ಮೇಘಾಲಯದ ರಬ್ಬರ್ ಕೃಷಿ ಪರಿಶೀಲಿಸಲು 13 ದೇಶಗಳಿಂದ ಆಗಮಿಸಿದ ಪ್ರತಿನಿಧಿಗಳು |

October 19, 2023
10:00 AM
ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ರಬ್ಬರ್ ಉತ್ಪಾದಿಸಲು ರೈತರನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಸಬ್ಸಿಡಿ ಸೇರಿದಂತೆ ವಿವಿಧ ಆಕರ್ಷಕ ಯೋಜನೆಗಳನ್ನು ಪ್ರಾರಂಭಿಸಿದೆ.ಈ ನಡುವೆ ವಿದೇಶದ ಪ್ರತಿನಿಧಿಗಳೂ ರಬ್ಬರ್‌ ಬೆಳೆಯ ವೀಕ್ಷಣೆಗೆ ಆಗಮಿಸಿದ್ದಾರೆ.

ಮೇಘಾಲಯ  ಪೂರ್ವ ಪಶ್ಚಿಮ ಖಾಸಿ ಜಿಲ್ಲೆಯಲ್ಲಿ 40 ಎಕರೆ ಭೂಮಿಯಲ್ಲಿ ಬೆಳೆದ ರಬ್ಬರ್ ಸಸಿಗಳನ್ನು ಪರಿಶೀಲಿಸಲು 13 ದೇಶಗಳ ಒಟ್ಟು 22 ಪ್ರತಿನಿಧಿಗಳು ಮೇಘಾಲಯಕ್ಕೆ ಆಗಮಿಸಿದ್ದಾರೆ. ಕಾಂಬೋಡಿಯಾ, ಮಲೇಷ್ಯಾ, ಇಂಡೋನೇಷ್ಯಾ , ಥೈಲ್ಯಾಂಡ್ ಸೇರಿದಂತೆ 13 ದೇಶಗಳ ಪ್ರತಿನಿಧಿಗಳುಇದ್ದರು.  

Advertisement
Advertisement

ರಬ್ಬರ್ ಸಸಿ ಉತ್ಪಾದನಾ ಸ್ಥಳದ ಬಳಿಯ ತಾತ್ಕಾಲಿಕ ಸಭಾಂಗಣದಲ್ಲಿ ತಂಡವು ಸಭೆಯನ್ನೂ ನಡೆಸಿತು. ಒಮೆಗಾ ಗ್ರೀನ್ ಸೊಲ್ಯೂಷನ್ಸ್‌ನ ಸಹಾಯಕ ನಿರ್ದೇಶಕ ಎಂ.ವಸಂತಗೇಸನ್ ಸಭೆಯನ್ನು ನಡೆಸಿದರು. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ರಬ್ಬರ್ ಉತ್ಪಾದಿಸಲು ರೈತರನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಸಬ್ಸಿಡಿ ಸೇರಿದಂತೆ ವಿವಿಧ ಆಕರ್ಷಕ ಯೋಜನೆಗಳನ್ನು ಪ್ರಾರಂಭಿಸಿದೆ.

Advertisement

ರಬ್ಬರ್ ಉತ್ಪಾದನೆಗೆ ವಿದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಭಾರತ ಸರ್ಕಾರವು ದೇಶದಲ್ಲಿ ರಬ್ಬರ್ ಉತ್ಪಾದನೆಯನ್ನು ಹೆಚ್ಚಿಸಲು ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಒಮೆಗಾ ಗ್ರೀನ್ ಸೊಲ್ಯೂಷನ್ಸ್ ಮೇಘಾಲಯದ ಪೂರ್ವ-ಪಶ್ಚಿಮ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ಕಾಮ್ರೂಪ್ ಜಿಲ್ಲೆಯ ಮೇಘಾಲಯ ಗಡಿಯಲ್ಲಿ ನೆಲೆಗೊಂಡಿರುವ ಜಿರಾಂಗ್ ಪ್ರದೇಶದಲ್ಲಿ ದೊಡ್ಡ ರಬ್ಬರ್ ನರ್ಸರಿಯನ್ನು ಸ್ಥಾಪಿಸಿದೆ.

ಇಂತಹ ನರ್ಸರಿಗಳನ್ನು ಸ್ಥಾಪಿಸುವ ಮೂಲಕ ಸಂಸ್ಥೆಯು ಅಸ್ಸಾಂ ಮತ್ತು ಈಶಾನ್ಯದ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಮುಂದೆ ರಬ್ಬರ್‌ ಬೆಳೆಯ ಮೂಲಕ ರಬ್ಬರ್‌ ಉತ್ಪಾದನೆ ಹೆಚ್ಚಳದ ಕಡೆಗೂ ಗಮನಹರಿಸಿದೆ. ಇದೀಗ ವಿದೇಶದ ಪ್ರತಿನಿಧಿಗಳಿಗೂ ಇಲ್ಲಿನ ರಬ್ಬರ್‌ ಬಗ್ಗೆ ಮಾಹಿತಿ ನೀಡಿದೆ.

Advertisement

22 delegates from 13 countries arrrived in Meghalaya, to inspect rubber seedling grown on 40 acres of land at Umtru in Eastern West Khasi district. Representatives from 13 countries, including Cambodia, Malaysia, Indonesia.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೇ.2 | ಸಾಯಿನಿಕೇತನ ಸೇವಾಶ್ರಮದಲ್ಲಿ ಕಟ್ಟಡ ಉದ್ಘಾಟನೆ
April 29, 2024
11:12 PM
by: ದ ರೂರಲ್ ಮಿರರ್.ಕಾಂ
ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ | ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ನಿಮಗಿದು ಗೊತ್ತೇ? | ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ | ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ |
April 29, 2024
3:30 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror