MIRROR FOCUS

20,000 ರೈತರಿಂದ ನಾಳೆ `ದೆಹಲಿ ಚಲೋ’ಗೆ ಕರೆ | 200 ಕ್ಕೂ ಅಧಿಕ ಸಂಘಟನೆಗಳು ಭಾಗಿ | ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ರೈತ(Farmer) ದೇಶದ ಬೆನ್ನೆಲುಬು. ಅನ್ನದಾತ ಚೆನ್ನಾಗಿದ್ದರೆ ದೇಶ(Country) ಸುಭೀಕ್ಷವಾಗಿರಲು ಸಾಧ್ಯ. ಆದರೆ ರೈತರ ಕಷ್ಟ, ಸಂಕಷ್ಟಗಳಿಗೆ ಯಾರೂ ಕಿವಿಗೊಡುವುದಿಲ್ಲ. ಆದರೆ ಕೃಷಿಕರಿಗಿರುವ ಹಕ್ಕನ್ನು ಹೋರಾಟ, ಪ್ರತಿಭಟಿಸಿ(Protest) ಪಡೆದುಕೊಳ್ಳುವ ಸಂದರ್ಭಗಳು ಆಗಾಗ ಬರುತ್ತಲೇ ಇದೆ. ಬೆಳೆಗಳಿಗೆ(Crop) ಕನಿಷ್ಠ ಬೆಂಬಲ ಬೆಲೆ(Minimum support price) ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಸುಮಾರು 200 ರೈತ ಸಂಘಟನೆಗಳು ಮಂಗಳವಾರ (ಫೆ.13) ದೆಹಲಿ ಚಲೋಗೆ (Delhi Chalo) ಕರೆ ನೀಡಿವೆ.

Advertisement
Advertisement

`ದೆಹಲಿ ಚಲೋ’ ನಲ್ಲಿ ಸುಮಾರು 20,000 ರೈತರು (Farmers) ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಈಗಾಗಲೇ ಹಲವು ಕಡೆ ಗಡಿಗಳನ್ನು ಬ್ಯಾರಿಕೇಡ್‌ಗಳಿಂದ ಬಂದ್ ಮಾಡಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಈ ಪ್ರತಿಭಟನೆಗೆ 200 ರೈತ ಸಂಘಟನೆಗಳು ಬೆಂಬಲ ನೀಡಿದ್ದು, ಸುಮಾರು 20,000 ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಗುಪ್ತಚರ ಇಲಾಖೆ ಅಂದಾಜಿಸಿದೆ.

ಈ ಹಿನ್ನೆಲೆಯಲ್ಲಿ ರೈತರು ಅಂಬಾಲ-ಸಿಂಘು, ಕನೌರಿ-ಜಿಂದ್, ಮತ್ತು ದಬಾವಲಿ ಗಡಿಗಳ ಮೂಲಕ ರಾಜಧಾನಿ ಪ್ರವೇಶಕ್ಕೆ ರೈತರು ಯೋಜಿಸಿದ್ದಾರೆ. ಈಗಾಗಲೇ ಪಂಜಾಬ್ ಹಾಗೂ ಹರಿಯಾಣದ ಟ್ರ್ಯಾಕ್ಟರ್‌ಗಳಲ್ಲಿ ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯ ಗಡಿ ಭಾಗಗಳನ್ನ ಬ್ಯಾರಿಕೇಡ್‌ಗಳಿಂದ (Barricading) ಬಂದ್ ಮಾಡಲಾಗಿದೆ.

 

Advertisement

ಗಡಿಗಳಲ್ಲಿ ಕ್ರೇನ್ ಮತ್ತು ಕಂಟೇನರ್‌ಗಳನ್ನು ತಂದಿಡಲಾಗಿದ್ದು, ರೈತರು ದೆಗಲಿ ಪ್ರವೇಶ ಮಾಡಲು ಯತ್ನಿಸಿದ್ರೆ ಹೆದ್ದಾರಿಯನ್ನೇ ಬಂದ್ ಮಾಡಲು ಪೊಲೀಸರು ಯೋಜಿಸಿದ್ದಾರೆ. ಇದರೊಂದಿಗೆ ಯಾವುದೇ ಅನಾಹುತಕಾರಿ ಘಟನೆಗಳನ್ನು ತಡೆಯಲು ಹೆಚ್ಚುವರಿ ಪೊಲೀಸ್ ಭದ್ರತೆಯನ್ನ ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಆದ್ರೆ ಬ್ಯಾರಿಕೇಡ್‌ಗಳ ಅಸ್ತ್ರವನ್ನು ಭೇದಿಸಲು ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನೇ ಹಿಟಾಚಿ ರೂಪಕ್ಕೆ ಪರಿವರ್ತಿಸಿದ್ದಾರೆ ಎಂದು ಹೇಳಲಾಗಿದೆ.

– ಅಂತರ್ಜಾಲ ಮಾಹಿತಿ

Ahead of the Feb 13, `Delhi Chalo' march organised by approximately 200 farmers’ unions, Haryana has sealed its borders with Punjab in several places, including Ambala, Jind and Fatehabad districts, with concrete blocks, spikes and barbed wire. Haryana has also imposed Section 144 in 15 districts and has banned any demonstrations or tractor marches. Similarly, Chandigarh has also imposed Section 144 ahead of the farmers’ march.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹಲಸಿನ ಅರಿವಿನ ಹರಿವಿನ ಪ್ರಸಂಗ ‘ಪನಸೋಪಾಖ್ಯಾನ’ | ಪರಿಸರ ಉಳಿಸುವ ಸಂದೇಶ ಸಾರಿದ ತಾಳಮದ್ದಳೆ |

 ‘ಪನಸೋಪಾಖ್ಯಾನ’ ಪ್ರಸಂಗವು ತಾಳಮದ್ದಳೆ ರೂಪದಲ್ಲಿ ಪ್ರಸ್ತುತವಾಯಿತು. ಇದು ಕಾಲ್ಪನಿಕ ಕಥಾಭಾಗವನ್ನು ಹೊಂದಿರುವ ಪ್ರಸಂಗ.…

2 hours ago

ಹವಾಮಾನ ವರದಿ | 14-06-2025 | ಜೂನ್.‌18 ರಿಂದ ಮಳೆಯ ಪ್ರಮಾಣ ಕಡಿಮೆ ನಿರೀಕ್ಷೆ

ಜೂನ್ 18 ರಿಂದ ಮುಂಗಾರು ಮತ್ತೆ ದುರ್ಬಲಗೊಂಡು ಮಳೆ ಕಡಿಮೆಯಾಗುವ ಸೂಚನೆಗಳಿವೆ.

3 hours ago

ಅಡಿಕೆ ಜಗಿಯುವ ಪ್ರವೃತ್ತಿ ಎಲ್ಲೆಲ್ಲಿ ಇದೆ ?

ತಾಂಬೂಲ ಸೇವನೆಗೆ ಅದರದ್ದೇ ಆದ ಇತಿಹಾಸ ಇದೆ. ಜಗತ್ತಿನ ಅಭಿವೃದ್ಧಿ ಹೊಂದಿದ ಮತ್ತು…

4 hours ago

ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪರಿಚಯ ಮೂಡಿಸಬೇಕಿದೆ

ಮಕ್ಕಳಲ್ಲಿ ಬೌದ್ಧಿಕ ಸಾಮರ್ಥ್ಯ ಗಣಿತ ಹಾಗೂ ಭಾಷಾ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ಕಲಿಕಾ ಮಾದರಿ…

7 hours ago

ಎಳೆ ಅಡಿಕೆ ಬೀಳಲು ಹವಾಮಾನ ವೈಪರೀತ್ಯ ಕಾರಣವೇ…!?

ಅಡಿಕೆ ಬೆಳೆಗಾರರಿಗೆ ಜೂನ್‌ ಆರಂಭವಾಗುತ್ತಿದ್ದಂತೆಯೇ ಎಳೆ ಅಡಿಕೆ ಬೀಳುವ ಸಮಸ್ಯೆ ಆರಂಭವಾಗಿದೆ. ವಿವಿಧ…

11 hours ago