Advertisement
ಸುದ್ದಿಗಳು

ಸುಬ್ರಹ್ಮಣ್ಯಕ್ಕೆ ತಲುಪಿತು ನೂತನ ರಥ : ನೂತನ ಬ್ರಹ್ಮರಥವನ್ನು ಭಕ್ತರು ಮಾತ್ರವಲ್ಲ ವರುಣದೇವನೂ ಸ್ವಾಗತಿಸಿದ…..!

Share

ಸುಬ್ರಹ್ಮಣ್ಯ:ಕುಕ್ಕೆ ಸುಬ್ರಹ್ಮಣ್ಯದ ನೂತನ ಬ್ರಹ್ಮರಥದ ಅದ್ದೂರಿ ಮೆರವಣಿಗೆ ಮೂಲಕ ಬುಧವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯ ತಲುಪಿತು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾವಿರಾರು ಭಕ್ತಾದಿಗಳು ಮೆರವಣಿಗೆಯ ಮೂಲಕ ಸ್ವಾಗತಿಸಿದರು. ರಥ ಕುಕ್ಕೆ ಸುಬ್ರಹ್ಮಣ್ಯ ತಲುಪುತ್ತಿದ್ದಂತೆಯೇ ಮಳೆಯ ಸಿಂಚನವೂ ಆಗಿರುವುದು ಭಕ್ತರ ಸಂತಸಕ್ಕೆ ಕಾರಣವಾಯಿತು.

ಕುಕ್ಕೆ ಸುಬ್ರಹ್ಮಣ್ಯ ದೇವರ ಭಕ್ತರಾದ ಉದ್ಯಮಿ ಮುತ್ತಪ್ಪ ರೈ ಹಾಗೂ ಅಜಿತ್ ರೈ ಕಡಬ ಅವರು ದೇಣಿಗೆ ರೂಪದಲ್ಲಿ ಕೊಡಮಾಡಿದ ಕುಕ್ಕೆ ಸುಬ್ರಹ್ಮಣ್ಯದ ನೂತನ ಬ್ರಹ್ಮರಥವು ಕೋಟೇಶ್ವರದಿಂದ ಸೆ.30 ರಂದು ಹೊರಟು ಉಡುಪಿ, ಮಂಗಳೂರು ಮೂಲಕ ಉಪ್ಪಿನಂಗಡಿ ಮಾರ್ಗವಾಗಿ ಆಗಮಿಸಿ ಮಂಗಳವಾರ ರಾತ್ರಿ ಬಲ್ಯದಲ್ಲಿ ತಂಗಿತ್ತು. ಬುಧವಾರ ಬೆಳಗ್ಗೆ ಬಲ್ಯದಿಂದ ಹೊರಟ ರಥವು ಹೊಸಮಠದ ಮೂಲಕ ಕಡಬ ತಲುಪಿದಾಗ ಅದ್ದೂರಿ ಮೆರವಣಿಗೆ ನಡೆಯಿತು. ಕಡಬದಲ್ಲಿ ಸಾವಿರಾರು ಮಂದಿ ನೂತನ ರಥವನ್ನು ಅದ್ದೂರಿಯಿಂದ ಸ್ವಾಗತಿಸಿದರು.

ಬಳಿಕ ವಾಹನ ಮೆರವಣಿಗೆ ಮೂಲಕ ಹೊರಟ ರಥಕ್ಕೆ ಮರ್ಧಾಳ, ಬಿಳಿನೆಲೆ , ಕೈಕಂಬಗಳಲ್ಲಿ ಸ್ವಾಗತ ನಡೆಯಿತು. ಕೈಕಂಬದ ಬಳಿಕ ಸಾವಿರಾರು ಭಕ್ತಾದಿಗಳೂ ಜೊತೆಯಾಗಿ ಕುಮಾರಧಾರಾ ತಲುಪಿದ ಬಳಿಕ ಭಕ್ತಾದಿಗಳ ಹರ್ಷ ಮುಗಿಲು ಮುಟ್ಟಿತು. ಕುಮಾರಧಾರಾದಲ್ಲಿ ಸುಬ್ರಹ್ಮಣ್ಯದ ಆನೆ ಯಶಸ್ವಿ ಸ್ವಾಗತಿಸಿ ನಂತರ ಭಕ್ತಾದಿಗಳು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ನೂತನ ರಥಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಅದ್ದೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಟ್ಯಾಬ್ಲೋ, ಭಜನೆ ಮೊದಲಾದವುಗಳಿಂದ ಮೆರವಣಿಗೆ ನಡೆಯಿತು. ರಥಬೀದಿ ತಲುಪಿದ ಬಳಿಕ ರಥಕ್ಕೆ ವಿಶೇಷವಾದ ಪೂಜೆ ನಡೆಯಿತು.

ಈ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಸದಸ್ಯರುಗಳು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ರಥದ ದಾನಿ ಅಜಿತ್ ಶೆಟ್ಟಿ ಕಡಬ, ದೇವಸ್ಥಾನದ ಅಧಿಕಾರಿ ಚಂದ್ರಶೇಖರ ಪೇರಾಲು, ಪ್ರಮುಖರಾದ ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಮುತ್ತಪ್ಪ ರೈ ಅವರ ಸಹೋದರ ಕರುಣಾಕರ ರೈ ಮೊದಲಾದವರು ಉಪಸ್ಥಿತರಿದ್ದರು.

ನೂತನ ರಥವು ಕುಕ್ಕೆ ಸುಬ್ರಹ್ಮಣ್ಯ ತಲುಪುತ್ತಿದ್ದಂತೆಯೇ ಗುಡಗು ಸಹಿತ ಮಳೆಯಾಯಿತು.ಹೀಗಾಗಿ ಆಗಮಿಸಿದ ಭಕ್ತರಿಗೆಲ್ಲಾ ಸಂತಸ ಇಮ್ಮಡಿಯಾಯಿತು. ಸುಬ್ರಹ್ಮಣ್ಯ ದೇವರು ಸುಪ್ರೀತರಾಗಿ ಮಳೆಯ ಸಿಂಚನವಾಯಿತು ಎಂದು ಸಂತಸ ಪಟ್ಟರು. ಕುಮಾರಧಾರಾ ಬಳಿ ರಥ ತಲುಪುತ್ತಿದ್ದಂತೆಯೇ ತುಂತುರು ಮಳೆ ಆರಂಭವಾಗಿ ನಂತರ ಗುಡುಗು ಸಹಿತ ಮಳೆಯಾಗಿದೆ.

ನೂತನ ಬ್ರಹ್ಮರಥ ಆಗಮನದ ಸಂದರ್ಭ ಎಲ್ಲೆಡೆ ಸೌಹಾರ್ದತೆಗೂ ಕಾರಣವಾಯಿತು. ಅನ್ಯಧರ್ಮೀಯರು ಬ್ಯಾನರ್ ಮೂಲಕ ಶುಭಾಶಯ ಕೋರಿದ್ದರೆ ಇನ್ನೂ ಕೆಲವು ಕಡೆ ಸಿಹಿ, ಪಾನೀಯ ಹಂಚುವ ಮೂಲಕ ಮೆರವಣಿಗೆಯ ಕಾರ್ಯದಲ್ಲಿ ಭಾಗಿಯಾದರು. ಈ ಮೂಲಕ ಕುಕ್ಕೆ ಸುಬ್ರಹ್ಮನ್ಯ ದೇವರ ನೂತನ ರಥದ ಮೆರವಣಿಗೆ ಸೌಹಾರ್ದತೆಗೂ ಕಾರಣವಾಯಿತು. ಕಡಬದ ಬಳಿಕ ಅಲ್ಲಲ್ಲಿ ಭಕ್ತಾದಿಗಳು ಪಾನೀಯ ವಿತರಿಸಿದರು.

ರಥವು ಕುಕ್ಕೆ ಸುಬ್ರಹ್ಮಣ್ಯ ತಲಪುತ್ತಿದ್ದಂತೆಯೇ ಕಾಶಿಕಟ್ಟೆ ಬಳಿ ಗಣಪತಿ ಗುಡಿಯಲ್ಲಿ ಆರತಿ ಬೆಳಗಿದ ಬಳಿಕ ರಥ ಹೊತ್ತಿದ್ದ ವಾಹನವು ಕಾಶಿಕಟ್ಟೆ ಗಣಪತಿ ದೇವಸ್ಥಾನಕ್ಕೆ ಪ್ರದಕ್ಷಿಣೆ  ಹೊಡೆದುಕೊಂಡು ಚಲಿಸಿತು. ಬ್ರಹ್ಮರಥವು ಪ್ರತೀ ವರ್ಷ ರಾಜಬೀದಿಯವರೆಗೆ ಮಾತ್ರಾ ಬರುತ್ತದೆ. ಹೀಗಾಗಿ ನೂತನ ರಥದ ಆಗಮನದ ಸಂದರ್ಭದಲ್ಲಿ ಕಾಶಿಕಟ್ಟೆ ಗಣಪತಿ ಗುಡಿಗೆ ಪ್ರದಕ್ಷಣೆಯ ದಾರಿಯಲ್ಲಿಯೇ ಸಾಗಿತು. ರಥಬೀದಿಯಲ್ಲಿ ಈ ಹಿಂದಿನ ಬ್ರಹ್ಮರಥಕ್ಕೆ ಅಲಂಕಾರ ಮಾಡಲಾಗಿತ್ತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅನ್ನವೇ ಜೀವನ, ಅನ್ನವೇ ಮೃತ್ಯು

ಮಿತಾಹಾರ, ಯಜ್ಞಸ್ವರೂಪ ಭೋಜನ ಹಾಗೂ ಆಹಾರದ ಶಾಸ್ತ್ರೋಕ್ತ ಮಹತ್ವವನ್ನು ಶ್ರೀ ರಾಘವೇಶ್ವರ ಭಾರತೀ…

45 minutes ago

ಕೃಷಿ ಕ್ಷೇತ್ರಕ್ಕೆ ಎಥೆನಾಲ್‌ ದೊಡ್ಡ ಅವಕಾಶ

ಎಥೆನಾಲ್‌ ನೀತಿಯಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದ್ದು, ದೇಶದ ಇಂಧನ ಭದ್ರತೆಯೂ ಬಲಗೊಳ್ಳಲಿದೆ…

56 minutes ago

ಮಾನವ–ವನ್ಯಜೀವಿ ಸಂಘರ್ಷ ತಡೆಗೆ ರಾಷ್ಟ್ರೀಯ ಕಾರ್ಯತಂತ್ರ – ಕರ್ನಾಟಕದ AI ಮಾದರಿಗೆ ಕೇಂದ್ರದ ಮೆಚ್ಚುಗೆ

ಮಾನವ–ವನ್ಯಜೀವಿ ಸಂಘರ್ಷ ತಡೆ ಕುರಿತು ನಡೆದ ಸಂಸದೀಯ ಸಭೆಯಲ್ಲಿ ಕರ್ನಾಟಕದ AI ಆಧಾರಿತ…

1 hour ago

ಅಕ್ರಮ ಅಡಿಕೆ ಆಮದು ತಡೆಗೆ ಕೇಂದ್ರದ ಭರವಸೆ – ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಭೇಟಿಯಾದ ಕ್ಯಾಂಪ್ಕೊ ನಿಯೋಗ

ಅಕ್ರಮ ಅಡಿಕೆ ಆಮದು, ಜಿಎಸ್‌ಟಿ ತಾರತಮ್ಯ ಹಾಗೂ ಸಹಕಾರ ಸಂಘಗಳ ಸಮಸ್ಯೆಗಳ ಕುರಿತು…

1 hour ago

ಹವಾಮಾನ ವರದಿ | 08-07-2026 | ರಾಜ್ಯದಲ್ಲಿ ಮುಂಗಾರು ಪರಿಸ್ಥಿತಿ ಹೇಗಿದೆ…? ಕರಾವಳಿಯಲ್ಲಿ ಮಳೆ ಕಡಿಮೆಯಾಗುತ್ತಿದೆಯೇ?

ಆಗಸ್ಟ್‌ 8ರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯ ಪ್ರಮಾಣ ಇಳಿಕೆಯಾಗುವ ಲಕ್ಷಣಗಳಿವೆ. ಆಗಸ್ಟ್‌…

10 hours ago

ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮ ಅಡಿಕೆ ಜಾಲ | ಮೂರು ಹಂತದ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದ ಇಡಿ

ಮ್ಯಾನ್ಮಾರ್‌ನಿಂದ ಭಾರತಕ್ಕೆ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಮೂರು ಹಂತದ ಜಾಲವನ್ನು ಇಡಿ ತನಿಖೆಯಲ್ಲಿ…

14 hours ago