ಅಂಕಣ

*ಹುಚ್ಚನು ನಾನಲ್ಲ…*

Share
ಹುಟ್ಟಿದಾಗ ಹುಚ್ಚನು ನಾನಲ್ಲ..
ನನ್ನಂತ ಸುಖಿ ಬೇರಾರು ಇರಲಿಲ್ಲ..
ಕಣ್ಣಿಗೆ ಕಂಡದ್ದನ್ನೇ ಸತ್ಯ ಅಂದುಕೊಂಡೆ ನಾನು
ಸುಖವೂ ಹೋಗಿ ದುಃಖ ಬಂತು ಮೋಸ ಹೋದೆ ನಾನು ||1||
ಜನರಾರು ಸೇರಿಸಲಿಲ್ಲ ಅವರ ಹತ್ತಿರ ನನ್ನನು
ಬೀದಿಯಲ್ಲಿ ಹುಚ್ಚನಾಗಿ ಅಲೆದಾಡಿದೆ ನಾನು
ನಾಯಿತಿಂದುಳಿದ ಆಹಾರವೇ ಮೃಷ್ಟಾನ್ನವೆಂದುಕೊಂಡೆ
ಹರಕಲು‌‌ಗೋಣಿಯಿಂದ ಮಾನ ಮುಚ್ಚಿಕೊಂಡೆ ||2||
ಹುಟ್ಟುತ್ತಾ ನಾನು ಹುಚ್ಚನಲ್ಲ,ಜನ ನನ್ನ ಹುಚ್ಚ ಅಂದ್ರು
ನನ್ನವರೇ ನನ್ನ ಬೀದಿಗಟ್ಟಿ, ಇದೇ ನಿನ್ನ ಜಾಗ ಅಂದ್ರು
ಪುಟಾಣಿ ಮಕ್ಕಳು‌‌ ನನ್ನ ನೋಡಿ ಕಲ್ಲು ಹೊಡೆದು ಬಿಟ್ರು
ಹಣೇಲಿ ಸುರಿದ ರಕ್ತ ನೋಡಿ,ಜನ ಕೇಕೇ ಹಾಕಿ ನಕ್ರು ||3||
ಹುಟ್ಟುತ್ತಾ ನಾನು ಹುಚ್ಚನಲ್ಲ,ನಿಮ್ಮಂತೆ ನಾನಿದ್ದೆ ಅಂದೆ
ಯಾರಿಗೂ ನನ್ನ ಮಾತು ಕೇಳಲೇ ಇಲ್ಲ
ಧಾರಕಾರ ಸುರಿದ  ಮಳೆಯಲಿ ಕಣ್ಣೀರು ಕೂಡಿ ಹೋಯ್ತು
ಒಂದಿಬ್ಬರು ಸಾಂತ್ವಾನ ಕೇಂದ್ರ ಸೇರಿಸಿ ಬಿಟ್ರು ||4||
ಹುಚ್ಚನಾದ ನಾನು ಮತ್ತೆ ಎಲ್ಲರಂತಾಗಿ ಬಿಟ್ಟೆ
ಜನ ಮತ್ತೆ ನನ್ನ ಸೇರಿಸ್ಕೋತಾರೆ ಅಂದುಕೊಂಡು ಬಿಟ್ಟೆ
ಎಲ್ರೂ ಮತ್ತೆ ಹುಚ್ಚ ಎಂದು ಕರೆದು ಬಿಟ್ರು
ಹುಚ್ಚ ಅನ್ನೋ ಹೆಸರೇ ನನಗೆ ಖಾಯಂ ಆಗೋಯ್ತು… ||5||
‌‌
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |

ಕೇರಳದಲ್ಲಿ ಇನ್ನೂ ಎರಡು ದಿನಗಳ ಕಾಲ ತಾಪಮಾನ ಏರಿಕೆಯ ಬಗ್ಗೆ ಹವಾಮಾನ ಇಲಾಖೆ…

24 minutes ago

ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ

ಕೇಂದ್ರ ಸರ್ಕಾರದ ಯೋಜನೆಯಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರೀದಿಸಬೇಕು ಎಂದು ಸಂಸದ…

57 minutes ago

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ

ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆಯಷ್ಟು ಏರಿಕೆ ಮಾಡಲು ಚಿಂತನೆ…

1 hour ago

ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ

ಮನೆ ಛಾವಣಿಗಳ ಮೇಲೆ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಿ ಮನೆಗಳಿಗೆ…

17 hours ago

ನಂದಿನಿ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ

ನಂದಿನ ಹಾಲಿನ ದರ ಏರಿಕೆಗೆ ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ ವಿರೋಧ ವ್ಯಕ್ತಪಡಿಸಿದೆ. …

17 hours ago

ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳು | ಒಂದು ವರ್ಷದಲ್ಲಿ 22 ಸಾವಿರ ಸೈಬರ್ ಪ್ರಕರಣ ದಾಖಲು |

ದಿನದಿಂದ ದಿನಕ್ಕೆ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ…

17 hours ago