Advertisement
ಅನುಕ್ರಮ

ಹೊರಡುವ ಮುನ್ನ

Share
ಪ್ರೀತಿಸಿದವಳ ಜೊತೆ ನಡೆದವಳು
ಎದೆ ಹಾಲನುಣಿಸಿದವಳ ಮರೆತಳು
ತಂದೆಯ ಪ್ರೀತಿಯನ್ನು ಕಡೆಗಣಿಸಿದವಳು
ಇನಿಯನ ಪ್ರೀತಿಯೇ ಹೆಚ್ಚೆಂದಳು ||೧||
ಹೆತ್ತವರಿಗೆ ಮಗಳು ತೊರೆದ ನೋವು
ಸುತ್ತಣದವರ ಚುಚ್ಚು ಮಾತಿನ ನೋವು
ಕಾಣಲಿಲ್ಲ ಅವಳಿಗೆ ಹೆತ್ತೆವರ ಕಣ್ಣೀರು
ಅವಳಿಗೀಗ ಅವನ ಪ್ರೀತಿಯೇ ಎಳನೀರು ||೨||
ಜಗವ ಸುತ್ತಿಸಿದ ಪ್ರೇಮಿಯ ಕೈ ಖಾಲಿಯಾಗಿದೆ
ದುಡಿವ ಅನಿವಾರ್ಯತೆ ಬದುಕಲ್ಲಿ ಎದುರಾಗಿದೆ
ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದಾಗಿದೆ
ಮನೆಯಲ್ಲಿ ಜಗಳವೀಗ ಶುರುವಾಗಿದೆ ||೩||
ಆಕೆಯೀಗ ತುಂಬು ಗರ್ಭವತಿ
ಅವನಿಗಿಲ್ಲ ಅವಳಲ್ಲಿ ಮೊದಲಿನಂತೆ ಪ್ರೀತಿ
ಅವಳ ಬಾಳಾಗಿದೆ ಇಂದು ಅವನ ಕೈಸೆರೆ
ಅವಳಿಗೀಗ ಬೇಕಿದೆ ಹೆತ್ತವರ ಒಲವಿನಾಸರೆ ||೪||
ಮನವಿನಿಂದು ತಪ್ಪಿಗಾಗಿ ಮರುಗುತಿದೆ
ಹೆತ್ತವರ ಆಸರೆಗಾಗಿ ಪರಿತಪಿಸುತ್ತಿದೆ
ಕ್ಷಮೆಕೋರಲು ಮನವಿಂದು ಕಾಯುತಿದೆ
ಮಾಡಿದ ತಪ್ಪು ಮನವನ್ನು ಚುಚ್ಚುತ್ತಿದೆ ||೫||
ಪ್ರೀತಿಸುವ ಮುನ್ನ ಯೋಚಿಸಬೇಕು ಕಂದಾ
ಹೆತ್ತವರ ಒಪ್ಪಿಸಿ ನಡೆದರೆ ಆನಂದಾ
ಮುತ್ತಿನ ಮತ್ತಿನಿಂದೆ ನೀ‌ ಹೊರಡಬೇಡ
ತುತ್ತನ್ನು ಕಡೆಗಣಿಸಿ ನಡೆಯಬೇಡ ||೬||
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

Published by
ಅಪೂರ್ವಚೇತನ್ ಪೆರಂದೋಡಿ

Recent Posts

ಆಂಧ್ರಪ್ರದೇಶದ ಹೊಸ ಪ್ರಯೋಗ : ರೈತನ ತೋಟದಿಂದ ನೇರವಾಗಿ ಮನೆ ಬಾಗಿಲಿಗೆ ಕೃಷಿ ಉತ್ಪನ್ನ

ಆಂಧ್ರಪ್ರದೇಶ ಸರ್ಕಾರ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ “Farm-to-Home”…

5 hours ago

ಭಾರತ ಕೃಷಿಯಲ್ಲಿ ಭರ್ಜರಿ ದಾಖಲೆ : ಆಹಾರ ಉತ್ಪಾದನೆ 3765 ಮಿಲಿಯನ್ ಟನ್!

2025-26ರಲ್ಲಿ ಭಾರತದಲ್ಲಿ 3765.63 ಲಕ್ಷ ಟನ್ ಆಹಾರ ಉತ್ಪಾದನೆ ಸಾಧ್ಯತೆ ಇದ್ದು, ಇದು…

16 hours ago

ಮಂಗಳೂರಿನಲ್ಲಿ ಉದ್ಯೋಗಾವಕಾಶ : ಮೇ 30ರಂದು ಕಸ್ಟಮರ್ ಸಪೋರ್ಟ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ನೇರ ಸಂದರ್ಶನ

ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ಮೇ…

16 hours ago

ಬ್ಲಿಂಕಿಟ್‌ನಲ್ಲಿ ಉದ್ಯೋಗಾವಕಾಶ : ಜೂನ್ 1ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಬ್ಲಿಂಕಿಟ್ ಕಂಪೆನಿಯ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗಳಿಗೆ ಜೂನ್ 1ರಂದು ಮಂಗಳೂರಿನಲ್ಲಿ ನೇರ…

17 hours ago

ಬಕ್ರೀದ್‌ಗೂ ಮುನ್ನ ದೇಶದಲ್ಲಿ ಹೊಸ ಚರ್ಚೆ | “ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ” — ಮುಸ್ಲಿಂ ಸಂಘಟನೆಗಳ ಬೇಡಿಕೆ

ಬಕ್ರೀದ್‌ಗೂ ಮುನ್ನ ಗೋಹತ್ಯೆ ಮತ್ತು ಗೋ ರಕ್ಷಣೆಯ ವಿಚಾರ ಮತ್ತೆ ದೇಶದಲ್ಲಿ ಚರ್ಚೆಗೆ…

22 hours ago

ಹವಾಮಾನ ಬದಲಾವಣೆ ಈಗ ಭವಿಷ್ಯದ ಸಮಸ್ಯೆಯಲ್ಲ- ಸ್ಥಳೀಯ ಮಟ್ಟದಲ್ಲೇ ಆರಂಭವಾಗುತ್ತಿದೆ ಕ್ರಿಯಾ ಯೋಜನೆ

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ…

1 day ago