ಸುಳ್ಯ: ಮುಂಬಯಿಯಿಂದ ರೈಲ್ವೇ ಪ್ರಯಾಣ ಬೆಳೆಸಿದ ಸುಳ್ಯದ ಅವ್ಯಕ್ತ ಅವರ ಟ್ವಿಟ್ಟರ್ ದೂರಿಗೆ ರೈಲ್ವೇ ಇಲಾಖೆ ತಕ್ಷಣವೇ ಸ್ಪಂದಿಸಿ ಕೇವಲ 15 ನಿಮಿಷದಲ್ಲಿ ಪರಿಹಾರ ದೊರಕಿದೆ.
ಅವ್ಯಕ್ತ ಅವರು ಮುಂಬಯಿಯಿಂದ ಸುಳ್ಯದ ನಗರಸಭಾ ಚುನಾವಣೆಗೆ ಮತದಾನಕ್ಕಾಗಿ ನಿನ್ನೆ ರಾತ್ರಿ ರೈಲಿನಲ್ಲಿ ಹೊರಟಿದ್ದರು. ರೈಲಿನಲ್ಲಿ ಮುಂಬಯಿಂದ ಏರಿದ ಅವರಿಗೆ ಸರಿಯಾದ ದಿಂಬಿನ ವ್ಯವಸ್ಥೆ ಇದ್ದಿರಲಿಲ್ಲ. ಈ ಬಗ್ಗೆ ವಿಚಾರಣೆಗೂ ಸರಿಯಾದ ಅವಕಾಶ ಇರಲಿಲ್ಲ. ಇದಕ್ಕಾಗಿ ತಕ್ಷಣವೇ ಟ್ವೀಟ್ ಮೂಲಕ ಪಿಯೂಶ್ ಗೋಯಲ್ ಹಾಗೂ ರೈಲ್ವೇ ಇಲಾಖೆಗೆ ಟ್ಯಾಗ್ ಮಾಡಿ ತಮ್ಮ ಸಮಸ್ಯೆಯನ್ನು ಹೇಳಿದರು. ಅದಾದ ಮರುಕ್ಷಣವೇ ರೈಲ್ವೇ ಇಲಾಖೆಯಿಂದ ಅವ್ಯಕ್ತ ಅವರು ಇರುವ ಬೋಗಿ ಹಾಗೂ ವಿವರ ಕೇಳಿ ಮೆಸೇಜ್ ಬಂತು. ಮುಂದೆ 15 ನಿಮಿಷದಲ್ಲಿ ಅವರ ಸಮಸ್ಯೆ ಪರಿಹಾರ ಕಂಡಿತು. ರೈಲ್ವೇ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಪಂದನೆ ನೀಡಿದರು.
ಇದೊಂದೇ ಅಲ್ಲ, ಈ ಹಿಂದೆ ಅವ್ಯಕ್ತ ಅವರ ಲ್ಯಾಪ್ ಟಾಪ್ ರೈಲು ನಿಲ್ದಾಣದಲ್ಲಿ ಕಳವಾಗಿತ್ತು. ಈ ಸಂದಭದಲ್ಲಿ ತಕ್ಷಣವೇ ಟ್ವೀಟ್ ಮಾಡಿದ್ದರು. ಆಗಲೂ ಪಿಯೋಶ್ ಗೋಯಲ್ ಅವರ ಕಚೇರಿಯಿಂದ ಅಧಿಕಾರಿಗಳು ಹಾಗೂ ಸಿಬಂದಿಗಳು ತಕ್ಷಣವೇ ಸ್ಪಂದನೆ ನೀಡಿ ಸಿಸಿ ಟಿವಿ ದೃಶ್ಯವನ್ನು ಕೂಡಾ ವೀಕ್ಷಣೆ ಮಾಡಿದ್ದರು. ಕಳ್ಳನ ಪತ್ತೆಗೆ ಸತತ ಪ್ರಯತ್ನ ಮಾಡಿದ್ದರು. ಇದೆಲ್ಲಾ ಕೇವಲ ಒಂದು ಟ್ವೀಟ್ ನಿಂದ. ಅದಕ್ಕಿಂತಲೂ ಮಿಗಿಲಾಗಿ ಒಂದು ಟ್ವೀಟ್ ಗೆ ಇಲಾಖೆಗಳು, ಸಚಿವರು ಸ್ಪಂದಿಸುವ ರೀತಿ ಖುಷಿಯಾಗಿದೆ ಎನ್ನುತ್ತಾರೆ ಅವ್ಯಕ್ತ. ಈ ದೇಶದಲ್ಲಿ ಜನಸಾಮಾನ್ಯನ ದೂರಿಗೆ, ಮನವಿಗೆ ಬೆಲೆ ಇದೆ ಎನ್ನುವುದು ಇಲ್ಲಿ ತಿಳಿಯುತ್ತದೆ. ದೇಶದಲ್ಲಿ ಯಾರೂ ಅನಾಥರಾಗುವುದಿಲ್ಲ, ಎಲ್ಲರೂ ಟ್ವೀಟ್ ಮೂಲಕ ಇಲಾಖೆ ಜೊತೆ ಮಾತನಾಡಬಹುದು ಎಂಬುದಕ್ಕೆ ಇದೊಂದು ಸಾಕ್ಷಿ ಎನ್ನುತ್ತಾರೆ ಅವ್ಯಕ್ತ.
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…
ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…
ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…
ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್ನಲ್ಲಿ ಆಮದು…
ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…
ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…