Opinion

#GlobalWarming| ಸಮುದ್ರ ಮಟ್ಟಕ್ಕಿಂತ ಕೆಳಕ್ಕೆ ಹೋಗಲಿವೆಯಂತೆ ಕೇರಳದ 4 ಜಿಲ್ಲೆಗಳು…!? | 2050ರ ವೇಳೆಗೆ ಹಲವು ಪ್ರದೇಶಗಳು ಮುಳುಗಡೆಯಾಗುವ ಎಚ್ಚರಿಕೆ ನೀಡಿದ ವರದಿ.. |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಜಾಗತಿಕ ತಾಪಮಾನದ ಬಗ್ಗೆ ಎಚ್ಚರಿಕೆ ಕೇಳಿ ಬರುತ್ತಲೇ ಇದೆ. ಇದಕ್ಕೆ ಕಾರಣ ಜಾಗತಿಕ ತಾಪಮಾನದಿಂದಾಗಿ ಉಂಟಾಗುವ ಸಮಸ್ಯೆಗಳು. ಸಮದ್ರ ಮಟ್ಟ ಏರಿಕೆ, ಹವಾಮಾನಬದಲಾವಣೆ, ಅತಿಯಾದ ತಾಪಮಾನ ಹೀಗೆ ಇವುಗಳು ಗ್ಲೋಬಲ್‌ ವಾರ್ಮಿಂಗ್‌ ಜೊತೆ ನೇರವಾದ ಸಂಬಂಧ ಹೊಂದಿವೆ. ಈ ಹಿಂದೆ ಬಂದ ಸುಮಾರು ಅಧ್ಯಯನಗಳು ಜಾಗತಿಕ ತಾಪಮಾನದಿಂದಾಗಿ ಸಮುದ್ರಗಳ ಮಟ್ಟ ಏರಿಕೆ ಆಗುತ್ತಿದೆ, ಇದರಿಂದ 2050ರ ವೇಳೆಗೆ ಹಲವು ಪ್ರದೇಶಗಳು ಮುಳುಗಡೆಯಾಗಬಹುದು ಎಂದು ಸೂಚಿಸಿವೆ. ಭಾರತದಲ್ಲಿ ಮುಂಬೈ, ಮಹಾರಾಷ್ಟ್, ಕೇರಳ#Kerala, ಗುಜರಾತ್‌ ಕರಾವಳಯಂತಹ ಪ್ರದೇಶಗಳು ಅಪಾಯದಲ್ಲಿವೆ ಎಂದು ತಿಳಿಸಿವೆ.

Advertisement

ಕೇರಳದ ನಾಲ್ಕು ಜಿಲ್ಲೆಗಳಿಗೆ ಹೆಚ್ಚಿನ ಅಪಾಯ: ಇದೇ ರೀತಿಯ ಮತ್ತೊಂದು ವರದಿ ಬಹಿರಂಗವಾಗಿದ್ದು, ಜಾಗತಿಕ ತಾಪಮಾನದ ಕಾರಣ 2050ರ ವೇಳೆಗೆ ಕೇರಳದ 4 ಜಿಲ್ಲೆಗಳು ಸಮುದ್ರ ಮಟ್ಟಕ್ಕಿಂತ ಕೆಳಕ್ಕೆ ಹೋಗಬಹುದು ಎಂದು ಎಚ್ಚರಿಸಿದೆ. ನ್ಯೂಜೆರ್ಸಿ ಮೂಲದ ವಿಜ್ಞಾನ ಸಂಸ್ಥೆಯಾದ ಕ್ಲೈಮೇಟ್ ಸೆಂಟ್ರಲ್ ನಿರ್ಮಿಸಿದ ಹೊಸ ಡಿಜಿಟಲ್ ಎಲಿವೇಶನ್ ಮಾಡೆಲ್#DEM ಮೊದಲ ವರದಿಯಲ್ಲಿ ಮಧ್ಯ ಕೇರಳದ ಭಾಗಗಳು ಸಮುದ್ರ ಮಟ್ಟ ಏರಿಕೆಯ ಹೆಚ್ಚಿನ ಅಪಾಯದ ವಲಯಗಳು ಎಂದು ತಿಳಿಸಿತ್ತು. ಆದರೆ ಇದೀಗ ಮತ್ತೊಂದು ವರದಿಯನ್ನು ಬಿಡುಗಡೆ ಮಾಡಿದ್ದು, 2050 ರ ವೇಳೆಗೆ ಜಿಲ್ಲೆಯ ಹಲವು ಭಾಗಗಳು ಮುಳುಗಡೆಯಾಗಬಹುದು ಎಂದು ತಿಳಿಸಿದೆ.

ವರದಿಯು 2050 ರ ವೇಳೆಗೆ 1 ಮೀ ಸಮುದ್ರ ಮಟ್ಟ ಏರಿಕೆಯ ಸಂದರ್ಭದಲ್ಲಿ ಅದರೊಳಗೆ ಮುಳುಗಡೆಯಾಗಬಹುದಾದ ಹೆಚ್ಚಿನ ಪ್ರದೇಶಗಳು ಸೇರಲಿವೆ ಎಂದು ತಿಳಿಸಿದ್ದು ಅದರ ಹೊಸ ಆವೃತ್ತಿ ಕೇರಳದ ಕೊಟ್ಟಾಯಂ ಮತ್ತು ತ್ರಿಸೂರ್‌ನ ಒಳಭಾಗಗಳ ಮೇಲೆ ಭೀಕರವಾದ ಪರಿಣಾಮ ಬೀರಬಹುದು ಎಂದಿದೆ. ಮೊದಲ ವರದಿಗಳು ಕುಟ್ಟನಾಡ್, ಕೊಚ್ಚಿ ದ್ವೀಪಗಳು ಮತ್ತು ವೈಕೋಂನ ಕರಾವಳಿ ಪ್ರದೇಶಗಳ ಬಗ್ಗೆ ಎಚ್ಚರಿಕೆ ನೀಡಿತ್ತು, ಆದರೆ ಈಗಿನ ವರದಿಗಳು ಪೆರಮಂಗಲಂ, ಪುರನಾಟ್ಟುಕರ, ಅರಿಂಬೂರ್, ಪರಕ್ಕಾಡ್, ಮಣಕ್ಕೋಡಿ ಮತ್ತು ತ್ರಿಶೂರ್‌ನ ಕೂರ್ಕೆಂಚೇರಿ ಮತ್ತು ಕೊಟ್ಟಾಯಂನ ಕೆಲವು ಪ್ರದೇಶಗಳು, ತಲಯಾಜಂ, ಚೆಮ್ಮನಾತುಕರ, ಅಚಿನಕಂ ಮತ್ತು ಬ್ರಹ್ಮಮಂಗಲಂ ಸೇರಿದಂತೆ ಹೆಚ್ಚಿನ ಆಂತರಿಕ ಸ್ಥಳಗಳಿಗೆ ಅಪಾಯವಿದೆ ಎಂದು ತಿಳಿಸಿದೆ.
ಸಮುದ್ರ ಮಟ್ಟ ಏರಿಕೆ : ಈಗಾಗಲೇ ಅಸಾಮಾನ್ಯ ಮತ್ತು ವಿಪರೀತ ಮಳೆಯ ಘಟನೆಗಳನ್ನು ಕಾಣುತ್ತಿರುವ ಮಧ್ಯ ಕೇರಳ, ಅಂಟಾರ್ಕ್ಟಿಕಾದಲ್ಲಿ ಮಂಜುಗಡ್ಡೆಯ ಕರಗುವಿಕೆಯಿಂದ ಉಂಟಾದ ಸಮುದ್ರ ಮಟ್ಟ ಏರಿಕೆಯ ಹಿನ್ನೆಲೆಯಲ್ಲಿ, ದೊಡ್ಡ ಪರಿಣಾಮ ಎದುರಿಸಬೇಕಾಗಬಹುದು. ಎರ್ನಾಕುಲಂ, ಕೊಟ್ಟಾಯಂ ಮತ್ತು ಅಲಪ್ಪುಳದ ದೊಡ್ಡ ಭಾಗಗಳನ್ನು ಒಳಗೊಂಡಂತೆ ನಾಲ್ಕು ಜಿಲ್ಲೆಗಳು ಮತ್ತು ತ್ರಿಶೂರ್‌ನ ಕೆಲವು ಭಾಗಗಳು 2050 ರ ವೇಳೆಗೆ ಸಮುದ್ರ ಮಟ್ಟಕ್ಕಿಂತ ಕೆಳಗಿರಬಹುದು ಎಂದು ಸಮುದ್ರ ಮಟ್ಟ ಏರಿಕೆಯ ಅಂದಾಜನ್ನು ವರದಿ ತೋರಿಸಿದೆ. ಈ ವರದಿಗಳ ಪ್ರಕಾರ ಜಿಲ್ಲೆಯ ಮುನಂಬಂ, ಕುಜಿಪ್ಪಿಳ್ಳಿ, ಚೆರೈ, ನಾಯರಂಬಲಂ, ಚೆಂದಮಂಗಲಂ, ಪುಥೆನ್‌ವೇಲಿಕ್ಕಾರ, ಕಡಮಕುಡಿ, ಪುತ್ತುವೈಪೆ, ಫೋರ್ಟ್ ಕೊಚ್ಚಿ, ವರಪುಳ, ಬೊಲ್ಗಟ್ಟಿ, ಚೆಲ್ಲಾನಂ, ಉದಯನಪುರಂ, ತಲಯೋಲಪರಂಬು, ಚೇರ್ತಲ, ಕುಮಾರಕೊಂ, ಮುಹಮ್ಮ, ಕೊತ್ತಂಚೇರಿ, ತನ್ನೀ ಪ್ರದೇಶಗಳು ಸಂಪೂರ್ಣವಾಗಿ ಮುಳಗಡೆಯಾಗುವ ಸಾಧ್ಯತೆಗಳಿವೆ.

ಪ್ರಮುಖ ಕರಾವಳಿ ನಗರಗಳಿಗೆ ಸಂಬಂಧಿಸಿದ ಇಂಟರ್‌ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್#IPCC ವರದಿಯು ಸಮುದ್ರ ಮಟ್ಟವು 2050 ರ ವೇಳೆಗೆ ಗಣನೀಯವಾಗಿ ಏರಿಕೆಯಾಗಲಿದೆ ಎಂದು ಸೂಚಿಸಿದೆ. ಉತ್ತರ ಹಿಂದೂ ಮಹಾಸಾಗರದಲ್ಲಿ#NIO ಸಮುದ್ರ ಮಟ್ಟ ಏರಿಕೆಯು ವರ್ಷಕ್ಕೆ 1.06-1.75mm ದರದಲ್ಲಿ ಸಂಭವಿಸಿದೆ. 1874 ರಿಂದ 2004 ರವರೆಗೆ ಮತ್ತು 25 ವರ್ಷಗಳಲ್ಲಿ ವರ್ಷಕ್ಕೆ 3mm ಗಿಂತ ಹೆಚ್ಚಾಗಿದೆ. ಈ ಬಗ್ಗೆ ಮಾತನಾಡಿದ ಹಿರಿಯ ಪರಿಸರ ವಿಜ್ಞಾನಿ ಕೆ ಕೆ ರಾಮಚಂದ್ರನ್ “1m ಏರಿಕೆಯ ಪ್ರಕ್ಷೇಪಣವನ್ನು ಈಗಾಗಲೇ ಮಾಡಲಾಗಿದೆ ಮತ್ತು ರಾಜ್ಯ ಹವಾಮಾನ ಕ್ರಿಯಾ ಯೋಜನೆಯು ಈ ಪ್ರಕ್ಷೇಪಣೆಯ ಆಧಾರದ ಮೇಲೆ ಈ ಸ್ಥಳಗಳ ಬಗ್ಗೆ ಎಚ್ಚರಿಕೆ ವಹಿಸಿದೆ. ಹವಮಾನವನ್ನು ಸುಧಾರಿಸುವ ಅನಿವಾರ್ಯತೆ ಈಗ ಬಂದಿದೆ. ರಾಜ್ಯ ಸರ್ಕಾರ ಹವಮಾನಕ್ಕೆ ಸಂಬಂಧಿಸಿದ ಗ್ರೀನ್ ಕ್ರೆಡಿಟ್ ಕಾರ್ಯಕ್ರಮವನ್ನು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಕೆ ಕೆ ರಾಮಚಂದ್ರನ್ ಹೇಳಿದ್ದಾರೆ.

– ಆಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಒತ್ತುವರಿಯಾಗಿರುವ  ಕೆರೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿ ಸೂಚನೆ

ಖಾಸಗಿಯವರಿಂದ ಒತ್ತುವರಿಯಾಗಿರುವ  ಪ್ರದೇಶವನ್ನು ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ…

3 hours ago

ಭಾರತದಿಂದ ಅಫ್ಘಾನಿಸ್ತಾನಕ್ಕೆ 4.8 ಟನ್ ಜೀವರಕ್ಷಕ ಲಸಿಕೆ ರವಾನೆ

ಭಾರತವು 4.8 ಟನ್ ಲಸಿಕೆಗಳನ್ನು ಅಫ್ಘಾನಿಸ್ತಾನಕ್ಕೆಕಳುಹಿಸುವ ಮೂಲಕ ಮಾನವೀಯ ನೆರವು ನೀಡಿದೆ. ಇದರಲ್ಲಿ…

3 hours ago

ಭ್ರಷ್ಟಾಚಾರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ  | ಉಪಲೋಕಾಯುಕ್ತ ಬಿ. ವೀರಪ್ಪ ಎಚ್ಚರಿಕೆ

ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು, ಭ್ರಷ್ಟಾಚಾರದ ವಿರುದ್ಧ…

3 hours ago

ಶುಕ್ರ ಮತ್ತು ರಾಹು ಮೀನ ರಾಶಿಯಲ್ಲಿ ಸಂಯೋಗ | 5 ರಾಶಿಚಕ್ರಗಳಲ್ಲಿ ವಿಶೇಷ ಪ್ರಭಾವ |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago

ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ | ಜಿಲ್ಲೆಯ ಅತ್ಯುತ್ತಮ ಕೃಷಿ ಸಖಿ ಪ್ರಶಸ್ತಿ ಸಂಪಾಜೆ ಮೋಹಿನಿ ವಿಶ್ವನಾಥ್ ಅವರಿಗೆ

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ ಕರ್ನಾಟಕ…

13 hours ago

ಹವಾಮಾನ ವರದಿ | 24-04-2025 | ಎ.26 ರಿಂದ ರಾಜ್ಯದ ವಿವಿದೆಡೆ ಮಳೆ ಪ್ರಮಾಣ ಹೆಚ್ಚಳ |

ಈಗಿನಂತೆ ಎಪ್ರಿಲ್ 26ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಆರಂಭವಾಗುವ ನಿರೀಕ್ಷೆ ಇದೆ.

13 hours ago