Advertisement
MIRROR FOCUS

ಸೋಣೆ ಹಬ್ಬ ( ಆಗಸ್ಟ್ 16)

Share

ಹಬ್ಬಗಳೆಂದರೆ ಹೆಣ್ಣು ಮಕ್ಕಳಿಗೆ ಯಾವಾಗಲೂ ಸಂಭ್ರಮವೇ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ವಿಶೇಷತೆಯಿದೆ. ಅದರಲ್ಲೂ ಕರಾವಳಿಯ ಹೆಣ್ಣು ಮಕ್ಕಳಿಗೆ ಸೋಣೆ ತಿಂಗಳೆಂದರೆ ವಿಶೇಷವಾದುದು. ಇದು ಶ್ರಾವಣ ಮಾಸದ ಸಿಂಹ ಸಂಕ್ರಮಣದ ದಿನ., ಸೋಣೆ ಸಂಕ್ರಾಂತಿ ಹೆಂಗೆಳೆಯರಿಗೆ ನೇರವಾಗಿ ಸಂಭಂದಿಸಿದ ವಿಶೇಷವಾದ ಹಬ್ಬ… .

ಹೊಸ್ತಿಲಿಗೆ ರಂಗೋಲಿ ಬರೆದು, ಕುಂಕುಮ, ಅರಶಿನ ಹಚ್ಚಿ ಹೂ ಇಟ್ಟು ನಮಸ್ಕರಿಸಿ ಪೂಜಿಸುವುದು ಸುಮಂಗಲಿಯರು ನಿತ್ಯವೂ ನಿರ್ವಹಿಸುವ ಅಭ್ಯಾಸ. ನಿತ್ಯ ಯಾವುದೇ ಸಾದಾ ಪುಷ್ಪವನ್ನು ಹೊಸಿಲಿಗೆ ಇಟ್ಟು ನಮಸ್ಕರಿಸಲಾಗುತ್ತದೆ. ಆದರೆ ಸೋಣೆ ತಿಂಗಳಲ್ಲಿ ನೈವೇದ್ಯವನ್ನೂ , ಅರ್ಪಿಸಲಾಗುತ್ತದೆ. ಮುಂಜಾನೆಯೇ ಶುಚಿರ್ಭೂತರಾಗಿ, ಹೊಸ್ತಿಲುಗಳನ್ನು ಶುಚಿಗೊಳಿಸಲಾಗುತ್ತದೆ. ಆಮೇಲೆ ಹೊಸ್ತಿಲಿನ ಎರಡೂ ಬದಿಗಳಿಗೆ ರಂಗೋಲಿಗಳನ್ನು ಹಾಕಿ ಹೂಗಳಿಂದ ಸಿಂಗರಿಸಲಾಗುತ್ತದೆ. ಹೂವೆಂದರೆ ಸೋಣೆ ಹೂ( ನೀರು‌ಕಡ್ಡಿ ಹೂ), ಕಾಯಿಹಿಂಡಿಗೆ( ಅರಶಿನ ಬಣ್ಣದ ಹೂ ಇರುವ ಗಿಡ) ಹೂ, ಕೆರಮಣೆ ಸೊಪ್ಪುಗಳನ್ನು ಬಳಸಲಾಗುತ್ತದೆ. ಜೊತೆಗೆ ಹಿಂದಿನ ‌ರಾತ್ರಿಯೇ ಸಿದ್ಧಪಡಿಸಿಟ್ಟು ಕೊಂಡ ಹುರಿದ ಹಲಸಿನ ಬೇಳೆ, ಗೇರುಬೀಜ ಹಾಗೂ ತೆಂಗಿನ ಕಾಯಿ ಒಡೆದು, ಒಂದು ತಂಬಿಗೆ ನೀರುಗಳನ್ನೆಲ್ಲಾ ಇಟ್ಟು ನೈವೇದ್ಯ ಸಲ್ಲಿಸಲಾಗುತ್ತದೆ. ಹೊಸ್ತಿಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಲಾಗುತ್ತದೆ. ಸೋಣೆ ತಿಂಗಳುದ್ದಕ್ಕೂ ಹೂಗಳನ್ನಿಟ್ಟು ಅಡ್ಡಬೀಳುವ ಸಂಪ್ರದಾಯವಿದೆ . ಈ ಪದ್ಧತಿಯನ್ನು ಕೆಲವು ಮನೆಗಳಲ್ಲಿ ಇಂದಿಗೂ ಆಚರಿಸುತ್ತಾರೆ. ಆದರೆ ಹಲಸಿನ ಬೀಜ, ಗೇರುಬೀಜಗಳನ್ನು ಸೋಣೆ ಸಂಕ್ರಾಂತಿಯಂದು ಮಾತ್ರ ನೈವೇದ್ಯ ಮಾಡಲಾಗುತ್ತದೆ. ಉಳಿದ ದಿನಗಳಲ್ಲಿ ಸೋಣೆ ಹೂ ಹಾಗೂ ಕಾಯಿ ಹಿಂಡಿಗೆ ಹೂಗಳನ್ನು ‌ಇಟ್ಟು ನಮಸ್ಕರಿಸಿ ಮನೆಗೆ, ಮನೆಯವರ ಒಳಿತಿಗಾಗಿ‌ ಹಾರೈಸುವ ಪದ್ಧತಿ ಬಳಕೆಯಲ್ಲಿದೆ.

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಭಾರೀ ಮಳೆ ಹಿನ್ನೆಲೆ – ಆಗಸ್ಟ್‌ 1ರಂದು ದಕ್ಷಿಣ ಕನ್ನಡದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲೆ, ಪಿಯು, ಐಟಿಐ…

12 minutes ago

ಹವಾಮಾನ ವರದಿ | 31-06-2026 | ಆಗಸ್ಟ್ 4ಕ್ಕೆ ಇನ್ನೊಂದು ವಾಯುಭಾರ ಕುಸಿತ ಸಾಧ್ಯತೆ..?

ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 1ರವರೆಗೆ ಬಿಟ್ಟು ಬಿಟ್ಟು ಉತ್ತಮ ಮಳೆಯ ಮುನ್ಸೂಚನೆ…

2 hours ago

ಸುಳ್ಯ ಸುತ್ತಮುತ್ತ ಭಾರೀ ಮಳೆ – ಬಾಳುಗೋಡಿನಲ್ಲಿ ಈ ವರ್ಷದ ಮೊದಲ ಸೇತುವೆ ಮುಳುಗಡೆ, ಹೊಳೆ-ತೋಡುಗಳು ತುಂಬಿ ಹರಿವು

ಸುಳ್ಯ ತಾಲೂಕಿನ ಬಾಳುಗೋಡು, ಹರಿಹರ, ಬಳ್ಪ, ಗುತ್ತಿಗಾರು, ಸುಬ್ರಹ್ಮಣ್ಯ ಸೇರಿದಂತೆ ಹಲವು ಗ್ರಾಮಗಳಲ್ಲಿ…

3 hours ago

ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ – ಬಾಂಗ್ಲಾದೇಶದ ವಿಜ್ಞಾನಿಗಳಿಂದ ಹೊಸ ತಂತ್ರಜ್ಞಾನಕ್ಕೆ ಪೇಟೆಂಟ್

ಬಾಂಗ್ಲಾದೇಶದ ವಿಜ್ಞಾನಿಗಳು ಹಲಸಿನ ಬೀಜದಿಂದ ಖನಿಜಾಂಶ ಸಮೃದ್ಧ ಆಹಾರ ತಯಾರಿಸುವ ತಂತ್ರಜ್ಞಾನಕ್ಕೆ ಪೇಟೆಂಟ್…

10 hours ago

ಹೊಂಬಾಳೆ ಕಳ್ಳರ ಹಾವಳಿ : ಅಡಿಕೆ ಬೆಳೆಗಾರರ ನಿದ್ದೆಗೆಡಿಸಿದ ಕಳ್ಳತನ

ದೊಡ್ಡಬಳ್ಳಾಪುರ ಭಾಗದಲ್ಲಿ ಅಡಿಕೆ ಹೊಂಬಾಳೆಗಳನ್ನು ಕಳ್ಳರು ಕದ್ದೊಯ್ಯುತ್ತಿರುವ ಘಟನೆಗಳು ಹೆಚ್ಚಾಗಿವೆ. ಇದರಿಂದ ರೈತರು…

11 hours ago