ಸುಳ್ಯ: ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪೌರ ಕಾರ್ಮಿಕರ ರಜೆಯ ಹಿನ್ನಲೆಯಲ್ಲಿ ದಿನದ ಸ್ವಚ್ಛತೆಗೆ ತೊಡಕಾಗದಂತೆ ಸುಳ್ಯದ ಸ್ವಚ್ಛ ನಗರ ತಂಡ ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದರು. ಸುಳ್ಯ ಗಾಂಧೀನಗರದಿಂದ ಹಳೆಗೇಟಿನವರೆಗೆ ಸ್ವಚ್ಛ ನಗರ ಸುಳ್ಯ ತಂಡ ಬೆಳಿಗ್ಗೆ 6.30 ರಿಂದ 9 ಗಂಟೆಯವರೆಗೆ ಸ್ವಚ್ಛತಾ ಕಾರ್ಯ ನಡೆಸಿ ಪೌರ ಸೇವೆ ಮಾಡಿದರು. ಒಂದು ದಿನದ ಕಸವೂ ನಾಳೆಗೆ ಕಾರ್ಮಿಕರಿಗೆ ಹೊರೆಯಾಗಬಾರದು ಎಂಬ ಕಳಕಳಿಯಿಂದ ಈ ಕಾರ್ಯ ನಡೆಸಿದರು. ನಗರ ಪಂಚಾಯತ್ ನ ಅಧಿಕಾರಿಗಳೇ ವಾಹನ ಚಾಲಕರಾಗಿಯೂ ಸ್ವಚ್ಛತೆಯಲ್ಲೂ ತಮ್ಮನ್ನು ತೊಡಗಿಸಿಕೊಂಡರು.
ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ಆರೋಗ್ಯ ಅಧಿಕಾರಿ ರವಿ ಕೃಷ್ಣ, ಸ್ವಚ್ಛ ನಗರ ಸುಳ್ಯ ತಂಡದ ವಿನೋದ್ ಲಸ್ರಾದೋ ,ಲೋಕೇಶ್ ಗುಡ್ಡೆಮನೆ, ವಿಖ್ಯಾತ್ ಬಾರ್ಪಣೆ ಲೋಕೇಶ್ ಕೆರೆಮೂಲೆ, ಶರತ್, ನವೀನ ಕರುಂಬಯ್ಯ, ಎ.ಎಂ.ಭಟ್ , ಕೆ.ವಿ ಮನೋಹರ ,ಇಲ್ಯಾಸ್ ಅಜ್ಜಾವರ, ಸಿದ್ದಿಕ್ ಗೂನಡ್ಕ,ಶರೀಪ್ ಜಟ್ಟಿಪಳ್ಳ, ರಾಮಚಂದ್ರ ಪೆಲ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.
ಮ್ಯಾನ್ಮಾರ್ನಿಂದ ಭಾರತಕ್ಕೆ ಅಕ್ರಮವಾಗಿ ಅಡಿಕೆ ಸಾಗಿಸುತ್ತಿದ್ದ ಮೂರು ಹಂತದ ಜಾಲವನ್ನು ಇಡಿ ತನಿಖೆಯಲ್ಲಿ…
ಗೋಕರ್ಣದಲ್ಲಿ ನಡೆದ 'ಅನ್ನಂ ಬ್ರಹ್ಮ' ಪ್ರವಚನದಲ್ಲಿ ರಾಘವೇಶ್ವರ ಭಾರತೀ ಶ್ರೀಗಳು ಭೋಜನವೇ ಅದ್ವೈತ…
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಪ್ರತಿಭಟನಾನಿರತ ಕೃಷಿ ವಿದ್ಯಾರ್ಥಿಗಳಿಗೆ ಸರ್ಕಾರ…
ಉಪಗ್ರಹ, ಡ್ರೋನ್, GIS, AI ಮತ್ತು ಮಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ರಾಜ್ಯ…
ಬರ್ಮಾ ಅಡಿಕೆ ಕಳ್ಳಸಾಗಣೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇಡಿ ಸಿಲ್ಚಾರ್ನ…
ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 10ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಲಕ್ಷಣಗಳು ಗೋಚರಿಸಿವೆ.…