ಇನ್ಫೋಸಿಸ್ನ ಮಾಜಿ ಮುಖ್ಯಸ್ಥ ಎನ್ ಆರ್ ನಾರಾಯಣಮೂರ್ತಿ ಅವರು ನೀಡಿರುವ ವಾರದ 70 ಗಂಟೆ ಕೆಲಸದ ಬಗೆಗಿನ ಸಲಹೆ ವಿವಿಧ ಆಯಾಮಗಳಿಂದ ಚರ್ಚೆ ನಡೆಯುತ್ತಲೇ ಇದೆ. ಈ ನಡುವೆಯೇ, ಇನ್ನೊಬ್ಬ ಉದ್ಯಮ ದಿಗ್ಗಜ , ಟೆಕ್ ಮಹೀಂದ್ರ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿಪಿ ಗುರ್ನಾನಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಟೆಕ್ ಮಹೀಂದ್ರ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿಪಿ ಗುರ್ನಾನಿ ಅವರು ಸಾಮಾಜಿಕ ಜಾಲತಾಣ ಎಕ್(X), ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿ, ಬಹುಶ: ನಾರಾಯಣಮೂರ್ತಿ ಅವರು 70 ಗಂಟೆ ಕೆಲಸ ಮಾಡಬೇಕೆಂದು ಹೇಳಿದ್ದು ನಿಮಗಾಗಿ, ಕಂಪನಿಗಾಗಿ ಮತ್ತು ದೇಶಕ್ಕಾಗಿ ಎಂಬ ಹೊಸ ವಿವರಣೆ ನೀಡಿದ್ದಾರೆ.ಕಂಪನಿಗಾಗಿ 70 ಗಂಟೆ ಕೆಲಸ ಮಾಡಿ ಎಂದು ಹೇಳಿಲ್ಲ. ಕಂಪನಿಗೆ 40 ಗಂಟೆ ಕೆಲಸ ಮಾಡಿ, ನಿಮಗಾಗಿ 30 ಗಂಟೆ ಕೆಲಸ ಮಾಡಿ ಹೇಳಿರಬೇಕು ಹೇಳಿದ್ದಾರೆ.ನಿಮ್ಮ ಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸಲು 10,000 ಗಂಟೆಗಳನ್ನು ವಿನಿಯೋಗಿಸಿ, ಹಗಲು ರಾತ್ರಿ ಕಷ್ಟ ಪಟ್ಟು ಕೆಲಸ ಮಾಡಿ, ಪರಿಣತಿಯನ್ನು ಸಾಧಿಸಿ” ಎಂದು ಗುರ್ನಾನಿ ಅವರು ಎಕ್ಸ್ನಲ್ಲಿ(ಟ್ವಿಟರ್ ) ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಈ ಮೂಲಕ ಯುವಜನರಿಗೆ ಪರಿಶ್ರಮಿಗಳಾಗುವಂತೆ ಸಲಹೆ ನೀಡಿದ್ದಾರೆ.
ನೀವು 10 ಗಂಟೆ ಕೆಲಸ ಮಾಡಲು ಮುಂದಾದರೆ, ನಿಮ್ಮ ವ್ಯಕ್ತಿತ್ವ ಇತರರಿಗಿಂತಲೂ ಭಿನ್ನವಾಗುತ್ತದೆ. ದೇಶದ ಪಥವೂ ಬದಲಾಗುತ್ತದೆ, ಎಂದೂ ಅವರು ಹೇಳಿದ್ದಾರೆ. ಕಠಿಣ ಪರಿಶ್ರಮವು ಯಶಸ್ಸಿನ ಬೆನ್ನೆಲುಬು, ಆದರೆ ವಾರಕ್ಕೆ 70 ಗಂಟೆಗಳ ಕೆಲಸ ಎನ್ನುವುದು ಕೇವಲ ಗಡಿಯಾರದ ಗಂಟೆಗಳ ಕುರಿತಾದ ಸಂಗತಿಯಲ್ಲ. ಆ ಗಂಟೆಗಳಲ್ಲಿ ವ್ಯಕ್ತಿಯು ಕೆಲಸದಲ್ಲಿ ತೋರಿಸುವ ಉತ್ಸಾಹ ಮತ್ತು ಗುಣಮಟ್ಟ ಬಹಳ ಮುಖ್ಯ, ಗಂಟೆಗಳ ಕೆಲಸ ಎನ್ನುವ ಸವಾಲನ್ನು ಯುವಜನರು ಸ್ವೀಕರಿಸಬೇಕು, ಇದರಿಂದ ವೇತನದ ಬೆಳವಣಿಗೆ ಮತ್ತು ಕಲಿಕೆಯು ಸಾಧ್ಯವಾಗುತ್ತದೆ ಎಂದು ಮಾರಿಕೊ ಗ್ರೂಪ್ ಅಧ್ಯಕ್ಷ ಹರ್ಟ್ ಮಾರಿವಾಲಾ ಕೂಡಾ ಹೇಳಿದ್ದಾರೆ.
ಟೆಕ್ ಮಹೀಂದ್ರ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಸಿಪಿ ಗುರ್ನಾನಿ ಅವರು ಸಾಮಾಜಿಕ ಜಾಲತಾಣ ಎಕ್(X), ನಲ್ಲಿ ಅಭಿಪ್ರಾಯ ಹೀಗಿದೆ…
ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಜೂನ್ 11 ರಿಂದ…
ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್,…