ಸುಳ್ಯ: ಹವ್ಯಕ ವಲಯ ಸುಳ್ಯದ ಆಂಜನೇಯ ಘಟಕದ ಸಭೆ ನ.19 ರಂದು ಉಬರಡ್ಕದ ನಾರಾಯಣ ಭಟ್ ಕುತ್ತಮೊಟ್ಟೆಯವರ ಮನೆಯಲ್ಲಿ ನಡೆಯಿತು.
ಶಂಖನಾದ ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು. ಗುರಿಕ್ಕಾರರಾದ ರಾಮಕೃಷ್ಣ ನೆಯ್ಯೋಣೆ ಸಭಾಧ್ಯಕ್ಷತೆ ವಹಿಸಿದರು. ವಲಯದ ಅಧ್ಯಕ್ಷರಾದ ಈಶ್ವರಕುಮಾರ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ವಿವಿಧ ವಿಭಾಗಗಳ ಬಗ್ಗೆ ಮಾಹಿತಿ ನೀಡಿದರು.
ವಲಯ ಕಾರ್ಯದರ್ಶಿ ವಿಷ್ಣುಕಿರಣ್ ನೀರಬಿದಿರೆ ಮಾಹಿತಿ ನೀಡಿದರು. ಘಟಕ ಸಂಯೋಜಕರಾದ ಗೋಪಾಲಕೃಷ್ಣ ಭಟ್, ವಲಯ ದಿಗ್ ದರ್ಶಕರಾದ ಸುಬ್ರಮಣ್ಯ ಭಟ್ ದಂಬೆಮೂಲೆ ಸಲಹೆ ಸೂಚನೆಗಳನ್ನು ನೀಡಿದರು. ಘಟಕ ನಿರ್ದೇಶಕರಾಗಿ ಮಹಾಲಿಂಗೇಶ್ವರ ಭಟ್ ಕೂಟೇಲು ಇವರನ್ನು ಆರಿಸಲಾಯಿತು. ರಾಮಜಪ ಶಾಂತಿಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.
ಆಂಧ್ರಪ್ರದೇಶ ಸರ್ಕಾರ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ “Farm-to-Home”…
2025-26ರಲ್ಲಿ ಭಾರತದಲ್ಲಿ 3765.63 ಲಕ್ಷ ಟನ್ ಆಹಾರ ಉತ್ಪಾದನೆ ಸಾಧ್ಯತೆ ಇದ್ದು, ಇದು…
ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ಮೇ…
ಬ್ಲಿಂಕಿಟ್ ಕಂಪೆನಿಯ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗಳಿಗೆ ಜೂನ್ 1ರಂದು ಮಂಗಳೂರಿನಲ್ಲಿ ನೇರ…
ಬಕ್ರೀದ್ಗೂ ಮುನ್ನ ಗೋಹತ್ಯೆ ಮತ್ತು ಗೋ ರಕ್ಷಣೆಯ ವಿಚಾರ ಮತ್ತೆ ದೇಶದಲ್ಲಿ ಚರ್ಚೆಗೆ…
ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ…