Advertisement
Categories: Uncategorized

ಸುಳ್ಯದ ರೈಲ್ವೇ ಪ್ರಯಾಣಿಕನ ಟ್ವಿಟ್ಟರ್ ದೂರಿಗೆ ತಕ್ಷಣ ಸ್ಪಂದಿಸಿದ ರೈಲ್ವೇ ಇಲಾಖೆ

Share

ಸುಳ್ಯ: ಮುಂಬಯಿಯಿಂದ ರೈಲ್ವೇ ಪ್ರಯಾಣ ಬೆಳೆಸಿದ ಸುಳ್ಯದ ಅವ್ಯಕ್ತ ಅವರ ಟ್ವಿಟ್ಟರ್ ದೂರಿಗೆ ರೈಲ್ವೇ ಇಲಾಖೆ ತಕ್ಷಣವೇ ಸ್ಪಂದಿಸಿ ಕೇವಲ 15 ನಿಮಿಷದಲ್ಲಿ ಪರಿಹಾರ ದೊರಕಿದೆ.

Advertisement
Advertisement
Advertisement
Advertisement

ಅವ್ಯಕ್ತ ಅವರು ಮುಂಬಯಿಯಿಂದ ಸುಳ್ಯದ ನಗರಸಭಾ ಚುನಾವಣೆಗೆ ಮತದಾನಕ್ಕಾಗಿ ನಿನ್ನೆ ರಾತ್ರಿ ರೈಲಿನಲ್ಲಿ  ಹೊರಟಿದ್ದರು. ರೈಲಿನಲ್ಲಿ  ಮುಂಬಯಿಂದ ಏರಿದ ಅವರಿಗೆ ಸರಿಯಾದ ದಿಂಬಿನ ವ್ಯವಸ್ಥೆ ಇದ್ದಿರಲಿಲ್ಲ. ಈ ಬಗ್ಗೆ ವಿಚಾರಣೆಗೂ ಸರಿಯಾದ ಅವಕಾಶ ಇರಲಿಲ್ಲ. ಇದಕ್ಕಾಗಿ ತಕ್ಷಣವೇ   ಟ್ವೀಟ್  ಮೂಲಕ ಪಿಯೂಶ್ ಗೋಯಲ್ ಹಾಗೂ ರೈಲ್ವೇ ಇಲಾಖೆಗೆ ಟ್ಯಾಗ್ ಮಾಡಿ ತಮ್ಮ ಸಮಸ್ಯೆಯನ್ನು  ಹೇಳಿದರು. ಅದಾದ ಮರುಕ್ಷಣವೇ ರೈಲ್ವೇ ಇಲಾಖೆಯಿಂದ  ಅವ್ಯಕ್ತ ಅವರು ಇರುವ ಬೋಗಿ ಹಾಗೂ ವಿವರ ಕೇಳಿ ಮೆಸೇಜ್ ಬಂತು. ಮುಂದೆ 15 ನಿಮಿಷದಲ್ಲಿ ಅವರ ಸಮಸ್ಯೆ ಪರಿಹಾರ ಕಂಡಿತು. ರೈಲ್ವೇ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಪಂದನೆ ನೀಡಿದರು.

Advertisement

ಇದೊಂದೇ ಅಲ್ಲ, ಈ ಹಿಂದೆ ಅವ್ಯಕ್ತ ಅವರ ಲ್ಯಾಪ್ ಟಾಪ್ ರೈಲು ನಿಲ್ದಾಣದಲ್ಲಿ ಕಳವಾಗಿತ್ತು. ಈ ಸಂದಭದಲ್ಲಿ ತಕ್ಷಣವೇ ಟ್ವೀಟ್ ಮಾಡಿದ್ದರು. ಆಗಲೂ ಪಿಯೋಶ್ ಗೋಯಲ್ ಅವರ ಕಚೇರಿಯಿಂದ ಅಧಿಕಾರಿಗಳು ಹಾಗೂ ಸಿಬಂದಿಗಳು  ತಕ್ಷಣವೇ ಸ್ಪಂದನೆ ನೀಡಿ ಸಿಸಿ ಟಿವಿ ದೃಶ್ಯವನ್ನು ಕೂಡಾ ವೀಕ್ಷಣೆ ಮಾಡಿದ್ದರು. ಕಳ್ಳನ ಪತ್ತೆಗೆ ಸತತ ಪ್ರಯತ್ನ ಮಾಡಿದ್ದರು. ಇದೆಲ್ಲಾ ಕೇವಲ ಒಂದು ಟ್ವೀಟ್ ನಿಂದ. ಅದಕ್ಕಿಂತಲೂ ಮಿಗಿಲಾಗಿ ಒಂದು ಟ್ವೀಟ್ ಗೆ ಇಲಾಖೆಗಳು, ಸಚಿವರು ಸ್ಪಂದಿಸುವ ರೀತಿ ಖುಷಿಯಾಗಿದೆ ಎನ್ನುತ್ತಾರೆ ಅವ್ಯಕ್ತ. ಈ ದೇಶದಲ್ಲಿ ಜನಸಾಮಾನ್ಯನ ದೂರಿಗೆ, ಮನವಿಗೆ ಬೆಲೆ ಇದೆ ಎನ್ನುವುದು ಇಲ್ಲಿ  ತಿಳಿಯುತ್ತದೆ. ದೇಶದಲ್ಲಿ ಯಾರೂ ಅನಾಥರಾಗುವುದಿಲ್ಲ, ಎಲ್ಲರೂ ಟ್ವೀಟ್ ಮೂಲಕ ಇಲಾಖೆ ಜೊತೆ ಮಾತನಾಡಬಹುದು ಎಂಬುದಕ್ಕೆ ಇದೊಂದು ಸಾಕ್ಷಿ ಎನ್ನುತ್ತಾರೆ ಅವ್ಯಕ್ತ.

    ಅವ್ಯಕ್ತ  ಸುಳ್ಯದ ಬೀಗ್ರೋಸ್ ಮಾಲಕ. ಆರ್ ಕೆ ಭಟ್ ಸುಳ್ಯ ಅವರ ಪುತ್ರ.

Advertisement

 

Advertisement

 

Advertisement

 

 

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವಿಶ್ವೇಶ್ವರ ಭಟ್‌ ಬಂಗಾರಡ್ಕ ಅವರಿಂದ ಬಜೆಟ್‌ ವಿಶ್ಲೇಷಣೆ |

‌ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್‌…

14 mins ago

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ

ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ  ಸುಮಾರು 250…

21 hours ago

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಸಕಲ ಕ್ರಮ | ಮುಖ್ಯಮಂತ್ರಿ  ಸಿದ್ದರಾಮಯ್ಯ

ರಾಜ್ಯದ ಕಾಡಂಚಿನ ಪ್ರದೇಶದಲ್ಲಿ  ಮಾನವ ಮತ್ತು  ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…

21 hours ago

ಎಲ್ಲಾ ಕೃಷಿ ಉತ್ಪನ್ನಗಳಿಗೆ ಎಂಎಸ್‌ಪಿ ಕಾನೂನು ಜಾರಿಗೆ ರಾಜ್ಯ ರೈತ ಸಂಘಟನೆಗಳ ಮನವಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಮಂಡಿಸಲಿರುವ ಕೇಂದ್ರ ಬಜೆಟ್ 2025…

21 hours ago