ಸುಳ್ಯ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿ ಅಕ್ಷರ ದಾಮ್ಲೆ ಇಂಗುಗುಂಡಿಯ ಟಾಸ್ಕ್ ಕೊಟ್ಟಿದ್ದರು. ಇದಕ್ಕೆ ಸ್ನೇಹ ಸೆಕೆಂಡರಿ ಮತ್ತು ಪ್ರೌಢಶಾಲೆಯ 105 ಮಕ್ಕಳೂ ಇಂಗು ಗುಂಡಿ ಮಾಡಿ ಅದರ ಮುಂದೆ ನಿಂತು ಫೊಟೊ ತೆಗೆಸಿ ಕಳಿಸಿದ್ದಾರೆ. ಆ ಫೊಟೊಗಳನ್ನು ಸಂಕಲಿಸಿ ತಯಾರಿಸಿದ ಫ್ಲೆಕ್ಸ್ ನ ಅನಾವರಣವನ್ನು ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ನೆರವೇರಿಸಿದರು.
ಪ್ರತಿಯೊಬ್ಬರೂ ಸ್ವತಃ ಮಣ್ಣು ಅಗೆದು ಎರಡು ಘನ ಅಡಿಯ ಇಂಗು ಗುಂಡಿಯನ್ನು ಮನೆಯ ಪರಿಸರದಲ್ಲಿ ಮಾಡಬೇಕು. ಹೀಗೆ ಮಾಡುವುದರಿಂದ ಪರಿಸರದಲ್ಲಿ ನೀರಿನ ಸಂರಕ್ಷಣೆ ಆಗುತ್ತದೆ ಎಂಬ ಉದ್ದೇಶದಿಂದ ಈ ಗುಂಡಿಯನ್ನು ಮಾಡಲಾಗಿದೆ. ಪ್ರತಿಯೊಬ್ಬ ಮಗುವೂ ಇನ್ನೊಂದು ಗುಂಡಿ ಮಾಡಬೇಕಲ್ಲದೆ ತನ್ನ ಹುಟ್ಟುಹಬ್ಬದ ದಿನ ಒಂದು ಗಿಡ ನೆಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಮಹೇಶ್ ಹೇಳಿದರು. ಪ್ಲೆಕ್ಸ್ ಅನಾವರಣದ ಸಂದರ್ಭ ಸ್ನೇಹ ಶಿಕ್ಷಣ ಸಂಸ್ಥೆಯ ಸಂಚಾಲಕ ಚಂದ್ರಶೇಖರ ದಾಮ್ಲೆ ಉಪಸ್ಥಿತರಿದ್ದರು.
16.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ ಯೋಗೇಶ್ ತೋರಿಸಿಕೊಟ್ಟಿದ್ದಾರೆ.…
ನುಡಿದಂತೆ ನಡೆದಾತ ‘ರಾಜಾ ಹರಿಶ್ಚಂದ್ರ’. ಸತ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತ್ಯಾಗಿ. ಅನೃತವನ್ನಾಡದೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಸಾರ್ವಜನಿಕ ಹಿತದೃಷ್ಠಿಯಿಂದ ಆಗುಂಬೆ ಘಾಟಿಯ ಮೂಲಕ ನಾಳೆಯಿಂದ ಸೆಪ್ಟಂಬರ್ 30 ರವರೆಗೆ ಲಘು…
ಕೃಷಿ ಸಂಸ್ಕರಣಾ ಘಟಕ ಸ್ಥಾಪಿಸುವ ರೈತರಿಗೆ ಈ ವರ್ಷದಿಂದ ರಾಜ್ಯ ಸರ್ಕಾರ 9…