Advertisement
ಅನುಕ್ರಮ

ಹಚ್ಚ ಹಸಿರಿನ ನೆನಪುಗಳು

Share
ಗುಳಿಗೆನ್ನೆಯ ಗೆಳೆಯ,
ನನ್ನೊಳಗೆ ನೀನಿದ್ದೆ ಎಂದು ತಿಳಿಯುವಾಗ ಬಲು ತಡವಾಯಿತು.
ಕಾರಿಡಾರಲ್ಲಿ ನಿಂತಾಗ,ನನಗಾಗಿ
ನಗು ಚೆಲ್ಲುತ್ತಿದ್ದಾಗ ,ನಿನ್ನ ಮೊಗದ ಕಾಂತಿ,
ಸಾವಿರ ವ್ಯಾಟ್ ದೀಪದಂತೆ ಬೆಳಗುತ್ತಿತ್ತು.
ಕತ್ತಲೆಯ ಭಯವ ನಿನ್ನೊಂದಿಗೆ ಹಂಚಿಕೊಂಡಾಗ, ನೀ‌ ನಿನ್ನ
ಕೆಲಸವ ಬಿಟ್ಟು ನನಗಾಗಿ ನಿಂತಾಗ
ನಿನ್ನ ಹೃದಯ ಮಂದಿರದಲ್ಲಿ ನನಗಾಗಿ
ಸ್ನೇಹದ ಸಿಂಹಾಸನವನ್ನೇ ಮೀಸಲಿಟ್ಟಿರುವೆ ಎಂದು ಭಾವಿಸಿದ್ದೆ!
ಮರದ ಮೇಲೆ ಮಂಗಗಳನ್ನು ಕಂಡಾಗಲೆಲ್ಲಾ ನಿನ್ನ ತುಂಟಾಟವ ಅವುಗಳಲ್ಲಿ‌ ಹುಡುಕುತ್ತಿದ್ದೆ..
ಸ್ಪೆಷಲ್ ಕ್ಲಾಸಲ್ಲಿ ಇದ್ದಾಗ ನಿನ್ನ
ವೀಡಿಯೋ ಕಾಲ್ ಗಳು ಹೃದಯದ
ಬಡಿತವನ್ನು ಹೆಚ್ಚಿಸುತ್ತಿದ್ದರೂ,ನಿನ್ನ
ಸ್ನೇಹಕ್ಕಾಗಿ ಸದಾ ಮನಸ್ಸು ಹಾತೊರೆಯುತ್ತಿತ್ತು….
ಇಂದಿನ ನಿನ್ನ ಬದಲಾವಣೆ ಗೆ ಕಾರಣ ತಿಳಿದಿಲ್ಲ, ಆದರೂ ಅರಿವಾದದ್ದೂ ಒಂದೇ
“ನೀನೊಬ್ಬ ಒಳ್ಳೆಯ ಹುಡುಗ”
ತಪ್ಪು ನನ್ನಿಂದಲೇ ಆಗಿರಬೇಕು….!
ತುರ್ತಿಗೆ ಇರಲಿ  ಅಂತ
ಅವತ್ತು ನಿನ್ನ ನಂಬರ್ ಪಡಕೊಂಡಾಗ ನಾನು ವಿಶೇಷವೆಂದು ಪರಿಗಣಿಸಲಿಲ್ಲ..
ನಿನಗೆ ನನ್ನ ಸ್ನೇಹ ಬೇಡವೆಂದು ಅರಿವಾದದ್ದು ಮೊನ್ನೆ…
ಮೆಸೇಜ್ ನೋಡಿದಾಗಲೂ ರಿಪ್ಲೈ ಇಲ್ಲದಾಗ!
ಶಾಂತ ಸಾಗರದಲ್ಲಿ ಸುನಾಮಿಯೇ ಎದ್ದಂತೆ..! ನನ್ನ ಹೃದಯ ಚೂರಾಯಿತು..
ಎಷ್ಟೋ ಬಾರಿ ನಿನ್ನ ಬೈಕ್ ನೊಡನೆ ಮಾತನಾಡುತಿದ್ದ ನನ್ನ ಮನ ನನ್ನೇ ನೋಡಿ ನಗುತ್ತಿದೆ…
ಮೊಬೈಲ್ ಪುಟದಲ್ಲೇ ಹೋದ ಆ ಜಾಲಿರೈಡ್,ನಡುರಾತ್ರಿಯ ವಾಕಿಂಗ್ ಚಂದ್ರನ ಬೆಳದಿಂಗಳ ನೆನಪು ಪದೇ ಪದೇ ಘಾಸಿಗೊಳಿಸುತ್ತಿದೆ…
ಗ್ರೌಂಡ್ ,ಪೆಟ್ರೋಲ್ ಪಂಪ್ ಕಾರಿಡಾರ್ ಮರದಮೇಲಿರುವ ಮಂಗ ನನ್ನನ್ನು ಅಣಕಿಸುತ್ತಿದೆ….
I AM UNLUCKY! ನಿನ್ನೊಳಗಿನ ಭಾವಗಳ ಗೌರವಿಸುವೆ …. ಬೇಕಿಲ್ಲ ಬೇರೇನು
ಮುಂದೊಮ್ಮೆ ನಿನ್ನ ಮೊಮ್ಮಕ್ಕಳನ್ನು
ಕೈ‌ ಹಿಡಿದು ನೀ ನಡೆಸುತ್ತಿರುವಾಗ
ಆಕಸ್ಮಿಕವಾಗಿ ನೀನು‌ನಾನು
ಎದುರುಬದುರಾದರೆ, ನನಗಾಗಿ
ಮತ್ತೊಮ್ಮೆ ಪರಿಚಯದ ನಗುವ ಬೀರು
ಸಾವಿರ ವ್ಯಾಟ್ ದೀಪದ ಕಾಂತಿಯ‌ ಕಂಡು ಕಣ್ಣುಮುಚ್ಚಿ ಬಿಡುವೆ…..
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

1 day ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

1 day ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

1 day ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

2 days ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

2 days ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

2 days ago