ಕೃಷಿ

150 ರೂಪಾಯಿ ದಾಟಿದ ರಬ್ಬರ್ ಧಾರಣೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯ: ಅನೇಕ ಸಮಯಗಳ ಬಳಿಕ ರಬ್ಬರ್ ಧಾರಣೆ 150 ರೂಪಾಯಿ ದಾಟಿದೆ. ಕಳೆದ ವಾರ 145 ರೂಪಾಯಿ ಆಸುಪಾಸಿನಲ್ಲಿ ಇದ್ದ ಧಾರಣೆ ಗುರುವಾರದಂದು 151 ರೂಪಾಯಿಗೆ ತಲಪಿದೆ.

Advertisement
Advertisement

ಕಳೆದ ವರ್ಷದ ಕೇರಳದಲ್ಲಿ ಉಂಟಾದ ವಾತಾವರಣದ ಪ್ರತಿಕೂಲ ಪರಿಸ್ಥಿತಿಯಿಂದ ಕೇರಳದಲ್ಲಿ ರಬ್ಬರ್ ಉತ್ಪಾದನೆಯಲ್ಲಿ  ಗಣನೀಯ ಇಳಿಕೆ ಕಂಡಿದ್ದರೆ ವಿದೇಶದಲ್ಲೂ ರಬ್ಬರ್ ಬೇಡಿಕೆ ಹೆಚ್ಚಾಗಿದೆ. ಆದರೆ ಪೂರೈಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ  ಧಾರಣೆ ಏರಿಕೆಯಾಗುತ್ತಿದೆ. ಇದೀಗ ಮಳೆಗಾಲ ಆರಂಭವಾದ ಬಳಿಕ ರಬ್ಬರ್ ಗೆ ಪ್ಲಾಸ್ಟಿಕ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ನಂತರ ಟ್ಯಾಪಿಂಗ್ ಆರಂಭವಾಗುವ ಹೊತ್ತಿಗೆ ಧಾರಣೆಯಲ್ಲಿ  ಇಳಿಕೆ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

2018 ರಲ್ಲಿ ವಿಶ್ವದ ಬಳಕೆಯಲ್ಲಿ ಶೇ 40 ರಷ್ಟು ರಬ್ಬರ್ ಬಳಕೆ ಇತ್ತು. ಇದೀಗ ಬಹುಪಾಲು ರಬ್ಬರ್ ಬಳಕೆ ಹೊಂದಿರುವ ಚೀನಾದ ಬಳಕೆ 2019 ರಲ್ಲಿ 3.2 ಶೇಕಡದಿಂದ 5.85 ಮಿ.ಟಿ.ಗೆ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಾಥಮಿಕ ಅಂದಾಜು ಪ್ರಕಾರ, ಭಾರತವು 2018 ರ ಅವಧಿಯಲ್ಲಿ 1.218 ಮೆಟ್ರಿಕ್ ಟನ್ ರಬ್ಬರ್ ಬಳಕೆ ಮಾಡಿದ್ದರೆ ಈ ವರ್ಷ ಶೇ 12.6 ರಷ್ಟು ಏರಿಕೆಯಾಗಿದೆ.
2010-12ರ ಅವಧಿಯಲ್ಲಿ ರಬ್ಬರ್ ಬೆಲೆಯಲ್ಲಿ ಗಣನೀಯ ಏರಿಕೆ ಇದೆ ಎಂದು ಈ ಹಿಂದೆ ವಿಶ್ಲೇಷಣೆ ಮಾಡಲಾಗಿತ್ತು. ಹೀಗಾಗಿ ಈಗಿನ ಧಾರಣೆ ಅದಕ್ಕೆ ಪೂರಕವಾಗುತ್ತಿದೆ.
ಆಗಸ್ಟ್ 2018 ರಲ್ಲಿ ಕೇರಳದ ಪ್ರವಾಹದಿಂದಾಗಿ ಈ ಪ್ರವಾಹವು ಮಣ್ಣಿನ ಗುಣಮಟ್ಟವನ್ನು ಕುಸಿದಿದೆ. ಹೀಗಾಗಿ ಇಳುವರಿಯಲ್ಲೂ ಕೊರತೆ ಕಂಡಿದೆ. ಇದೆಲ್ಲಾ ಸದ್ಯ ಬೆಲೆ ಏರಿಕೆಗೆ ಕಾರಣವಾಗಿದೆ.

 

Advertisement

 

 

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹಲಸಿನ ಅರಿವಿನ ಹರಿವಿನ ಪ್ರಸಂಗ ‘ಪನಸೋಪಾಖ್ಯಾನ’ | ಪರಿಸರ ಉಳಿಸುವ ಸಂದೇಶ ಸಾರಿದ ತಾಳಮದ್ದಳೆ |

 ‘ಪನಸೋಪಾಖ್ಯಾನ’ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಪ್ರಸ್ತುತವಾಯಿತು. ಇದು ಕಾಲ್ಪನಿಕ ಕಥಾಭಾಗವನ್ನು ಹೊಂದಿರುವ ಪ್ರಸಂಗ.…

1 hour ago

ಹವಾಮಾನ ವರದಿ | 14-06-2025 | ಜೂನ್.‌18 ರಿಂದ ಮಳೆಯ ಪ್ರಮಾಣ ಕಡಿಮೆ ನಿರೀಕ್ಷೆ

ಜೂನ್ 18 ರಿಂದ ಮುಂಗಾರು ಮತ್ತೆ ದುರ್ಬಲಗೊಂಡು ಮಳೆ ಕಡಿಮೆಯಾಗುವ ಸೂಚನೆಗಳಿವೆ.

2 hours ago

ಅಡಿಕೆ ಜಗಿಯುವ ಪ್ರವೃತ್ತಿ ಎಲ್ಲೆಲ್ಲಿ ಇದೆ ?

ತಾಂಬೂಲ ಸೇವನೆಗೆ ಅದರದ್ದೇ ಆದ ಇತಿಹಾಸ ಇದೆ. ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು…

4 hours ago

ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪರಿಚಯ ಮೂಡಿಸಬೇಕಿದೆ

ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ…

6 hours ago

ಎಳೆ ಅಡಿಕೆ ಬೀಳಲು ಹವಾಮಾನ ವೈಪರೀತ್ಯ ಕಾರಣವೇ…!?

ಅಡಿಕೆ ಬೆಳೆಗಾರರಿಗೆ ಜೂನ್‌ ಆರಂಭವಾಗುತ್ತಿದ್ದಂತೆಯೇ ಎಳೆ ಅಡಿಕೆ ಬೀಳುವ ಸಮಸ್ಯೆ ಆರಂಭವಾಗಿದೆ. ವಿವಿಧ…

11 hours ago