ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಆನೆ ಯಶಸ್ವಿ ಅಂದರೆ ಎಲ್ಲರಿಗೂ ಅಚ್ಚುಮೆಚ್ಚು. ಯಶಸ್ವಿಯ ತುಂಟಾಟ, ನಡೆದಾಟ ಎಲ್ಲವೂ ಭಕ್ತರಿಗೆ ಖುಷಿ. ಹೀಗಾಗಿ ಅದು ಪ್ರೀತಿಯ ಯಶಸ್ವಿ. ಇದೀಗ ಈ ಆನೆಗೆ ಅನಾರೋಗ್ಯ ಕಾಡಿದಾಗ ಎಲ್ಲರಿಗೂ ನೋವು. ತಮಗೆ , ತಮ್ಮ ಕುಟುಂಬಕ್ಕೆ ನೋವಾದಷ್ಟೇ ಸಂಕಟವಾಗುತ್ತಿದೆ. ಹೀಗಾಗಿ ಆನೆಯ ಆರೋಗ್ಯ ವಿಚಾರಣೆಗೆ ಭಕ್ತರು ಬಂದರೆ ಕುಕ್ಕೆ ದೇವಸ್ಥಾನದ ಭಕ್ತ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಯಶಸ್ವಿಯ ಆರೋಗ್ಯ ಸುಧಾರಣೆಗೆ ಉರುಳು ಸೇವೆ ನಡೆಸಿದರು.
ಕುಕ್ಕೆ ದೇವಸ್ಥಾನದ ಆನೆ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಆನೆಯ ಆರೋಗ್ಯ ಸುಧಾರಿಸಲೆಂದು ಪ್ರಾರ್ಥಿಸಿ ಕುಕ್ಕೆ ದೇವಸ್ಥಾನದ ಭಕ್ತ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಗುರುವಾರ ಬೆಳಗ್ಗೆ ದೇಗುಲದ ಹೊರಾಂಗಣದಲ್ಲಿ ಉರುಳು ಸೇವೆ ನಡೆಸಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಈ ಮರಿಯಾನೆ ಯಶಸ್ವಿಯನ್ನು ಉದ್ಯಮಿ, ಶಾಸಕ ಆನಂದ ಸಿಂಗ್ ಸೇವಾ ರೂಪದಲ್ಲಿ ನೀಡಿದ್ದರು. ಅಂದಿನಿಂದಲೇ ಭಕ್ತರೆಲ್ಲರಿಗೂ ಯಶಸ್ವಿ ಪ್ರೀತಿಯ ಆನೆಯಾಗಿದೆ. ಆನೆಯ ತುಂಟಾಟ, ನಡೆಯುವ ರೀತಿ ಎಲ್ಲವೂ ಖುಷಿ. ಹೀಗಾಗಿ ಭಕ್ತರೆಲ್ಲರೂ ಅನಾರೋಗ್ಯದಿಂದ ಬಳಲುತ್ತಿರುವ ಆನೆಯ ಆರೋಗ್ಯ ವಿಚಾರಿಸಲು ಆನೆಯ ಅಭಿಮಾನಿಗಳು ಶೆಡ್ನತ್ತ ತೆರಳುತಿದ್ದಾರೆ. ಶೀಘ್ರವೇ ಗುಣಮುಖಗೊಂಡು ಎಂದಿನಂತೆ ಇರುವಂತಾಗಲೆಂದು ಎಲ್ಲರು ಪ್ರಾರ್ಥಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಾಮನ್ಯವಾಗಿ ಒಂದು ಉತ್ಪನ್ನದ ಉತ್ಪಾದನೆ ಕುಸಿದಾಗ ಅದರ ಬೆಲೆ ಏರಿಕೆ ಆಗುವುದು ಸಹಜ.ಇಲ್ಲಿ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪರಾಧ ನಿಯಂತ್ರಣ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಮೊದಲ…
ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಹಲವು ಕಡೆ…
ದಾವಣಗೆರೆಯಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ರಾಷ್ಟ್ರೀಯ ಕೃಷಿ ಕೀಟಬಾಧೆ, ಸಂಶೋಧನಾ ಮಂಡಳಿಯ…
ರಾಜ್ಯಾದ್ಯಂತ ಮಳೆ ಮುಂದುವರೆದಿದೆ. ಕೊಡಗು ಜಿಲ್ಲೆಯಲ್ಲಿ ಸತತ 7 ದಿನಗಳಿಂದ ಸುರಿಯುತ್ತಿರುವ ಧಾರಾಕಾರ…