ಸುಳ್ಯ: ರಕ್ತದಾನ ಎಂಬುದು ಮಹಾದಾನ. ಇಂತಹದ್ದೊಂದು ದಾನದಲ್ಲಿ ಸುಳ್ಯದ ಯುವಬ್ರಿಗೆಡ್ ತಂಡ ತೊಡಗಿಸಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಕನಿಷ್ಟ 300 ಯುನಿಟ್ ಗಿಂತ ಹೆಚ್ಚು ರಕ್ತ ನೀಡಿದೆ. ಈ ತಂಡದಲ್ಲಿ ಸುಮಾರು 450 ಮಂದಿ ಇದ್ದಾರೆ. ರಕ್ತ ಬೇಕಾದಾಗ ತಕ್ಷಣ ಈ ತಂಡದ ಸದಸ್ಯರು ರಕ್ತ ನೀಡುತ್ತಾರೆ. ಈ ಮೂಲಕ ಸಮಾಜದ ಸೇವೆಯನ್ನು ಮಾಡುತ್ತಿದ್ದಾರೆ.
ಯುವಬ್ರಿಗೆಡ್ ಸಮಾಜದ ವಿವಿಧ ಕೆಲಸಗಳನ್ನು ಕಳೆದ ಅನೇಕ ಸಮಯಗಳಿಂದ ಮಾಡುತ್ತಲೇ ಬರುತ್ತಿದೆ. ಅದರಲ್ಲಿ ರಕ್ತದಾನವೂ ಒಂದು. ಯುವ ಬ್ರಿಗೇಡ್ ರಕ್ತ ನಿಧಿಯ ಕಟ್ಟಿದ ಕೇಶವ ಇವರು ಈ ತಂಡದ ಮಾರ್ಗದರ್ಶಕರು. ಸುಳ್ಯದಲ್ಲಿ ರಕ್ತದ ಅವಶ್ಯಕತೆ ಇರುವುದನ್ನು ಗಮನಿಸಿ ಒಂದು ವರ್ಷ ದಲ್ಲಿ ಸತತವಾಗಿ ಕೆವಿಜಿ ಅಥವಾ ಸರಕಾರಿ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಲಾಗಿದೆ. 300 ಕ್ಕಿಂತ ಮೇಲೆ ರಕ್ತದ ಯುನಿಟ್ ಗಳನ್ನು ಒದಗಿಸಿದ ಕೀರ್ತಿ ಯುವಾ ಬ್ರಿಗೇಡ್ ರಕ್ತ ನಿಧಿಗೆ ಸಲುತ್ತದೆ. ಇದೊಂದು ಸೇವೆಗೆ ಇಡೀ ಸಮಾಜವೇ ಅಭಿನಂದನೆ ಹೇಳುತ್ತದೆ.
ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…
ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…