Advertisement
ಸುದ್ದಿಗಳು

ಸಿಇಟಿ 2020 : ಅತ್ಯುತ್ತಮ ಸಾಧನೆ ಮಾಡಿದ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು

Share

ಪುತ್ತೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ 2020 ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಗೌರೀಶ್ ಕಜಂಪಾಡಿ ಇವರು ಇಂಜಿನಿಯರಿಂಗ್‌ನಲ್ಲಿ 9 ನೇ ರ್ಯಾಂಕ್ ಹಾಗೂ ಫಾರ್ಮಾದಲ್ಲಿ 10 ನೇ ರ್ಯಾಂಕ್ ಗಳಿಸಿದ್ದಾರೆ.
ಇವರು ಬಾಲರಾಜ ಕಜಂಪಾಡಿ ಹಾಗೂ ರಾಜನಂದಿನಿ ಇವರ ಪುತ್ರ.

ಪುತ್ತೂರಿನ ದಿನೇಶ್ ಪಾಂಗಾಳ್ ಹಾಗೂ ಸಂಧ್ಯಾ ಪಾಂಗಾಳ್ ಇವರ ಪುತ್ರನಾದ ಅಕ್ಷಯ್ ಪಾಂಗಾಳ್ ಇವರು ಇಂಜಿನಿಯರಿಂಗ್ ಬಿಎನ್‌ ವೈಎಸ್ ನಲ್ಲಿ 63,‌ ಇಂಜಿನಿಯರಿಂಗ್ ನಲ್ಲಿ 364 ಅಗ್ರಿ ಬಿಎಸ್ಸಿಯಲ್ಲಿ 39, ವೆಟರ್ನರಿಯಲ್ಲಿ 127 ಹಾಗೂ ಫಾರ್ಮಾದಲ್ಲಿ 217 ನೇ ರ್ಯಾಂಕ್ ಪಡೆದಿದ್ದಾರೆ.

ಅಕ್ಷಯ್‌ ಪಾಂಗಾಳ್

ಸುಳ್ಯದ ಸೂರ್ಯ ರೈ ಹಾಗೂ ಮೋಹಿನಿ ರೈ ಇವರ ಪುತ್ರಿ ನಿಶಾ ಎಮ್ ಎಸ್ ಇವರಿಗೆ ಇಂಜಿನಿಯರಿಂಗ್ ನಲ್ಲಿ 1226 ನೇ ರ್ಯಾಂಕ್ ಲಭಿಸಿದೆ.

ನಿಶಾ. ಎಮ್‌ ಎಸ್

ಡಾಕ್ಟರ್ ಸುಬ್ರಹ್ಮಣ್ಯ ಕೆ ಹಾಗೂ ರೇವತಿ ಎಮ್ ಬಿ ದಂಪತಿಗಳ ಪುತ್ರಿಯಾದ ಪುತ್ತೂರಿನ ಶಮಾ ಕೆ ಇವರಿಗೆ ಬಿಎನ್‌ ವೈಎಸ್ ನಲ್ಲಿ 1220 ಹಾಗೂ ಅಗ್ರಿ ಬಿಎಸ್ಸಿಯಲ್ಲಿ  1033 ನೇ ರ್ಯಾಂಕ್ ಲಭಿಸಿದೆ.

ಶಮಾ ಕೆ

ವೀರಕಂಬದ ನಾರಾಯಣ ಭಟ್ ಹಾಗೂ ರಜನಿ ಭಟ್ ದಂಪತಿಗಳ ಪುತ್ರನಾದ ಬಿ ಈಶ್ವರ ಪ್ರಸನ್ನ ಇವರಿಗೆ ಬಿಎನ್‌ ವೈಎಸ್ ನಲ್ಲಿ 1454 ಹಾಗೂ ಅಗ್ರಿ ಬಿಎಸ್ಸಿ ಯಲ್ಲಿ 895 ನೇ ರ್ಯಾಂಕ್ ಲಭಿಸಿದೆ.

ಈಶ್ವರ ಪ್ರಸನ್ನ 

ಬೆಟ್ಟಂಪಾಡಿ ಮಿತ್ತಡ್ಕದ ಸೀತಾರಾಮ ಗೌಡ ಹಾಗೂ ಸುಂದರಿ ಇವರ ಪುತ್ರನಾದ ಸಾಕ್ಷಾತ್ ಇವರಿಗೆ ಇಂಜಿನಿಯರಿಂಗ್ ನಲ್ಲಿ 1356 ನೇ ರ್ಯಾಂಕ್ ಲಭಿಸಿದೆ.

ಸಾಕ್ಷತ್ ಎಸ್‌ ಎಮ್

ಕೆದಿಲದ ರಾಮಚಂದ್ರ ರಾವ್ ಹಾಗೂ ಗೀತಾ ರಾವ್ ಇವರ ಪುತ್ರನಾದ ವಿಜಿತ್ ಕೃಷ್ಣ ಐತಾಳ್ ಇವರಿಗೆ ಬಿಎನ್‌ ವೈಎಸ್ನಲ್ಲಿ 1082 ನೇ ರ್ಯಾಂಕ್ ಲಭಿಸಿದೆ.

ವಿಜಿತ್‌ ಕೃಷ್ಣ ಐತಾಳ್

ಅತ್ಯುನ್ನತ ಸಾಧನೆ ಮಾಡಿ ಕಾಲೇಜಿಗೆ ಹಾಗೂ ಪುತ್ತೂರಿಗೆ ಕೀರ್ತಿಯನ್ನು ತಂದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ ಸಾಧ್ಯತೆ – ಕರಾವಳಿ, ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ

ಗುರುವಾರದ ವೇಳೆಗೆ ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ…

54 minutes ago

ಮಿಜೋರಾಂನಲ್ಲಿ ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ | ₹24 ಕೋಟಿ ಮೌಲ್ಯದ ಅಡಿಕೆ ವಶ, 468 ಪ್ರಕರಣ ದಾಖಲು, 292 ಮಂದಿ ಬಂಧನ

ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಸಾಗಾಟವಾಗುತ್ತಿದ್ದ ₹24 ಕೋಟಿ ಮೌಲ್ಯದ ಅಡಿಕೆಯನ್ನು ಮಿಜೋರಾಂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.…

1 hour ago

ಮಳೆ ಆರಂಭವಾಗುತ್ತಿದ್ದಂತೆಯೇ ಗಿಡಗಳ ನಾಟಿಗೆ ಸಿದ್ಧತೆ – ಅಡಿಕೆ ಗಿಡಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ…!

ರಾಜ್ಯಾದ್ಯಂತ ಅಡಿಕೆ ಗಿಡಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು,ಕೆಲವು ಕಡೆ ಸಸಿಯ ಬೆಲೆ ₹100ಕ್ಕೆ…

10 hours ago

ಕೇಂದ್ರ ಸರ್ಕಾರದ ಸೌಲಭ್ಯಗಳಿಗೆ ‘ಕೇಂದ್ರ ರೈತ ಐಡಿ’ ಕಡ್ಡಾಯ – ಮಂಗಳೂರು ತಾಲೂಕಿನ 14,520 ರೈತರು ಇನ್ನೂ ನೋಂದಣಿ ಬಾಕಿ

ಕೇಂದ್ರ ಸರ್ಕಾರದ ವಿವಿಧ ಕೃಷಿ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯವಾಗುತ್ತಿದೆ.…

11 hours ago

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ | ಮತ್ತೆ ಚೇತರಿಕೆಯ ಸಂಕೇತ ನೀಡಿದ ಅಡಿಕೆ ಧಾರಣೆ

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…

21 hours ago

ಒಂದು ದಿನದ ತೀವ್ರ ಬಿಸಿಲು 3,400 ಹೆಚ್ಚುವರಿ ಸಾವುಗಳಿಗೆ ಕಾರಣ…? ಭಾರತದ ಬಗ್ಗೆ ಬೆಚ್ಚಿಬೀಳಿಸುವ ಅಧ್ಯಯನ

ಭಾರತದಲ್ಲಿ ಕೇವಲ ಒಂದು ದಿನದ ತೀವ್ರ ಬಿಸಿಲು ಸುಮಾರು 3,400 ಹೆಚ್ಚುವರಿ ಸಾವುಗಳಿಗೆ…

1 day ago