Advertisement
Opinion

ಪ್ರಸ್ತುತ ನೀರಿನ ಹಾಗೂ ಭೂಮಿಯ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆ | ಇಂದಿನ ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವೇ.?

Share

ದಿನದಿಂದ ದಿನಕ್ಕೆ ನಮ್ಮ ಪರಿಸರ(Environment) ವಿನಾಶದತ್ತ ಸಾಗುತ್ತಿದೆ. ಇದರ ಪರಿಣಾಮ ಮಳೆಕೊರತೆ(Rain Crisis), ಹೆಚ್ಚಿದ ತಾಪಮಾನ(Heat wave), ಪ್ರಳಯ(Flood), ವಿವಿಧ ತೆರನಾದ ರೋಗಗಳನ್ನು(Desease) ನಾವು ಎದುರಿಸುತ್ತಿದ್ದೇವೆ. ಇದಕ್ಕೆ ಮನುಷ್ಯನ ಅತಿಯಾಸೆಯೇ ಕಾರಣ. ಈಗಾಗಲೇ ನಮ್ಮ ಪ್ರಕೃತಿ ವಿನಾಶದತ್ತ ತಲುಪಿ ಅದರ ಪ್ರಕೋಪವನ್ನು ಮನುಜನಿಗೆ ತಿರುಗಿಸಿ ಕೊಡುತ್ತಿದೆ. ಇದರಿಂದ ಪಾರಾಗಬೇಕಾದರೆ ನಾವು ಅಗತ್ಯ ಕ್ರಮಗಳನ್ನು ಕೈಗೊಳ್ಳಲೇ ಬೇಕು. ಹಾಗಾಗಿ ಇತ್ತೀಚೆಗೆ ತುಮಕೂರಿನ ಸರ್ಕಾರಿ ಕಾಲೇಜೊಂದರಲ್ಲಿ  ಪ್ರಸ್ತುತ ನೀರಿನ ಹಾಗು ಭೂಮಿಯ ಸಮಸ್ಯೆಗಳ ಬಗೆಗಿನ ಚರ್ಚೆ ನಡೆಯಿತು. ಈ ಬಗ್ಗೆ ಬಂದಿರುವ ಸಂಕ್ಷಿಪ್ತ ವರದಿ ಇಲ್ಲಿದೆ..

Advertisement
Advertisement
Advertisement
Advertisement

1. ಇಂದಿನ ನೀರಿನ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳೇನು..?  ಬೃಹತ್ ಕಾರ್ಖಾನೆಗಳೋ.? ಮನೆ ಮುಂಗಟ್ಟಿನ ದುಂದು ವೆಚ್ಚವೋ.? ಅಥವಾ ಕಾರ್ಖಾನೆಗಳಿಂದಲೀ ,  ಕೃಷಿ ಪದ್ದತಿಯಿಂದಲೋ.?  :  ನಿಮಗೆ ಗೊತ್ತಿರಲಿ, ಶೇಕಡ 89% ನೀರು ಸುಮ್ಮನೆ ಹಾಳಾಗುತ್ತಿರುವುದು ಕಾರ್ಖಾನೆ-ಕೃಷಿಯಿಂದ..!!!

Advertisement

2. ಇಂದಿನ ಹವಾಮಾನ ಬಿಕ್ಕಟ್ಟಿಗೆ ಮುಖ್ಯ ಕಾರಣವೇನು..? : ಬೆಟ್ಟ ಗುಡ್ಡ ಹಾಳುಗೆಡವಿದಕ್ಕೋ.? ಜನಸಂಖ್ಯೆ ಹೆಚ್ಚಾಗಿದ್ದಕ್ಕೋ.? ಎಲ್ಲೆಲ್ಲೂ ಕಾಂಕ್ರೀಟ್ ಮಯವಾದ ಕಾರಣಕ್ಕೋ.? ಸರ್ಕಾರದ ಕೆಟ್ಟ ನೀತಿಗಳ ಕಾರಣಕ್ಕೋ.? ಕ್ಯಾಪಿಟಲಿಸ್ಟ್ ಗಳ ದಬ್ಬಾಳಿಕೆ ಹಾಗು ಹಾವಳಿಗೋ.? :  ಭೂ ಮಂಡಲದಲ್ಲಿ ಹೆಚ್ಚು ಕಡಿಮೆ ಶೇ90% ಜನ ಸರಳವಾಗಿಯೇ ಬದುಕುತ್ತಿದ್ದಾರೆ… ಕ್ಯಾಪಿಟಲಿಸ್ಟ್ / ಬಹುರಾಷ್ಟ್ರೀಯ ಕಂಪನಿಗಳ ಹಾವಳಿ ಹೆಚ್ಚಾಗಿದ್ದರಿಂದ ನೈಸರ್ಗಿಕ ಸಂಪನ್ಮೂಲಗಳನ್ನು ಡೆವಲಪ್ಮೆಂಟ್ ಅನ್ನೋ ಹೆಸರಿಟ್ಟುಕೊಂಡು ಲೂಟಿ ಹೊಡೆಯುತ್ತಿದ್ದಾರೆ ಮತ್ತು ಅಂಥವರಿಗೆ ನಮ್ಮ ಸರ್ಕಾರದವರು ರತ್ನಗಂಬಳಿ ಹಾಸಿ ಕರೆಯುತ್ತಿದ್ದಾರೆ.. ಇದು ಮುಖ್ಯ ಕಾರಣ..!!!

3. ಹಾಗಾದ್ರೆ, ಇಂದಿನ ಈ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವೇ.? ಖಂಡಿತ ಸಾಧ್ಯ. ಮನುಷ್ಯನು ಮಾಡಿಕೊಂಡ ಸಮಸ್ಯೆ, ಅವನೇ ಉತ್ತರ ಹುಡುಕಿಕೊಳ್ಳಬೇಕು ಅಷ್ಟೇ. ಲಾಪೋಡಿಯದ ಲಕ್ಷ್ಮಣ್ ಸಿಂಗ್, ಮಹಾರಾಷ್ಟ್ರದ ಪಾನಿ ಫೌಂಡೇಶನ್, ರಾಜಸ್ಥಾನದ ರಾಜೇಂದ್ರ ಸಿಂಗ್ ಅಂತಹವರು ನಮಗೆ ನಿದರ್ಶನ.. ಜನ ಚಳುವಳಿಯಿಂದ ಖಂಡಿತ ಸಾಧ್ಯವಿದೆ..!!! ಪ್ರೀತಿ, ಮಮತೆ, ಅನುಬಂಧ, ತಾಳ್ಮೆ ಹಾಗು ಸಹನೆ ಹೊಂದಿರುವ ನಾಯಕ/ನಾಯಕಿಯ ಮುಂದಾಳತ್ವದ ಅವಶ್ಯಕತೆಯಿದೆಯಷ್ಟೆ. ಕೃಷಿ ನೀತಿ, ಎಕಾನಮಿ ಹಾಗು ಡೆವಲಪ್ಮೆಂಟ್ ನ ದೃಷ್ಟಿಕೋನ, ಯುವಕರಲ್ಲಿ ನೈಸರ್ಗಿಕ ಸಮನ್ಮೂಲಗಳ ಬಗ್ಗೆ ಅರಿವು ಮೂಡಿಸಿದಲ್ಲಿ ಇನ್ನ ಇಪತ್ತು-ಮೂವತ್ತು ವರ್ಷಗಳಲ್ಲಿ ಈ ಬಿಕಟ್ಟಿನಿಂದ ಹೊರಬರಲು ಖಂಡಿತ ಸಾಧ್ಯವಿದೆ..

Advertisement

ಇಲ್ಲದಿದ್ದರೆ ಏನಾದೀತು..? :  ಕೃಷಿಭೂಮಿ ಮರುಭೂಮಿಯಾಗುವುದು,  ಅಪೌಷ್ಠಿಕತೆ ತಾಂಡವ ವಾಡುವುದು, ನೀರಿಗಾಗಿ ಹಪಾಹಪಿತನ ಹುಟ್ಟುವುದು,  ಉಸಿರಾಡೋ ಗಾಳಿಗೂ ಅಭಾವ ಹೆಚ್ಚುವುದು,  ಮನುಷ್ಯನ ಜೀವಿತ ಅವಧಿ ಕ್ಷೀಣಿಸುವುದು, ಬಡಜನರಿಗಂತೂ ಮೂಲ ಸೌಕರ್ಯಗಳ ಕೊರತೆಯಿಂದಾಗಿ ರೋಗ-ರುಜಿನಗಳಿಗೆ ಸಿಕ್ಕಿ ನರಳುವಂತಾಗುತ್ತದೆ, ಇನ್ನೂ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಭಿಕಾರಿಗಳಾಗುವರು, ಬಹಳಷ್ಟು ಗಿಡ-ಮರಗಳು, ಜೀವ-ಜಂತುಗಳು ಮಾಯವಾಗುವವು, ಬಿಸಿಲಿನ ಆರ್ಭಟ ಹೆಚ್ಚುವುದು, ಮಳೆ ನೀರಿನ ರಭಸಕ್ಕೆ ಮಣ್ಣು ಕೊಚ್ಚಿ ಸಮುದ್ರದ ಪಾಲಾಗುವುದು… ಹೇಳುತ್ತಿದ್ದರೆ ಕೊನೆಯಿಲ್ಲ… ಹೀಗೆ ಭೀಕರ ಸ್ಥಿತಿಗೆ ಸಿಲುಕಿ, ನರಳಾಟದ ಬದುಕು ನಮ್ಮ ಮುಂದೆ ಈಗ ಕನ್ನಡಿ ಹಿಡಿದಂತಿದೆ..

4. ನಮ್ಮ ಮುಂದಿನ ಸ್ಥಿತಿಗತಿ ಹೀಗಿದ್ದಲ್ಲಿ, ನಾವೇನು ಮಾಡಬೇಕು.?

Advertisement
  • ಮೊದಲು ಈ ವಿಪರೀತ ಹಣಕ್ಕಾಗಿ ಹೋರಾಡುತ್ತಿರುವ ಬದುಕನ್ನು ಸರಳವಾಗಿಸಿಕೊಳ್ಳಬೇಕು, ವ್ಯಾಪಾರೀಕರಣದ, ಹೊಡೆದಾಟದ, ವ್ಯಾಮೋಹದ ಬದುಕನ್ನು ಬಿಡಬೇಕು.. ಪ್ರೀತಿ, ಸಹನೆ, ಸಂತೃಪ್ತಿಯ ಬದುಕನ್ನು ಕಟ್ಟಿಕೊಳ್ಳಬೇಕು.
  • ಪ್ರಕೃತಿಯನ್ನು – ಮನುಷ್ಯರನ್ನು ಹಿಂಸಿಸದ ರೀತಿಯಲ್ಲಿ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು.
  • ಎಲ್ಲಾ ಜೀವಿಗಳು ನಮ್ಮಂತೆಯೇ ಎಂದು ಭಾವಿಸುವ, ಗೌರವಿಸುವ, ಪ್ರೀತಿಸುವ ವಿಚಾರಧಾರೆಗಳನ್ನು ಮಕ್ಕಳಲ್ಲಿ ಕಾರ್ಯರೂಪಿತವಾಗಿ ತರಬೇಕು.
  • ಮನೆ, ಶಾಲೆ ಹಾಗು ಕಟ್ಟಡಗಳು ಚಿಕ್ಕದಾಗಿ, ಗಿಡ-ಮರ ಬಳ್ಳಿಯ ಸಂಯೋಜನೆಯಲ್ಲಿ ಕಟ್ಟಿಕೊಳ್ಳಬೇಕು. ಮಳೆ ನೀರಿನ ಕೊಯ್ಲು ಹಾಗು ಶೇಖರಣೆ, ಮಣ್ಣಿನ ಬಗ್ಗೆ ಮಮತೆ, ವಿಜ್ಞಾನ ಹಾಗು ಅರಿವು ಎಲ್ಲರಲ್ಲೂ ಮನೆಮಾಡಬೇಕು.
  • ಕೃಷಿ ಹಾಗು ಗುಡಿ ಕೈಗಾರಿಕೆಗಳು ಹಳ್ಳಿ-ಹಳ್ಳಿಗಳಲ್ಲೂ ಸ್ಥಾಪಿತವಾಗಬೇಕು.
  • ಬಂಡವಾಳ ಶಾಹಿಗಳು / ದೊಡ್ಡ ದೊಡ್ಡ ಕಾರ್ಖಾನೆಗಳು / ಬಹು ರಾಷ್ಟ್ರೀಯ ಕಂಪನಿಗಳು ಲಗ್ಗೆ ಇಡದಂತೆ ನೋಡಿಕೊಳ್ಳಬೇಕು.
  • ಗ್ರಾಮ ಪಂಚಾಯಿತಿ ನಮ್ಮ ಪ್ರಮುಖ ಸರ್ಕಾರವಾಗಬೇಕು.
  • ಜನರ ಸಹಭಾಗಿತ್ವದ ನೀತಿ ಜಾರಿಗೊಳಿಸಬೇಕು.
  • ಸರಳತೆ, ಶಾಂತಿ, ಪ್ರೀತಿಯ ಬದುಕು ಮಕ್ಕಳ ಪಾಠಗಳಲ್ಲಿ ಲೀನವಾಗಬೇಕು.
  • ಮಕ್ಕಳನ್ನು ಕಾಯಕಕ್ಕೆ ರೂಢಿ ಮಾಡಬೇಕು.
  • ಕಾಯಕ ಆಧಾರಿತ ಕಲಿಕೆ ಪ್ರತಿ ಹಳ್ಳಿಗಳಲ್ಲೂ ಸ್ಥಾಪಿತವಾಗಬೇಕು.

ಹೀಗೆ ಹತ್ತು ಹಲವು ಬಗೆಯ ಚಿಂತನೆ ಚರ್ಚೆಗಳೊಂದಿಗೆ..ಕಥೆಗಳ ಸ್ವರೂಪಗೊಂದಿಗೆ ಎರಡು ತಾಸು ವಿದ್ಯಾರ್ಥಿಗಳ ಜೊತೆಗಿನ ಸಂವಾದ – ಚರ್ಚೆ ನಡೆಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ʼದರ್ಶಿನಿʼ ವಿನೂತನ ಕಾರ್ಯಕ್ರಮಕ್ಕೆ  ಸರ್ಕಾರ ಚಾಲನೆ

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…

18 hours ago

‘ಜಲಾನಯನ ಯಾತ್ರೆ’ ಕುರುಡು ಮಲೆಯಲ್ಲಿ ಆರಂಭ

ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…

18 hours ago

ದೇಶದ 25 ಸಾವಿರ ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸುವ ಕ್ರಮ  | 900 ಕ್ಕೂ ಅಧಿಕ ಗ್ರಾಮಗಳಲ್ಲಿ ಮೊಬೈಲ್‌ ಟವರ್‌ ಅಳವಡಿಕೆ |

15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…

18 hours ago

ಕಪ್ಪತ ಗುಡ್ಡ ರಕ್ಷಣೆ ಕುರಿತು ಜಾಗೃತಿ | ಗುಡ್ಡದ ತಪ್ಪಲಿನ ಗ್ರಾಮಗಳಲ್ಲಿ ಜನಜಾಗೃತಿ

ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…

19 hours ago

ಅಡಿಕೆಯ ಹಳದಿ ಎಲೆ ರೋಗದ ಖಾಯಂ ನಿವಾರಣೆಗಾಗಿ ಯೋಜನೆ ಅನುಷ್ಟಾನಗೊಳ್ಳುತ್ತದೆ ಎಂಬ ಭರವಸೆ ಇರಲಿ

ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…

1 day ago

ಅಡಿಕೆ ಆಮದು ಮೇಲೆ ನಿಗಾ ವಹಿಸಲು ಸಚಿವರಿಗೆ ಮನವಿ ಮಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…

1 day ago