ಹೊರಡುವ ಮುನ್ನ

June 1, 2019
12:00 PM
ಪ್ರೀತಿಸಿದವಳ ಜೊತೆ ನಡೆದವಳು
ಎದೆ ಹಾಲನುಣಿಸಿದವಳ ಮರೆತಳು
ತಂದೆಯ ಪ್ರೀತಿಯನ್ನು ಕಡೆಗಣಿಸಿದವಳು
ಇನಿಯನ ಪ್ರೀತಿಯೇ ಹೆಚ್ಚೆಂದಳು ||೧||
ಹೆತ್ತವರಿಗೆ ಮಗಳು ತೊರೆದ ನೋವು
ಸುತ್ತಣದವರ ಚುಚ್ಚು ಮಾತಿನ ನೋವು
ಕಾಣಲಿಲ್ಲ ಅವಳಿಗೆ ಹೆತ್ತೆವರ ಕಣ್ಣೀರು
ಅವಳಿಗೀಗ ಅವನ ಪ್ರೀತಿಯೇ ಎಳನೀರು ||೨||
ಜಗವ ಸುತ್ತಿಸಿದ ಪ್ರೇಮಿಯ ಕೈ ಖಾಲಿಯಾಗಿದೆ
ದುಡಿವ ಅನಿವಾರ್ಯತೆ ಬದುಕಲ್ಲಿ ಎದುರಾಗಿದೆ
ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದಾಗಿದೆ
ಮನೆಯಲ್ಲಿ ಜಗಳವೀಗ ಶುರುವಾಗಿದೆ ||೩||
ಆಕೆಯೀಗ ತುಂಬು ಗರ್ಭವತಿ
ಅವನಿಗಿಲ್ಲ ಅವಳಲ್ಲಿ ಮೊದಲಿನಂತೆ ಪ್ರೀತಿ
ಅವಳ ಬಾಳಾಗಿದೆ ಇಂದು ಅವನ ಕೈಸೆರೆ
ಅವಳಿಗೀಗ ಬೇಕಿದೆ ಹೆತ್ತವರ ಒಲವಿನಾಸರೆ ||೪||
ಮನವಿನಿಂದು ತಪ್ಪಿಗಾಗಿ ಮರುಗುತಿದೆ
ಹೆತ್ತವರ ಆಸರೆಗಾಗಿ ಪರಿತಪಿಸುತ್ತಿದೆ
ಕ್ಷಮೆಕೋರಲು ಮನವಿಂದು ಕಾಯುತಿದೆ
ಮಾಡಿದ ತಪ್ಪು ಮನವನ್ನು ಚುಚ್ಚುತ್ತಿದೆ ||೫||
ಪ್ರೀತಿಸುವ ಮುನ್ನ ಯೋಚಿಸಬೇಕು ಕಂದಾ
ಹೆತ್ತವರ ಒಪ್ಪಿಸಿ ನಡೆದರೆ ಆನಂದಾ
ಮುತ್ತಿನ ಮತ್ತಿನಿಂದೆ ನೀ‌ ಹೊರಡಬೇಡ
ತುತ್ತನ್ನು ಕಡೆಗಣಿಸಿ ನಡೆಯಬೇಡ ||೬||
Advertisement
Advertisement

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ
ಬಾಬಾಸಾಹೇಬರನ್ನು ನೆನೆಯುತ್ತಾ…… ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು
April 13, 2024
4:36 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror