ಡೆಹ್ರಾಡೂನ್ನ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ಶಿಮ್ಲಾದ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಸಂಶೋಧಕರು ಗುರುವಾರದಂದು 188 ವರ್ಷಗಳ ಅಪರೂಪದ, ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧವಾದ ಬ್ರಾಕಿಸ್ಟೆಲ್ಮಾ ಅಟೆನ್ಯೂಟಮ್ ವನ್ನು ಮರುಶೋಧಿಸಿದ್ದಾರೆ.
ಈ ಜಾತಿಯನ್ನು ಮೊದಲು 1835 ರಲ್ಲಿ ಬ್ರಿಟಿಷ್ ಸಸ್ಯಶಾಸ್ತ್ರಜ್ಞರು ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಕಂಡುಹಿಡಿದು ವಿವರಿಸಿದ್ದರು. ಅದರ ಮೊದಲ ಸಂಗ್ರಹದ ನಂತರ, ಜಾತಿಗಳನ್ನು ಗಮನಿಸಲಾಗಿಲ್ಲ ಹೀಗಾಗಿ ವಿಜ್ಞಾನಿಗಳು ಅಳಿವಿನಂಚಿನಲ್ಲಿದೆ ಎಂದು ಭಾವಿಸಿದ್ದರು. ಆದರೆ, 2020 ರಲ್ಲಿ, ಪಶ್ಚಿಮ ಹಿಮಾಲಯದಲ್ಲಿ ಕ್ಷೇತ್ರ ಸಮೀಕ್ಷೆಯನ್ನು ಮಾಡುವಾಗ, ಹಮೀರ್ಪುರದ ಭೋರಂಜ್ ಪ್ರದೇಶದಲ್ಲಿ ನಿಶಾಂತ್ ಚೌಹಾನ್ ಅವರು ಕೆಲವು ಆಸಕ್ತಿದಾಯಕ ಟ್ಯೂಬರಸ್ ಸಸ್ಯಗಳನ್ನು ವೀಕ್ಷಿಸಿದ್ದರು.ಈ ಸಸ್ಯಗಳನ್ನು ಭಾರತದ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾಕ್ಕೆ ತರಲಾಗಿತ್ತು ಮತ್ತು ಅಲ್ಲಿ ಇದನ್ನು ಅಂಬರ್ ಶ್ರೀವಾಸ್ತವ ಅವರು ಬ್ರಾಕಿಸ್ಟೆಲ್ಮಾ ಪರ್ವಿಫ್ಲೋರಮ್ ಎಂದು ಗುರುತಿಸಿದ್ದಾರೆ.
ಕಳೆದ ವರ್ಷ ಆಗಸ್ಟ್ 2021 ರಲ್ಲಿ ಈ ಜಾತಿಯನ್ನು ಮೊದಲ ಬಾರಿಗೆ ಗಮನಿಸಲಾಯಿತು, ಆದರೆ ಆ ಸಮಯದಲ್ಲಿ ಸಸ್ಯಗಳು ತಮ್ಮ ಬೆಳವಣಿಗೆಯ ಕೊನೆಯ ಹಂತದಲ್ಲಿದ್ದವು ಮತ್ತು ಹೂಬಿಡುವ ಅವಧಿಯು ಮುಗಿದಿತ್ತು. ಇದರಿಂದಾಗಿ ಅವುಗಳ ಗುರುತನ್ನು ದೃಢೀಕರಿಸಲು ಕಷ್ಟವಾಯಿತು ಎಂದು ಚೌಹಾನ್ ವಿವರಿಸಿದರು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.