#SwachhBharat | ತಿಪ್ಪೆಕಾಳಿ ರಂಗನಾಥ್ ನೈಜ ಸ್ವಚ್ಛತಾ ಸೇನಾನಿ | ಗಾಂಧಿಯ ಕನಸು ನನಸು ಮಾಡಲು ಟೊಂಕಕಟ್ಟಿ ನಿಂತ ವ್ಯಾಪಾರಿ |

October 2, 2023
6:08 PM

ಮೈಸೂರಿನ ತಲಕಾಡಿನ ಗ್ರಾಮದಲ್ಲಿರುವ ತಿಪ್ಪೆಕಾಳಿ ರಂಗನಾಥ್‌ ತಾವು ಸ್ವಯಂ ಪ್ರೇರಣೆಯಿಂದ ಒಬ್ಬಂಟಿಯಾಗಿ ಸ್ವಚ್ಛತಾ ಸೇವೆ ನಡೆಸುತ್ತಾ ಬಂದಿದ್ದಾರೆ. 54 ವರ್ಷದ ತಿಪ್ಪೆಕಾಳಿ ರಂಗನಾಥ್ ನಿಜವಾದ ಸ್ವಚ್ಛತಾ ಸೇನಾನಿ. ಗ್ರಾಮದಲ್ಲಿ ತನ್ನದೇ ಆದ ನ್ಯಾಯಬೆಲೆ ಅಂಗಡಿ ಹೊಂದಿರುವ ಅವರು, ಪ್ರತಿ ಶನಿವಾರದ ದಿನ ತನ್ನ ಸ್ವಚ್ಛತಾ ರಥದ ಮೂಲಕ ಕ್ಲೀನ್‌ ಮಾಡುತ್ತಾ ಬಂದಿದ್ದಾರೆ. ಹೀಗೆ ಇವ್ರ ಸ್ವಚ್ಛತಾ ಅಭಿಯಾನವು ಈಗ 24 ವರ್ಷಗಳನ್ನ ಪೂರೈಸಿದೆ.

Advertisement
Advertisement

ಸ್ವಚ್ಛತೆಯೇ ಸೇವೆ..! : ಸ್ವಚ್ಛ ಭಾರತ ಯೋಜನೆ ಜಾರಿಗೂ ಮುನ್ನವೇ, ಗಾಂಧೀಜಿ #Gandhiji ಅವರ ಕನಸನ್ನು ನನಸು ಮಾಡಲು ಟೊಂಕಕಟ್ಟಿ ನಿಂತವರು ಈ ತಿಪ್ಪೆಕಾಳಿ ರಂಗನಾಥ್‌ ಅವರು. ತಮ್ಮ ಬೈಕ್‌ಗೆ ಟ್ರಾಲಿಯನ್ನ ಕಟ್ಟಿಕೊಂಡು ಓಡಾಡುವ ಇವ್ರು ಆ ಮೂಲಕ ತಾವು ಸ್ವಚ್ಛ ಮಾಡಿದ ಬಳಿಕ ಸಂಗ್ರಹವಾಗುವ ಕಸ ಕಡ್ಡಿಗಳನ್ನ ಅದರ ಸಹಾಯದಿಂದ ಕೊಂಡೊಯ್ದು ವಿಲೇವಾರಿ ಮಾಡುತ್ತಾರೆ. ಶಾಲಾ ಶೌಚಾಲಯದಿಂದ ಹಿಡಿದು ಚರಂಡಿ, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಇವರು ಸ್ವಚ್ಛತಾ ಕಾರ್ಯ ನಡೆಸುತ್ತಾ ಬಂದಿದ್ದಾರೆ.

Advertisement

ಪ್ರಶಸ್ತಿಗಳ ಗೌರವ : ಮೈಸೂರು ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ಇಂಡಿಯನ್ ವರ್ಚುವಲ್ ಯುನಿವರ್ಸಿಟಿ ಬೆಂಗಳೂರು ಇವರಿಂದ ಗೌರವ ಡಾಕ್ಟರೇಟ್ ನೀಡಿ ತಿಪ್ಪೆಕಾಳಿ ರಂಗನಾಥ್‌ ಅವರನ್ನ ಗೌರವಿಸಲಾಗಿದೆ. ಆರಂಭದಲ್ಲಿ ರಂಗನಾಥ್‌ ಅವರು ಈ ಕೆಲಸಕ್ಕೆ ಇಳಿದಾಗ ಕುಟುಂಬಿಕರಿಂದಲೇ ಸಾಕಷ್ಟು ಅಪಸ್ವರ ಬಂದಿತ್ತು. ಆದ್ರೀಗ ಅವ್ರೆಲ್ಲ ರಂಗನಾಥ್‌ ಅವರ ಜೊತೆಗಿದ್ದು ಅವರ ಸಹಾಯಕ್ಕೆ ನಿಲ್ಲುತ್ತಾ ಬಂದಿರುವುದು ವಿಶೇಷ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ಮುಂದಿನ 40 ರಿಂದ 50 ಡಿಗ್ರಿ ಸೆಲ್ಸಿಯಸ್ ಶಾಖ ತರಂಗಕ್ಕೆ ಸಿದ್ಧರಾಗಿ | ಬಿಸಿಲು ಜಾಸ್ತಿ ಎಂದು ಜಗಲಿ ಕಟ್ಟೆಯಲ್ಲಿ ಕುಳಿತು ಮಾತನಾಡಿದರೆ ಪ್ರಯೋಜನವಿಲ್ಲ…! |
May 1, 2024
5:22 PM
by: The Rural Mirror ಸುದ್ದಿಜಾಲ
ಸ್ವಚ್ಛತೆ ಬಗ್ಗೆ ಒಂದು ಅನಿಸಿಕೆ | ಎಲ್ಲಾ ಯಕ್ಷಗಾನ ಮೇಳದವರಿಗೆ ಒಂದು ವಿನಂತಿ | ಚುನಾವಣೆಯ ಡ್ಯೂಟಿಯವರಿಗೂ ಸ್ವಚ್ಛತೆ ಬಗ್ಗೆ ತರಬೇತಿ ನೀಡಿ |
May 1, 2024
4:55 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror