ ಪಡೆದಿದ್ದಾರೆ.
ಅಕ್ಷಯ್ ಪಾಂಗಾಳ್
ಸುಳ್ಯದ ಸೂರ್ಯ ರೈ ಹಾಗೂ ಮೋಹಿನಿ ರೈ ಇವರ ಪುತ್ರಿ ನಿಶಾ ಎಮ್ ಎಸ್ ಇವರಿಗೆ ಇಂಜಿನಿಯರಿಂಗ್ ನಲ್ಲಿ 1226 ನೇ ರ್ಯಾಂಕ್ ಲಭಿಸಿದೆ.
ನಿಶಾ. ಎಮ್ ಎಸ್
ಡಾಕ್ಟರ್ ಸುಬ್ರಹ್ಮಣ್ಯ ಕೆ ಹಾಗೂ ರೇವತಿ ಎಮ್ ಬಿ ದಂಪತಿಗಳ ಪುತ್ರಿಯಾದ ಪುತ್ತೂರಿನ ಶಮಾ ಕೆ ಇವರಿಗೆ ಬಿಎನ್ ವೈಎಸ್ ನಲ್ಲಿ 1220 ಹಾಗೂ ಅಗ್ರಿ ಬಿಎಸ್ಸಿಯಲ್ಲಿ 1033 ನೇ ರ್ಯಾಂಕ್ ಲಭಿಸಿದೆ.
ಶಮಾ ಕೆ
ವೀರಕಂಬದ ನಾರಾಯಣ ಭಟ್ ಹಾಗೂ ರಜನಿ ಭಟ್ ದಂಪತಿಗಳ ಪುತ್ರನಾದ ಬಿ ಈಶ್ವರ ಪ್ರಸನ್ನ ಇವರಿಗೆ ಬಿಎನ್ ವೈಎಸ್ ನಲ್ಲಿ 1454 ಹಾಗೂ ಅಗ್ರಿ ಬಿಎಸ್ಸಿ ಯಲ್ಲಿ 895 ನೇ ರ್ಯಾಂಕ್ ಲಭಿಸಿದೆ.
ಈಶ್ವರ ಪ್ರಸನ್ನ
ಬೆಟ್ಟಂಪಾಡಿ ಮಿತ್ತಡ್ಕದ ಸೀತಾರಾಮ ಗೌಡ ಹಾಗೂ ಸುಂದರಿ ಇವರ ಪುತ್ರನಾದ ಸಾಕ್ಷಾತ್ ಇವರಿಗೆ ಇಂಜಿನಿಯರಿಂಗ್ ನಲ್ಲಿ 1356 ನೇ ರ್ಯಾಂಕ್ ಲಭಿಸಿದೆ.
ಸಾಕ್ಷತ್ ಎಸ್ ಎಮ್
ಕೆದಿಲದ ರಾಮಚಂದ್ರ ರಾವ್ ಹಾಗೂ ಗೀತಾ ರಾವ್ ಇವರ ಪುತ್ರನಾದ ವಿಜಿತ್ ಕೃಷ್ಣ ಐತಾಳ್ ಇವರಿಗೆ ಬಿಎನ್ ವೈಎಸ್ನಲ್ಲಿ 1082 ನೇ ರ್ಯಾಂಕ್ ಲಭಿಸಿದೆ.
ವಿಜಿತ್ ಕೃಷ್ಣ ಐತಾಳ್
ಅತ್ಯುನ್ನತ ಸಾಧನೆ ಮಾಡಿ ಕಾಲೇಜಿಗೆ ಹಾಗೂ ಪುತ್ತೂರಿಗೆ ಕೀರ್ತಿಯನ್ನು ತಂದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
ಟೇಕ್ ಆಫ್ ಆಗುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿರುವ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ…
ಜೂನ್ 13ರಿಂದ ಗಾಳಿಯ ಚಲನೆಯು ನೈರುತ್ಯದಿಂದ ಈಶಾನ್ಯಕ್ಕೆ ಬದಲಾಗುವ ಸಾಧ್ಯತೆಗಳಿರುವುದರಿಂದ ರಾಜ್ಯದ ವಿವಿದೆಡೆ…
ತೆಂಗಿನ ಗೆರಟೆಯು ಮೌಲ್ಯವರ್ಧನೆಯಾದಾಗ ತೆಂಗಿನ ಒಟ್ಟಾರೆ ಆದಾಯವೂ ಹೆಚ್ಚಾಗಲು ಸಾಧ್ಯವಿದೆ. ಸದ್ಯ ಸಣ್ಣ…
ಮುಂದಿನ ಎರಡು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ. ಹೀಗಾಗಿ…
2025 ರಲ್ಲಿ ಶನಿ ಮತ್ತು ಬುಧ ಗ್ರಹಗಳ ಸಂಯೋಜನೆಯಿಂದ ನಿರ್ಮಾಣವಾಗುತ್ತಿರುವ ನವಪಂಚಮ ರಾಜಯೋಗವು…
ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ…