ಸುಳ್ಯ: ಪೌರ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಪೌರ ಕಾರ್ಮಿಕರ ರಜೆಯ ಹಿನ್ನಲೆಯಲ್ಲಿ ದಿನದ ಸ್ವಚ್ಛತೆಗೆ ತೊಡಕಾಗದಂತೆ ಸುಳ್ಯದ ಸ್ವಚ್ಛ ನಗರ ತಂಡ ಸ್ವಚ್ಛತಾ ಕಾರ್ಯವನ್ನು ನೆರವೇರಿಸಿದರು. ಸುಳ್ಯ ಗಾಂಧೀನಗರದಿಂದ ಹಳೆಗೇಟಿನವರೆಗೆ ಸ್ವಚ್ಛ ನಗರ ಸುಳ್ಯ ತಂಡ ಬೆಳಿಗ್ಗೆ 6.30 ರಿಂದ 9 ಗಂಟೆಯವರೆಗೆ ಸ್ವಚ್ಛತಾ ಕಾರ್ಯ ನಡೆಸಿ ಪೌರ ಸೇವೆ ಮಾಡಿದರು. ಒಂದು ದಿನದ ಕಸವೂ ನಾಳೆಗೆ ಕಾರ್ಮಿಕರಿಗೆ ಹೊರೆಯಾಗಬಾರದು ಎಂಬ ಕಳಕಳಿಯಿಂದ ಈ ಕಾರ್ಯ ನಡೆಸಿದರು. ನಗರ ಪಂಚಾಯತ್ ನ ಅಧಿಕಾರಿಗಳೇ ವಾಹನ ಚಾಲಕರಾಗಿಯೂ ಸ್ವಚ್ಛತೆಯಲ್ಲೂ ತಮ್ಮನ್ನು ತೊಡಗಿಸಿಕೊಂಡರು.
ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ಆರೋಗ್ಯ ಅಧಿಕಾರಿ ರವಿ ಕೃಷ್ಣ, ಸ್ವಚ್ಛ ನಗರ ಸುಳ್ಯ ತಂಡದ ವಿನೋದ್ ಲಸ್ರಾದೋ ,ಲೋಕೇಶ್ ಗುಡ್ಡೆಮನೆ, ವಿಖ್ಯಾತ್ ಬಾರ್ಪಣೆ ಲೋಕೇಶ್ ಕೆರೆಮೂಲೆ, ಶರತ್, ನವೀನ ಕರುಂಬಯ್ಯ, ಎ.ಎಂ.ಭಟ್ , ಕೆ.ವಿ ಮನೋಹರ ,ಇಲ್ಯಾಸ್ ಅಜ್ಜಾವರ, ಸಿದ್ದಿಕ್ ಗೂನಡ್ಕ,ಶರೀಪ್ ಜಟ್ಟಿಪಳ್ಳ, ರಾಮಚಂದ್ರ ಪೆಲ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.
ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ಅವಕಾಶ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ…
ರಾಜ್ಯದ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 89 ತೀವ್ರ ಹಾಗೂ 12…
ರಾಜ್ಯದ 101 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಗ್ರಾಮೀಣ ಜನರ ಬೇಡಿಕೆಗೆ ಅನುಗುಣವಾಗಿ…
ಕರ್ನಾಟಕದಲ್ಲಿ ಮುಂಗಾರು ಸದ್ಯ ದುರ್ಬಲಗೊಂಡಿದ್ದು, ಬಹುತೇಕ ಕಡೆ ಬಿಸಿಲು–ಮೋಡದ ವಾತಾವರಣ ಹಾಗೂ ಅಲ್ಲಲ್ಲಿ…
ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…
ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…