Advertisement
MIRROR FOCUS

ಸುಳ್ಯದಲ್ಲಿ ಮಾದರಿಯಾಯ್ತು ಪರಿಸರ “ಸ್ನೇಹ” ಶಾಲೆ : ಜಲಸಂರಕ್ಷಣೆಯ ಪ್ರಾಯೋಗಿಕ ಪಾಠದಲ್ಲಿ ಸ್ನೇಹ ಶಾಲೆ

Share

ಸುಳ್ಯ: ಮಗುವಿಗೊಂದು ಗಿಡ ಎಂಬ ಮಾತು ಹಿಂದೆ ಇದ್ದರೆ ಈ ವರ್ಷ ಮಗುವಿಗೊಂದು ಇಂಗುಗುಂಡಿ ಎಂದೂ ಸೇರಿಸಲೇಬೇಕಾದ ಅನಿವಾರ್ಯತೆ ಇದೆ. ಕಾರಣ ಏಕೆಂದು ಹೇಳಬೇಕಾಗಿಲ್ಲ, ಅಷ್ಟೊಂದು ಜಲ ತತ್ತ್ವಾರ ಈ ಬಾರಿ ಕಂಡಿದೆ. ಹಾಗಿದ್ದರೆ ನಾವೇನು ಮಾಡಬಹುದು  ಎಂಬುದಕ್ಕೆ ಮಾದರಿಯಾಗಿ ನಿಂತಿದೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ.

ಹಲವು ವೈಶಿಷ್ಠ್ಯಗಳಿಂದ ಕೂಡಿದ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಈ ಬಾರಿ ಜಲಸಂರಕ್ಷಣೆಯ ಕಾರ್ಯದಲ್ಲಿ  ಸುಳ್ಯ ತಾಲೂಕಿಗೆ  ಮಾತ್ರವಲ್ಲ ಜಿಲ್ಲೆಗೆ, ರಾಜ್ಯಕ್ಕೆ ಮಾದರಿಯಾಗಿದೆ. ಸುಳ್ಯ ತಾಲೂಕಿನಂತಹ ಪ್ರದೇಶದಲ್ಲೂ  ವಿಪರೀತವಾಗಿ ಈ ಬಾರಿ ಬರದ ಛಾಯೆ ಕಂಡಿದೆ. ಎಲ್ಲಾ ಕಡೆ ಎಲ್ಲರೂ ಬರ ಬರ ಎಂದು ಕೂಗಾಡಿದರು. ಪರಿಹಾರ ಏನು ಎಂಬುದರ ಕಡೆಗೆ ಕೆಲವು ಮಂದಿ ಯೋಚನೆ ಮಾಡಿದರು. ಮಂಗಳೂರಿನ ಸರಕಾರಿ ಶಾಲೆಯೊಂದರಲ್ಲಿ ಜಲಜಾಗೃತಿಗೆ ಮುಂದಾದರೆ ಪಡ್ರೆಯಂತಹ ಪ್ರದೇಶದಲ್ಲಿ  ಜಲಸಂರಕ್ಷಣೆಗೆ ಹೊಳೆಯಲ್ಲಿ  ನಡೆದು ಭವಿಷ್ಯದ ಬಗ್ಗೆ  ಚಿಂತೆ ಮಾಡದೆ, ಚಿಂತನೆ ಮಾಡಿದರು. ಮುಂದಿನ 3 ವರ್ಷದಲ್ಲಿ  ಸಮೃದ್ಧ ಜಲ ಪಡೆಯುವ ಭರವಸೆಯನ್ನು  ವ್ಯಕ್ತಪಡಿಸಿದರು. ಇದೀಗ ಅದೇ ಮಾದರಿಯಲ್ಲಿ  ಮತ್ತೊಂದು ಹೆಜ್ಜೆಯನ್ನು  ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಮಾಡಿದೆ. ಇದು ಪ್ರಾಯೋಗಿಕ ಪಾಠ. ಪುಸ್ತಕದಲ್ಲಿ ಜಲಸಂರಕ್ಷಣೆಯ ಬಗ್ಗೆ ಓದುವುದರ ಬದಲಾಗಿ ಸ್ವತ: ಇಂಗುಗುಂಡಿ ಮಾಡಿ ಪಾಠ ಕಲಿಯುವ ಜೀವನ ಪಾಠ ಇದು. ಇಲ್ಲಿ ಶಾಲೆಯ ಪ್ರತೀ ಮಗುವೂ ಮನೆಯಲ್ಲಿ ಕನಿಷ್ಠ ಒಂದು ಇಂಗು ಗುಂಡಿ ಮಾಡಿ ಜಲಸಂರಕ್ಷಣೆಗೆ ಹೆಜ್ಜೆ ಇರಿಸಿದ್ದಾರೆ. ಜಲದ ವಿಚಾರವು ಇಂದು  ಆಂದೋಲನವಲ್ಲ , ಕ್ರಾಂತಿಯಾಗಬೇಕು ಎಂಬುದು  ಸ್ನೇಹ ಶಿಕ್ಷಣ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಅಕ್ಷರ ದಾಮ್ಲೆ ಹೇಳುತ್ತಾರೆ.

 

 

ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯದಲ್ಲಿ ಪ್ರಾರಂಭವಾಗುವ ಹೊತ್ತಿಗೆ ನೀರಿನ ಕೊರತೆ ವಿಪರೀತವಾಗಿ ಕಾಡುತ್ತಿತ್ತು. ಹಾಗಿದ್ದರೆ ಮುಂದೇನು ಎಂಬ ಯೋಚನೆ ಶಾಲೆಯ ಸಂಚಾಲಕ ಚಂದ್ರಶೇಖರ ದಾಮ್ಲೆ ಹಾಗೂ ಜಯಲಕ್ಷ್ಮಿ ದಾಮ್ಲೆ ಅವರನ್ನು ಕಾಡಿತ್ತು. ಆದರೆ ಜಲದ ಬಗ್ಗೆ ಹೆಚ್ಚು ಅರಿವು ಹಾಗೂ ಕಾಳಜಿ ಹೊಂದಿದ್ದ ಅವರು ಮೊದಲು ಮಾಡಿದ್ದು ಇಂಗುಗುಂಡಿ. ಶಾಲೆಯ ಆವರಣದ ಸುತ್ತ ಇಂಗುಗುಂಡಿ ತೋಡಿದರು. ಇದರ ಪರಿಣಾಮವಾಗಿ ಎರಡು ವರ್ಷದಲ್ಲಿ  ಶಾಲೆಯ ಬಾವಿಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿತು. ಅಂದಿನಿಂದ ಅಂದಿನವರೆಗೆ ಬಾವಿಯಲ್ಲಿ  ನೀರು ಬತ್ತಿಲ್ಲ, ಶಾಲೆಯ ಚಟುವಟಿಕೆಗೆ ನೀರು ಕಡಿಮೆಯಾಗಿಲ್ಲ ಇಂದು ಚಂದ್ರಶೇಖರ ದಾಮ್ಲೆ ವಿಶ್ವಾಸದಿಂದ ಹೇಳುತ್ತಾರೆ.

 

ಈ ಬಾರಿ ಜಲ ಕ್ಷಾಮ ತೋರುತ್ತಿದ್ದಾಗ ಚಂದ್ರಶೇಖರ ದಾಮ್ಲೆ ಅವರಿಗೆ ಶಾಲೆಯ ಯಶೋಗಾಥೆ ಕಣ್ಣಮುಂದೆ ಬಂತು. ತಕ್ಷಣವೇ ಈ ವಿಚಾರವನ್ನು  ಹಂಚಿಕೊಂಡರು. ಇದಕ್ಕೆ ಪೂರಕವಾಗಿ ಅವರ ಪುತ್ರ ಅಕ್ಷರ ದಾಮ್ಲೆ ಅವರು ಕೂಡಾ ಜಲ ಸಂರಕ್ಷಣೆಗೆ ಶಾಲೆಯ ಮಕ್ಕಳ ಮನೆಯಲ್ಲಿ  ಕನಿಷ್ಠ ಒಂದು ಇಂಗುಗುಂಡಿ ರಚನ ಮಾಡಿಸಬೇಕು ಎಂಬ ಯೋಚನೆಯಲ್ಲಿದ್ದರು. ಹೀಗಾಗಿ ತಡ ಮಾಡದೆ ಶಾಲೆ ಆರಂಭವಾದ ತಕ್ಷಣವೇ ಮಕ್ಕಳಿಗೆ ಇಂಗುಗುಂಡಿ ಬಗ್ಗೆ ಮಾಹಿತಿ ನೀಡಿ ಮನೆಯಲ್ಲಿ  ಇಂಗುಗುಂಡಿ ರಚನೆ ಮಾಡಿ ಫೋಟೊ ಕಳಿಸಲು ಹೇಳಿದರು.  ಕೆಲವೇ ದಿನದಲ್ಲಿ  ಶಾಲೆಯ ಮಕ್ಕಳು ಇಂಗುಗುಂಡಿ ಮಾಡಿ ಫೋಟೊ ಕಳಿಸಿದರು. ಈಗ ಮಳೆ ಶುರುವಾಯಿತು. ನೀರು ಗುಂಡಿಯಲ್ಲಿ  ನಿಲ್ಲ ತೊಡಗಿದೆ. ಓಡುವ ನೀರು ನಿಂತಿದೆ. ನಿಂತ ನೀರು ಇಂಗುತ್ತಿದೆ. ಭವಿಷ್ಯದಲ್ಲಿ  ಲೀಟರ್ ಗಟ್ಟಲೆ ನೀರು ಭೂಮಿ ಸೇರಿ ನಮಗೂ ಲಭ್ಯವಾಗುತ್ತಿದೆ.

 

 

ಶಾಲೆಯ ವಿದ್ಯಾರ್ಥಿ ಜಯದೀಪ್ ಹೇಳುತ್ತಾನೆ, ಶಾಲೆಯಿಂದ ಈ ಸೂಚನೆ ಬಂದಾಗ ಖುಷಿಯಿಂದ ಇಂಗುಗುಂಡಿ ಮಾಡಿದ್ದೇನೆ. ಈಗ ನೀರು ನಿಲ್ಲುವಾಗ ಖುಷಿಯಾಗುತ್ತದೆ. ಬರುವ ವರ್ಷ ಇನ್ನೊಂದು ಇಂಗುಗುಂಡಿ ಮಾಡುತ್ತೇನೆ ಎನ್ನುತ್ತಾರೆ.

ಇನ್ನೊಬ್ಬ ವಿದ್ಯಾರ್ಥಿನಿ ಧೃತಿ ಹೇಳುತ್ತಾಳೆ,” ನಮಗೆ ಇಂಗುಗುಂಡಿ ಬಗ್ಗೆ ಗೊತ್ತಿರಲಿಲ್ಲ. ಈಗ ಇದರಲ್ಲಿ  ನೀರು ನಿಲ್ಲುವಾಗ ಖುಷಿಯಾಗುತ್ತದೆ ಎನ್ನುತ್ತಾರೆ.

 

 

 

ಇಂಗುಗುಂಡಿ ಬಗ್ಗೆ ಯೋಚನೆ ಮಾಡಿದ ಚಂದ್ರಶೇಖರ ದಾಮ್ಲೆ ಹಾಗೂ ಅಕ್ಷರ ದಾಮ್ಲೆ ಹೇಳುತ್ತಾರೆ, “ಜಲಸಂರಕ್ಷಣೆಗೆ ಮೊದಲ ಆದ್ಯತೆ ಇಂದು ಬೇಕಾಗಿದೆ. ಸರಕಾರ ಯೋಜನೆ ಮಾಡುವುದಕ್ಕಿಂತ ಪ್ರತಿಯೊಬ್ಬ ವ್ಯಕ್ತಿಗೂ ಜಾಗೃತಿಯಾಗಬೇಕಿದೆ. ಇದಕ್ಕಾಗಿ ಶಾಲೆಗಳಲ್ಲಿಯೇ ಮೊದಲ ಹೆಜ್ಜೆ ಇರಬೇಕು ಎಂಬುದು ನಮ್ಮ ಅಪೇಕ್ಷೆ” ಎನ್ನುತ್ತಾರೆ.

 

ಈ ಕೆಲಸ ಸುಳ್ಯ ತಾಲೂಕಿನ ಮಾತ್ರವಲ್ಲ ಜಿಲ್ಲೆಯ ಪ್ರತೀ ಶಾಲೆಗಳಲ್ಲಿ  ಒಂದು ಮಗು ಕನಿಷ್ಠ  ಒಂದು ಇಂಗುಗುಂಡಿ ರಚನೆ ಮಾಡುವ ಪ್ರೋತ್ಸಾಹ, ಶಾಲೆಯು ಮುತುವರ್ಜಿ ವಹಿಸುವಂತಾಗಬೇಕಿದೆ. ಜಲಸಂರಕ್ಷಣೆಗೆ ಸದ್ಯ ನಾವು ಮಾಡಬಹುದುದಾದ ಇಂದಿನ ಸಣ್ಣ ಪ್ರಯತ್ನ ಇದು.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಪೂರ್ವ ಮುಂಗಾರು ಸಿಡಿಲು, ಗಾಳಿ ಮಳೆಗೆ ಮುನ್ನೆಚ್ಚರಿಕೆ ವಹಿಸಿ : ವಿಜಯನಗರ ಜಿಲ್ಲಾಧಿಕಾರಿ ಸೂಚನೆ

ಪೂರ್ವ ಮುಂಗಾರು ಅವಧಿಯಲ್ಲಿ ಗುಡುಗು-ಸಿಡಿಲು ಹಾಗೂ ಗಾಳಿ ಮಳೆಯ ಅಪಾಯ ಇರುವ ಹಿನ್ನೆಲೆಯಲ್ಲಿ…

3 hours ago

ರಾಜ್ಯದಲ್ಲಿ ಟ್ರಾನ್ಸ್ಫಾರ್ಮರ್ ಕೊರತೆ: ಕೇರಳದಿಂದ ಖರೀದಿಗೆ ಸರ್ಕಾರ ನಿರ್ಧಾರ

ರಾಜ್ಯದಲ್ಲಿ ಟ್ರಾನ್ಸ್ಫಾರ್ಮರ್ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಕೇರಳದಿಂದ ಖರೀದಿ ಮಾಡಲು ಸರ್ಕಾರ ನಿರ್ಧರಿಸಿದೆ.…

3 hours ago

ಭತ್ತದ ಗದ್ದೆಯಿಂದ ಅಡಿಕೆ ತೋಟ | ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬಿಚ್ಚಿಟ್ಟ ಸಂಶೋಧನೆ

ಅಕ್ಕಿ ಗದ್ದೆಗಳನ್ನು ಅಡಿಕೆ ತೋಟಗಳಾಗಿ ಪರಿವರ್ತಿಸಿದಾಗ ಮಣ್ಣಿನ ನೈಟ್ರೋಜನ್‌ ಲಭ್ಯತೆ ಕಡಿಮೆಯಾಗುತ್ತದೆ ಎಂದು…

12 hours ago

ಹವಾಮಾನ ವರದಿ | 09-03-2026 | ಕರಾವಳಿ–ಮಲೆನಾಡಿನಲ್ಲಿ ಇಂದು ಸಂಜೆ ಗುಡುಗು ಮಳೆಯ ಸಾಧ್ಯತೆ | ಮಾರ್ಚ್ ಮಧ್ಯಭಾಗದಲ್ಲಿ ಮಳೆ ಚಟುವಟಿಕೆ ಹೆಚ್ಚಳ..?

ರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನೊಂದಿಗೆ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಕರಾವಳಿ ಹಾಗೂ…

19 hours ago

ರೈತರಿಂದ ಉದ್ಯಮಿಗಳವರೆಗೆ : ಕೃಷಿ ಕ್ಷೇತ್ರಕ್ಕೆ ಸರ್ಕಾರದ ಹೊಸ ದೃಷ್ಟಿಕೋನ

ರೈತರನ್ನು ಉದ್ಯಮಿಗಳನ್ನಾಗಿ ಮಾಡಲು ಬೆಳೆ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ವ್ಯವಸ್ಥೆಗಳನ್ನು ಸರ್ಕಾರ…

1 day ago

ಎಲೆಚುಕ್ಕಿ ರೋಗದಿಂದ ಅಡಿಕೆ ರೈತರಿಗೆ ಸಂಕಷ್ಟ | ಸಾಲ ಮರುಪಾವತಿ ಒಂದು ವರ್ಷ ಮುಂದೂಡುವ ಪ್ರಸ್ತಾವನೆ..!

ಉತ್ತರ ಕನ್ನಡದಲ್ಲಿ ಎಲೆಚುಕ್ಕಿ ರೋಗದಿಂದ ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರಿಗೆ ಸಾಲ ಮರುಪಾವತಿ ಅವಧಿ…

1 day ago