ಸುಳ್ಯ: ರಕ್ತದಾನ ಎಂಬುದು ಮಹಾದಾನ. ಇಂತಹದ್ದೊಂದು ದಾನದಲ್ಲಿ ಸುಳ್ಯದ ಯುವಬ್ರಿಗೆಡ್ ತಂಡ ತೊಡಗಿಸಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಕನಿಷ್ಟ 300 ಯುನಿಟ್ ಗಿಂತ ಹೆಚ್ಚು ರಕ್ತ ನೀಡಿದೆ. ಈ ತಂಡದಲ್ಲಿ ಸುಮಾರು 450 ಮಂದಿ ಇದ್ದಾರೆ. ರಕ್ತ ಬೇಕಾದಾಗ ತಕ್ಷಣ ಈ ತಂಡದ ಸದಸ್ಯರು ರಕ್ತ ನೀಡುತ್ತಾರೆ. ಈ ಮೂಲಕ ಸಮಾಜದ ಸೇವೆಯನ್ನು ಮಾಡುತ್ತಿದ್ದಾರೆ.
ಯುವಬ್ರಿಗೆಡ್ ಸಮಾಜದ ವಿವಿಧ ಕೆಲಸಗಳನ್ನು ಕಳೆದ ಅನೇಕ ಸಮಯಗಳಿಂದ ಮಾಡುತ್ತಲೇ ಬರುತ್ತಿದೆ. ಅದರಲ್ಲಿ ರಕ್ತದಾನವೂ ಒಂದು. ಯುವ ಬ್ರಿಗೇಡ್ ರಕ್ತ ನಿಧಿಯ ಕಟ್ಟಿದ ಕೇಶವ ಇವರು ಈ ತಂಡದ ಮಾರ್ಗದರ್ಶಕರು. ಸುಳ್ಯದಲ್ಲಿ ರಕ್ತದ ಅವಶ್ಯಕತೆ ಇರುವುದನ್ನು ಗಮನಿಸಿ ಒಂದು ವರ್ಷ ದಲ್ಲಿ ಸತತವಾಗಿ ಕೆವಿಜಿ ಅಥವಾ ಸರಕಾರಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಲಾಗಿದೆ. 300 ಕ್ಕಿಂತ ಮೇಲೆ ರಕ್ತದ ಯುನಿಟ್ ಗಳನ್ನು ಒದಗಿಸಿದ ಕೀರ್ತಿ ಯುವಾ ಬ್ರಿಗೇಡ್ ರಕ್ತ ನಿಧಿಗೆ ಸಲುತ್ತದೆ. ಇದೊಂದು ಸೇವೆಗೆ ಇಡೀ ಸಮಾಜವೇ ಅಭಿನಂದನೆ ಹೇಳುತ್ತದೆ.
ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಚುರುಕುಗೊಳ್ಳುತ್ತಿದ್ದು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯ ಆರಂಭವಾಗಿದೆ. ಜೂನ್…
ಗುರುವಾರದ ವೇಳೆಗೆ ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ…
ಮ್ಯಾನ್ಮಾರ್ನಿಂದ ಅಕ್ರಮವಾಗಿ ಸಾಗಾಟವಾಗುತ್ತಿದ್ದ ₹24 ಕೋಟಿ ಮೌಲ್ಯದ ಅಡಿಕೆಯನ್ನು ಮಿಜೋರಾಂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.…
ರಾಜ್ಯಾದ್ಯಂತ ಅಡಿಕೆ ಗಿಡಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗಿದ್ದು,ಕೆಲವು ಕಡೆ ಸಸಿಯ ಬೆಲೆ ₹100ಕ್ಕೆ…
ಕೇಂದ್ರ ಸರ್ಕಾರದ ವಿವಿಧ ಕೃಷಿ ಸೌಲಭ್ಯಗಳನ್ನು ಪಡೆಯಲು ‘ಕೇಂದ್ರ ರೈತ ಐಡಿ’ ಕಡ್ಡಾಯವಾಗುತ್ತಿದೆ.…
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಕೆಜಿಗೆ ₹5 ಏರಿಕೆ ದಾಖಲಾಗಿದ್ದು, ಹೊಸ ಅಡಿಕೆ…