1912 ಬಗ್ಗೆ ಮೆಸ್ಕಾಂ ಸಿಬಂದಿಗಳಿಗೆ ತರಬೇತಿ

May 1, 2019
12:10 PM

ಸುಳ್ಯ: ವಿವಿಧ ಮಾಧ್ಯಮಗಳ ಮೂಲಕ ಮೆಸ್ಕಾಂ ಗ್ರಾಹಕರ ಸೇವಾ ಕೇಂದ್ರ 1912 ಸೌಲಭ್ಯದ  ಬಗ್ಗೆ ವಿವಿಧ ಭಾಗಗಳಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಸ್ಕಾಡಾ ಮತ್ತು ಕೇಂದಿಕೃತ ಗ್ರಾಹಕರ ಸೇವಾ ಕೇಂದ್ರದ ಅಧೀಕ್ಷಕ ಎಂಜಿನಿಯರ್ ಪಿ.ಡಿ.ಬಿ.ರಾವ್ ಹೇಳಿದರು.

ಅವರು ತಾ.ಪಂ.ಸಭಾಂಗಣದಲ್ಲಿ ಮಂಗಳವಾರ ಸ್ಕಾಡಾ ಮತ್ತು ಕೇಂದಿಕೃತ ಗ್ರಾಹಕರ ಸೇವಾ ಕೇಂದ್ರ 1912 ಕುರಿತು ಮೆಸ್ಕಾಂ ಸುಳ್ಯ ಉಪ ವಿಭಾಗದ ಅಧಿಕಾರಿ ನೌಕರರುಗಳಿಗೆ ನಡೆದ ತರಬೇತಿ ಕಾರ್ಯಕ್ರಮದಲ್ಲಿ  ಮಾಹಿತಿ ನೀಡಿದರು.

ಬಿಎಸ್‍ಎನ್‍ಎಲ್ ನೆಟ್‍ವರ್ಕ್ ಇಲ್ಲದೆ ಸೇವಾ ಕೇಂದ್ರದ ದೂರವಾಣಿ ಸಂಪರ್ಕ ಸಾಧ್ಯವಾಗದ ಬಗ್ಗೆ ನೌಕರರು ಪ್ರಸ್ತಾವಿಸಿದರು. ಇಂತಹ ಸಮಸ್ಯೆ ಇರುವುದು ನಿಜ. ಆದರೆ ನೆಟ್‍ವರ್ಕ್ ಇಲ್ಲದ ಕಡೆ ಸಂವಹನ ಕಷ್ಟ. ಆದರೆ ಲಭ್ಯ ಇರುವ ಕಡೆ ಸಮರ್ಪಕ ಸೇವೆ ನೀಡಲು ಆ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದು ಪಿಡಿಬಿ ರಾವ್ ಹೇಳಿದರು.

ಕರೆ ಮಾಡುವ ಗ್ರಾಹಕರು ಸಮಸ್ಯೆ ಕುರಿತು ಸಮರ್ಪಕ ಮಾಹಿತಿ ನೀಡಬೇಕು. ಶೇ. 99 ಪ್ರಕರಣಗಳಲ್ಲಿ ಸೂಕ್ತ ಮಾಹಿತಿ ದಾಖಲಿಸಲು ಸಾಧ್ಯವಿದೆ. ಶೇ.1 ರಷ್ಟು ಮಾಹಿತಿ ನೀಡಲು ಸಾಧ್ಯವಿಲ್ಲದ ಸಂದರ್ಭ ಇರಬಹುದಷ್ಟೆ. ಕರೆ ಮಾಡಿದ ಗ್ರಾಹಕರು ಸಮಸ್ಯೆ ಇರುವ ವ್ಯಾಪ್ತಿಯ ಆರ್ ಆರ್ ನಂಬರ್, ಪ್ರದೇಶದ ಬಗ್ಗೆ ಮಾಹಿತಿ ಕೊಡಬೇಕು. ಬಳಿಕ ಅದನ್ನು ಸಂಬಂಧಿಸಿದ ಮೆಸ್ಕಾಂ ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ. ಸಾಪ್ಟ್ ವೇರ್ ಕೂಡ ಅದೇ ತರಹ ಇದ್ದು, ವಾರ್ಡ್ ಪ್ರಕಾರವೇ ಅಪ್ಲೋಡ್ ಮಾಡುವ ನಿಯಮವಿದೆ ಎಂದು ಪಿ.ಡಿ.ಬಿ.ರಾವ್ ಹೇಳಿದರು.

ಈ ಸಂದರ್ಭದಲ್ಲಿ ಸ್ಕಾಡಾ ಮತ್ತು ಕೇಂದಿಕೃತ ಗ್ರಾಹಕರ ಸೇವಾ ಕೇಂದ್ರದ ಸಹಾಯಕ ಎಂಜಿನಿಯರ್ ನಂದ ಕುಮಾರ್, ಸುಳ್ಯ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹರೀಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 08-07-2026 | ಕರ್ನಾಟಕದಲ್ಲಿ ಮಳೆ ಇಳಿಮುಖ – ರೈತರಿಗೆ ಮಹತ್ವದ ಹವಾಮಾನ ಮಾಹಿತಿ..!
July 8, 2026
1:24 PM
by: ಸಾಯಿಶೇಖರ್ ಕರಿಕಳ
E20 ಪೆಟ್ರೋಲ್‌ : ದೇಶದ ಹಿತದ ಹೆಸರಿನಲ್ಲಿ ಸಾಮಾನ್ಯರ ಹೆಗಲಿನ ಮೇಲೆ ಹೆಚ್ಚು”ವರಿ”ಯೇ?
July 8, 2026
12:42 PM
by: ಮಹೇಶ್ ಪುಚ್ಚಪ್ಪಾಡಿ
₹1,500 ಕೋಟಿ ಅಕ್ರಮ ಅಡಿಕೆ ಜಾಲ ಬಯಲು – ED ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ
July 7, 2026
10:32 PM
by: ದ ರೂರಲ್ ಮಿರರ್.ಕಾಂ
ಮಹಾರಾಷ್ಟ್ರದಲ್ಲಿ ತಡೆಹಿಡಿದ ಅಡಿಕೆ ಲಾರಿಗಳ ಬಿಡುಗಡೆಗೆ ಫಡ್ನವೀಸ್‌ಗೆ ಮನವಿ
July 7, 2026
9:35 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror