ಸುಳ್ಯ: ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ಅವರಿಗೆ ಮಂಡ್ಯ ಜಿಲ್ಲೆಯ ನೆಲಮಂಗಲ ತಾಲೂಕು ತಹಶೀಲ್ದಾರ್ ಆಗಿ ವರ್ಗಾವಣೆಯಾಗಿದೆ. ಪುತ್ತೂರು ತಹಶೀಲ್ದಾರ್ ಅನಂತಶಂಕರ ಅವರಿಗೆ ಅಧಿಕಾರ ಹಸ್ತಾಂತರಿಸಿದ ಕುಂಞಿ ಅಹಮ್ಮದ್ ಫೆ.1 ರಂದು ಸುಳ್ಯದಿಂದ ತೆರಳಿದ್ದಾರೆ. ಸುಳ್ಯಕ್ಕೆ ತಹಶೀಲ್ದಾರ್ ಇನ್ನಷ್ಟೇ ನೇಮಕ ಆಗಬೇಕಾಗಿದ್ದು ಅದುವರೆಗೆ ಅನಂತಶಂಕರ್ ಪ್ರಭಾರ ತಹಶೀಲ್ದಾರ್ ಆಗಿರುತ್ತಾರೆ.
ಒಂದು ವರುಷದಿಂದ ಸುಳ್ಯದ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದ ಕುಂಞಿ ಅಹಮ್ಮದ್ ಜನಪರ ಅಧಿಕಾರಿ ಎಂದು ಹೆಸರು ಪಡೆದಿದ್ದರು. ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ತ್ವರಿತವಾಗಿ ಕೆಲಸ ಮಾಡಿಕೊಡುತ್ತಿದ್ದರು. ಜನರಿಗೆ ಅತ್ಯಂತ ಹತ್ತಿರವಾಗಿ ಜನರ ಮಧ್ಯೆ ಕೆಲಸ ಮಾಡುತ್ತಿದ್ದರು. ಒಂದು ವರ್ಷದ ಅವಧಿಯಲ್ಲಿ ನಾಲ್ಕನೇ ಬಾರಿ ಇವರ ವರ್ಗಾವಣೆ ಆಗಿದೆ. ಈ ಹಿಂದೆ ಮೂರು ಬಾರಿ ಇವರಿಗೆ ವರ್ಗಾವಣೆ ಆಗಿದ್ದರೂ ಕಾರಣಾಂತರಗಳಿಂದ ತಡೆ ಹಿಡಿಯಲಾಗಿತ್ತು. ಇವರ ವರ್ಗಾವಣೆಗೆ ಜನರಿಂದ ಭಾರೀ ವಿರೋಧ, ಪ್ರತಿಭಟನೆಗಳು ನಡೆದಿತ್ತು. ಆದರೆ ಅತ್ಯಂತ ಜನಪ್ರಿಯ ಮತ್ತು ನಿಷ್ಟಾವಂತ ಅಧಿಕಾರಿಯನ್ನು ತಾಲೂಕಿನಲ್ಲಿಯೇ ಉಳಿಸಬೇಕೆಂದು ಜನರಿಂದ ಬೇಡಿಕೆ ಇದ್ದರೂ ಅವರನ್ನು ಇಲ್ಲಿ ಉಳಿಸಲು ಜನಪ್ರತಿನಿಧಿಗಳು ಮತ್ತು ಸರಕಾರ ಪ್ರಯತ್ನ ನಡೆಸಿಲ್ಲ ಎಂಬ ನೋವನ್ನು ಸಾರ್ವಜನಿಕರು ತೋಡಿಕೊಳ್ಳುತ್ತಾರೆ. ಇನ್ನೂ ಒಂದೆರಡು ವರುಷ ಸುಳ್ಯದಲ್ಲಿ ಕೆಲಸ ಮಾಡಲು ಕುಂಞಿ ಅಹಮ್ಮದ್ ಮನಸ್ಸು ಮಾಡಿದ್ದರೂ, ಅವರನ್ನು ವರ್ಗಾವಣೆ ಮಾಡಿಸಲು ಕೆಲವೊಂದು ರಾಜಕೀಯ ಒತ್ತಡಗಳು ಕೆಲಸ ಮಾಡಿದೆ ಎಂಬ ಮಾತುಗಳೂ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ. ತಾಲೂಕು ಕಚೇರಿಯನ್ನು ದಲ್ಲಾಳಿಗಳಿಂದ ಮುಕ್ತ ಮಾಡಿ ಪಾರದರ್ಶಕ ಮತ್ತು ಜನಸ್ನೇಹಿ ಕಚೇರಿಯನ್ನಾಗಿ ಪರಿವರ್ತಿಸಲು ಕುಂಞಿ ಅಹಮ್ಮದ್ ಪ್ರಯತ್ನ ನಡೆಸಿದ್ದರು. ಇದು ಕೂಡ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು ಎಂದು ಹೇಳಲಾಗಿದೆ.
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…
ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…
ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…
ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…
ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…