Advertisement
MIRROR FOCUS

ಸೋಣೆ ಹಬ್ಬ ( ಆಗಸ್ಟ್ 16)

Share

ಹಬ್ಬಗಳೆಂದರೆ ಹೆಣ್ಣು ಮಕ್ಕಳಿಗೆ ಯಾವಾಗಲೂ ಸಂಭ್ರಮವೇ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ವಿಶೇಷತೆಯಿದೆ. ಅದರಲ್ಲೂ ಕರಾವಳಿಯ ಹೆಣ್ಣು ಮಕ್ಕಳಿಗೆ ಸೋಣೆ ತಿಂಗಳೆಂದರೆ ವಿಶೇಷವಾದುದು. ಇದು ಶ್ರಾವಣ ಮಾಸದ ಸಿಂಹ ಸಂಕ್ರಮಣದ ದಿನ., ಸೋಣೆ ಸಂಕ್ರಾಂತಿ ಹೆಂಗೆಳೆಯರಿಗೆ ನೇರವಾಗಿ ಸಂಭಂದಿಸಿದ ವಿಶೇಷವಾದ ಹಬ್ಬ… .

ಹೊಸ್ತಿಲಿಗೆ ರಂಗೋಲಿ ಬರೆದು, ಕುಂಕುಮ, ಅರಶಿನ ಹಚ್ಚಿ ಹೂ ಇಟ್ಟು ನಮಸ್ಕರಿಸಿ ಪೂಜಿಸುವುದು ಸುಮಂಗಲಿಯರು ನಿತ್ಯವೂ ನಿರ್ವಹಿಸುವ ಅಭ್ಯಾಸ. ನಿತ್ಯ ಯಾವುದೇ ಸಾದಾ ಪುಷ್ಪವನ್ನು ಹೊಸಿಲಿಗೆ ಇಟ್ಟು ನಮಸ್ಕರಿಸಲಾಗುತ್ತದೆ. ಆದರೆ ಸೋಣೆ ತಿಂಗಳಲ್ಲಿ ನೈವೇದ್ಯವನ್ನೂ , ಅರ್ಪಿಸಲಾಗುತ್ತದೆ. ಮುಂಜಾನೆಯೇ ಶುಚಿರ್ಭೂತರಾಗಿ, ಹೊಸ್ತಿಲುಗಳನ್ನು ಶುಚಿಗೊಳಿಸಲಾಗುತ್ತದೆ. ಆಮೇಲೆ ಹೊಸ್ತಿಲಿನ ಎರಡೂ ಬದಿಗಳಿಗೆ ರಂಗೋಲಿಗಳನ್ನು ಹಾಕಿ ಹೂಗಳಿಂದ ಸಿಂಗರಿಸಲಾಗುತ್ತದೆ. ಹೂವೆಂದರೆ ಸೋಣೆ ಹೂ( ನೀರು‌ಕಡ್ಡಿ ಹೂ), ಕಾಯಿಹಿಂಡಿಗೆ( ಅರಶಿನ ಬಣ್ಣದ ಹೂ ಇರುವ ಗಿಡ) ಹೂ, ಕೆರಮಣೆ ಸೊಪ್ಪುಗಳನ್ನು ಬಳಸಲಾಗುತ್ತದೆ. ಜೊತೆಗೆ ಹಿಂದಿನ ‌ರಾತ್ರಿಯೇ ಸಿದ್ಧಪಡಿಸಿಟ್ಟು ಕೊಂಡ ಹುರಿದ ಹಲಸಿನ ಬೇಳೆ, ಗೇರುಬೀಜ ಹಾಗೂ ತೆಂಗಿನ ಕಾಯಿ ಒಡೆದು, ಒಂದು ತಂಬಿಗೆ ನೀರುಗಳನ್ನೆಲ್ಲಾ ಇಟ್ಟು ನೈವೇದ್ಯ ಸಲ್ಲಿಸಲಾಗುತ್ತದೆ. ಹೊಸ್ತಿಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲಾಗುತ್ತದೆ. ಸೋಣೆ ತಿಂಗಳುದ್ದಕ್ಕೂ ಹೂಗಳನ್ನಿಟ್ಟು ಅಡ್ಡಬೀಳುವ ಸಂಪ್ರದಾಯವಿದೆ . ಈ ಪದ್ಧತಿಯನ್ನು ಕೆಲವು ಮನೆಗಳಲ್ಲಿ ಇಂದಿಗೂ ಆಚರಿಸುತ್ತಾರೆ. ಆದರೆ ಹಲಸಿನ ಬೀಜ, ಗೇರುಬೀಜಗಳನ್ನು ಸೋಣೆ ಸಂಕ್ರಾಂತಿಯಂದು ಮಾತ್ರ ನೈವೇದ್ಯ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಸೋಣೆ ಹೂ ಹಾಗೂ ಕಾಯಿ ಹಿಂಡಿಗೆ ಹೂಗಳನ್ನು ‌ಇಟ್ಟು ನಮಸ್ಕರಿಸಿ ಮನೆಗೆ, ಮನೆಯವರ ಒಳಿತಿಗಾಗಿ‌ ಹಾರೈಸುವ ಪದ್ಧತಿ ಬಳಕೆಯಲ್ಲಿದೆ.

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

4 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

11 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

22 hours ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

1 day ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

1 day ago

ತೆಂಗಿನ ಮರದಿಂದ 3 ಕೋಟಿ ಜನರಿಗೆ ಬದುಕು…!, ಈಗ ₹7,038 ಕೋಟಿ ರಫ್ತು!

ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…

1 day ago