ಸುಳ್ಯ: ರಕ್ತದಾನ ಎಂಬುದು ಮಹಾದಾನ. ಇಂತಹದ್ದೊಂದು ದಾನದಲ್ಲಿ ಸುಳ್ಯದ ಯುವಬ್ರಿಗೆಡ್ ತಂಡ ತೊಡಗಿಸಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಕನಿಷ್ಟ 300 ಯುನಿಟ್ ಗಿಂತ ಹೆಚ್ಚು ರಕ್ತ ನೀಡಿದೆ. ಈ ತಂಡದಲ್ಲಿ ಸುಮಾರು 450 ಮಂದಿ ಇದ್ದಾರೆ. ರಕ್ತ ಬೇಕಾದಾಗ ತಕ್ಷಣ ಈ ತಂಡದ ಸದಸ್ಯರು ರಕ್ತ ನೀಡುತ್ತಾರೆ. ಈ ಮೂಲಕ ಸಮಾಜದ ಸೇವೆಯನ್ನು ಮಾಡುತ್ತಿದ್ದಾರೆ.
ಯುವಬ್ರಿಗೆಡ್ ಸಮಾಜದ ವಿವಿಧ ಕೆಲಸಗಳನ್ನು ಕಳೆದ ಅನೇಕ ಸಮಯಗಳಿಂದ ಮಾಡುತ್ತಲೇ ಬರುತ್ತಿದೆ. ಅದರಲ್ಲಿ ರಕ್ತದಾನವೂ ಒಂದು. ಯುವ ಬ್ರಿಗೇಡ್ ರಕ್ತ ನಿಧಿಯ ಕಟ್ಟಿದ ಕೇಶವ ಇವರು ಈ ತಂಡದ ಮಾರ್ಗದರ್ಶಕರು. ಸುಳ್ಯದಲ್ಲಿ ರಕ್ತದ ಅವಶ್ಯಕತೆ ಇರುವುದನ್ನು ಗಮನಿಸಿ ಒಂದು ವರ್ಷ ದಲ್ಲಿ ಸತತವಾಗಿ ಕೆವಿಜಿ ಅಥವಾ ಸರಕಾರಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಲಾಗಿದೆ. 300 ಕ್ಕಿಂತ ಮೇಲೆ ರಕ್ತದ ಯುನಿಟ್ ಗಳನ್ನು ಒದಗಿಸಿದ ಕೀರ್ತಿ ಯುವಾ ಬ್ರಿಗೇಡ್ ರಕ್ತ ನಿಧಿಗೆ ಸಲುತ್ತದೆ. ಇದೊಂದು ಸೇವೆಗೆ ಇಡೀ ಸಮಾಜವೇ ಅಭಿನಂದನೆ ಹೇಳುತ್ತದೆ.
ದೇಶದಲ್ಲಿ 43% ಮಳೆ ಕೊರತೆ ದಾಖಲಾಗಿರುವ ಹಿನ್ನೆಲೆ ಎಲ್ ನಿನೋ ಪರಿಣಾಮ ಎದುರಿಸಲು…
ತೆಂಗು ಬೆಳೆಗಾರರು ಕಾರ್ಮಿಕ ಕೊರತೆ ಮತ್ತು ಹೆಚ್ಚುತ್ತಿರುವ ಕೂಲಿ ವೆಚ್ಚದಿಂದ ಸಂಕಷ್ಟ ಎದುರಿಸುತ್ತಿದ್ದಾರೆ.…
ಕರಾವಳಿ ಕರ್ನಾಟಕದಲ್ಲಿ ಜೂನ್ 26ರವರೆಗೆ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ…
ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಕಾಪರ್ ಸಲ್ಫೇಟ್ ಕೊರತೆ, ಬೆಳೆ ವಿಮೆ ವಿಳಂಬ, ಕಳಪೆ…
ಜೂನ್ 25ರಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಳ್ಳುವ ಸಾಧ್ಯತೆ ಇದೆ. ಕರಾವಳಿ ಮತ್ತು…
ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಕೃಷಿ ಹಾಗೂ ಆರೋಗ್ಯಕ್ಕೆ ಹಾನಿಯಾಗುತ್ತಿದೆ…