Advertisement
ಸುದ್ದಿಗಳು

ಸಿಇಟಿ 2020 : ಅತ್ಯುತ್ತಮ ಸಾಧನೆ ಮಾಡಿದ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು

Share

ಪುತ್ತೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ 2020 ಪರೀಕ್ಷೆಯಲ್ಲಿ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ಗೌರೀಶ್ ಕಜಂಪಾಡಿ ಇವರು ಇಂಜಿನಿಯರಿಂಗ್‌ನಲ್ಲಿ 9 ನೇ ರ್ಯಾಂಕ್ ಹಾಗೂ ಫಾರ್ಮಾದಲ್ಲಿ 10 ನೇ ರ್ಯಾಂಕ್ ಗಳಿಸಿದ್ದಾರೆ.
ಇವರು ಬಾಲರಾಜ ಕಜಂಪಾಡಿ ಹಾಗೂ ರಾಜನಂದಿನಿ ಇವರ ಪುತ್ರ.

ಪುತ್ತೂರಿನ ದಿನೇಶ್ ಪಾಂಗಾಳ್ ಹಾಗೂ ಸಂಧ್ಯಾ ಪಾಂಗಾಳ್ ಇವರ ಪುತ್ರನಾದ ಅಕ್ಷಯ್ ಪಾಂಗಾಳ್ ಇವರು ಇಂಜಿನಿಯರಿಂಗ್ ಬಿಎನ್‌ ವೈಎಸ್ ನಲ್ಲಿ 63,‌ ಇಂಜಿನಿಯರಿಂಗ್ ನಲ್ಲಿ 364 ಅಗ್ರಿ ಬಿಎಸ್ಸಿಯಲ್ಲಿ 39, ವೆಟರ್ನರಿಯಲ್ಲಿ 127 ಹಾಗೂ ಫಾರ್ಮಾದಲ್ಲಿ 217 ನೇ ರ್ಯಾಂಕ್ ಪಡೆದಿದ್ದಾರೆ.

ಅಕ್ಷಯ್‌ ಪಾಂಗಾಳ್

ಸುಳ್ಯದ ಸೂರ್ಯ ರೈ ಹಾಗೂ ಮೋಹಿನಿ ರೈ ಇವರ ಪುತ್ರಿ ನಿಶಾ ಎಮ್ ಎಸ್ ಇವರಿಗೆ ಇಂಜಿನಿಯರಿಂಗ್ ನಲ್ಲಿ 1226 ನೇ ರ್ಯಾಂಕ್ ಲಭಿಸಿದೆ.

ನಿಶಾ. ಎಮ್‌ ಎಸ್

ಡಾಕ್ಟರ್ ಸುಬ್ರಹ್ಮಣ್ಯ ಕೆ ಹಾಗೂ ರೇವತಿ ಎಮ್ ಬಿ ದಂಪತಿಗಳ ಪುತ್ರಿಯಾದ ಪುತ್ತೂರಿನ ಶಮಾ ಕೆ ಇವರಿಗೆ ಬಿಎನ್‌ ವೈಎಸ್ ನಲ್ಲಿ 1220 ಹಾಗೂ ಅಗ್ರಿ ಬಿಎಸ್ಸಿಯಲ್ಲಿ  1033 ನೇ ರ್ಯಾಂಕ್ ಲಭಿಸಿದೆ.

ಶಮಾ ಕೆ

ವೀರಕಂಬದ ನಾರಾಯಣ ಭಟ್ ಹಾಗೂ ರಜನಿ ಭಟ್ ದಂಪತಿಗಳ ಪುತ್ರನಾದ ಬಿ ಈಶ್ವರ ಪ್ರಸನ್ನ ಇವರಿಗೆ ಬಿಎನ್‌ ವೈಎಸ್ ನಲ್ಲಿ 1454 ಹಾಗೂ ಅಗ್ರಿ ಬಿಎಸ್ಸಿ ಯಲ್ಲಿ 895 ನೇ ರ್ಯಾಂಕ್ ಲಭಿಸಿದೆ.

ಈಶ್ವರ ಪ್ರಸನ್ನ 

ಬೆಟ್ಟಂಪಾಡಿ ಮಿತ್ತಡ್ಕದ ಸೀತಾರಾಮ ಗೌಡ ಹಾಗೂ ಸುಂದರಿ ಇವರ ಪುತ್ರನಾದ ಸಾಕ್ಷಾತ್ ಇವರಿಗೆ ಇಂಜಿನಿಯರಿಂಗ್ ನಲ್ಲಿ 1356 ನೇ ರ್ಯಾಂಕ್ ಲಭಿಸಿದೆ.

ಸಾಕ್ಷತ್ ಎಸ್‌ ಎಮ್

ಕೆದಿಲದ ರಾಮಚಂದ್ರ ರಾವ್ ಹಾಗೂ ಗೀತಾ ರಾವ್ ಇವರ ಪುತ್ರನಾದ ವಿಜಿತ್ ಕೃಷ್ಣ ಐತಾಳ್ ಇವರಿಗೆ ಬಿಎನ್‌ ವೈಎಸ್ನಲ್ಲಿ 1082 ನೇ ರ್ಯಾಂಕ್ ಲಭಿಸಿದೆ.

ವಿಜಿತ್‌ ಕೃಷ್ಣ ಐತಾಳ್

ಅತ್ಯುನ್ನತ ಸಾಧನೆ ಮಾಡಿ ಕಾಲೇಜಿಗೆ ಹಾಗೂ ಪುತ್ತೂರಿಗೆ ಕೀರ್ತಿಯನ್ನು ತಂದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯುವುದಿಲ್ಲ

ಮೈಸೂರು ಜಿಲ್ಲೆಯ ಮೇಲ್ಸೇತುವೆ ಕಾಮಗಾರಿಗಳ ವೇಳೆ ಯಾವುದೇ ಮರಗಳನ್ನು ಕಡಿಯುವುದಿಲ್ಲ ಎಂದು ಸಂಸದ…

2 hours ago

ರಾಜ್ಯದ ಹಲವೆಡೆ ಮಳೆ; ಕುಕನೂರಿನಲ್ಲಿ 7 ಸೆಂ.ಮೀ ಮಳೆ

ರಾಜ್ಯದ ಒಳನಾಡಿನ ಕೆಲವೆಡೆ ಮಳೆಯಾಗಿದ್ದು, ಕುಕನೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಕಲಬುರಗಿಯಲ್ಲಿ 41…

2 hours ago

ಹವಾಮಾನ ವರದಿ | 07-05-2026 | ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು : ಕರಾವಳಿ-ಮಲೆನಾಡಿನಲ್ಲಿ ಮುಂದಿನ 10 ದಿನ ಮಳೆ ಸಾಧ್ಯತೆ,

08.05.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆಯ ಪ್ರಕಾರ ರಾಜ್ಯದ ಹಲವು…

19 hours ago

ಕೆಲವು ರಾಜ್ಯಗಳಲ್ಲಿ ಸುಡುವ ಬಿಸಿಲು, ಇನ್ನೂ ಕೆಲವು ಕಡೆ ಮಳೆ – ದೇಶಾದ್ಯಂತ ಹವಾಮಾನ ವೈಪರೀತ್ಯ

ದೇಶದ ಹಲವೆಡೆ ಬಿಸಿಗಾಳಿ ತೀವ್ರವಾಗಿದ್ದು, ಕೆಲ ರಾಜ್ಯಗಳಲ್ಲಿ ಮಳೆ ಹಾಗೂ ಮೋಡ ಕವಿದ…

1 day ago

ಪರಿಸರ ಸಂರಕ್ಷಣೆಯಿಂದ ಮಾತ್ರ ಸುಸ್ಥಿರ ಆರೋಗ್ಯ ಸಾಧ್ಯ

ಪರಿಸರ ಮಾಲಿನ್ಯ ಮತ್ತು ಹಸಿರು ಹೊದಿಕೆ ನಾಶದಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಪ್ರಕೃತಿ…

1 day ago

ಸ್ಥಳೀಯ ಸಂಸ್ಥೆ ಚುನಾವಣೆ ಶೀಘ್ರ – ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಜ್ಯದಲ್ಲಿ ಬಾಕಿ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಲು ಸರ್ಕಾರ ಸಿದ್ಧವಿದೆ…

1 day ago