ಹಿಮಾಚಲದಲ್ಲಿ188 ವರ್ಷಗಳ ನಂತರ ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳು ಪತ್ತೆ

July 1, 2022
9:27 PM

ಡೆಹ್ರಾಡೂನ್‌ನ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಸಂಶೋಧಕರು ಗುರುವಾರದಂದು 188 ವರ್ಷಗಳ  ಅಪರೂಪದ, ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧವಾದ ಬ್ರಾಕಿಸ್ಟೆಲ್ಮಾ ಅಟೆನ್ಯೂಟಮ್ ವನ್ನು ಮರುಶೋಧಿಸಿದ್ದಾರೆ.

ಈ ಜಾತಿಯನ್ನು ಮೊದಲು 1835 ರಲ್ಲಿ ಬ್ರಿಟಿಷ್ ಸಸ್ಯಶಾಸ್ತ್ರಜ್ಞರು  ಹಿಮಾಚಲ ಪ್ರದೇಶದ ಹಮೀರ್‌ಪುರದಲ್ಲಿ ಕಂಡುಹಿಡಿದು ವಿವರಿಸಿದ್ದರು. ಅದರ ಮೊದಲ ಸಂಗ್ರಹದ ನಂತರ, ಜಾತಿಗಳನ್ನು ಗಮನಿಸಲಾಗಿಲ್ಲ ಹೀಗಾಗಿ ವಿಜ್ಞಾನಿಗಳು ಅಳಿವಿನಂಚಿನಲ್ಲಿದೆ ಎಂದು ಭಾವಿಸಿದ್ದರು. ಆದರೆ, 2020 ರಲ್ಲಿ, ಪಶ್ಚಿಮ ಹಿಮಾಲಯದಲ್ಲಿ ಕ್ಷೇತ್ರ ಸಮೀಕ್ಷೆಯನ್ನು ಮಾಡುವಾಗ, ಹಮೀರ್‌ಪುರದ ಭೋರಂಜ್ ಪ್ರದೇಶದಲ್ಲಿ ನಿಶಾಂತ್ ಚೌಹಾನ್ ಅವರು ಕೆಲವು ಆಸಕ್ತಿದಾಯಕ ಟ್ಯೂಬರಸ್ ಸಸ್ಯಗಳನ್ನು ವೀಕ್ಷಿಸಿದ್ದರು.ಈ ಸಸ್ಯಗಳನ್ನು ಭಾರತದ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾಕ್ಕೆ ತರಲಾಗಿತ್ತು ಮತ್ತು ಅಲ್ಲಿ ಇದನ್ನು ಅಂಬರ್ ಶ್ರೀವಾಸ್ತವ ಅವರು ಬ್ರಾಕಿಸ್ಟೆಲ್ಮಾ ಪರ್ವಿಫ್ಲೋರಮ್ ಎಂದು ಗುರುತಿಸಿದ್ದಾರೆ.

ಕಳೆದ ವರ್ಷ ಆಗಸ್ಟ್ 2021 ರಲ್ಲಿ ಈ ಜಾತಿಯನ್ನು ಮೊದಲ ಬಾರಿಗೆ ಗಮನಿಸಲಾಯಿತು, ಆದರೆ ಆ ಸಮಯದಲ್ಲಿ ಸಸ್ಯಗಳು ತಮ್ಮ ಬೆಳವಣಿಗೆಯ ಕೊನೆಯ ಹಂತದಲ್ಲಿದ್ದವು ಮತ್ತು ಹೂಬಿಡುವ ಅವಧಿಯು ಮುಗಿದಿತ್ತು.  ಇದರಿಂದಾಗಿ ಅವುಗಳ ಗುರುತನ್ನು ದೃಢೀಕರಿಸಲು ಕಷ್ಟವಾಯಿತು ಎಂದು ಚೌಹಾನ್ ವಿವರಿಸಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!
July 29, 2026
6:52 AM
by: ದ ರೂರಲ್ ಮಿರರ್.ಕಾಂ
ಮಲೆನಾಡಿನಿಂದ ಬಯಲುನಾಡಿನತ್ತ ಅಡಿಕೆ ಬೆಳೆ ವಿಸ್ತರಣೆ : ರಾಣೆಬೆನ್ನೂರಿನಲ್ಲಿ ಹೆಚ್ಚಿದ ರೈತರ ಆಸಕ್ತಿ
July 29, 2026
6:42 AM
by: ದ ರೂರಲ್ ಮಿರರ್.ಕಾಂ
ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ
July 28, 2026
11:25 PM
by: ಮಹೇಶ್ ಪುಚ್ಚಪ್ಪಾಡಿ
ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!
July 28, 2026
10:03 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror