MIRROR FOCUS

ಸರ್ಕಾರಗಳಿಂದ ಇನ್ನೂ ಬಾರದ ಸೌಲಭ್ಯ | ಅಣೆಕಟ್ಟು ನಿರ್ಮಿಸಿ 800 ಎಕರೆಯಲ್ಲಿ ಕೃಷಿ ಬೆಳೆಯುವ ಗ್ರಾಮಸ್ಥರು..!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಎಷ್ಟೋ ಹಳ್ಳಿಗಳಲ್ಲಿ(Village) ರೈತರಿಗೆ(Farmer) ಬೇಕಾದ ಸೌಲಭ್ಯಗಳು ಇನ್ನು ಅವರನ್ನು ತಲುಪಿಲ್ಲ. ಹಾಗೆ ಹಳ್ಳಿಗಳ ಕಥೆನೂ ಅದೇ.. ಸರಿಯಾದ ಮೂಲಭೂತ ಸೌಕರ್ಯಗಳಿಲ್ಲದೆ(Basic amenities) ಅದೆಷ್ಟೋ ಹಳ್ಳಿಗಳ ಜನ ಇಂದು ಬದುಕುತ್ತಿದ್ದಾರೆ. ಕೆಲವೊಮ್ಮೆ ಈ ಸರ್ಕಾರಗಳನ್ನು(Govt)ನಂಬಿದರೆ ಪ್ರಯೋಜನ ಇಲ್ಲ ಎಂದು ತಮಗೆ ಬೇಕಾದ ಕೆಲಸಗಳನ್ನು ತಾವೇ ಒಗ್ಗೂಡಿ ಮಾಡಿಕೊಳ್ಳುತ್ತಾರೆ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ(Uttara kannada) ಕುಮಟಾದ ಜನ ತಮ್ಮೂರಿಗೆ ಬೇಕಾದ್ದನ್ನು ತಾವೇ ಮಾಡಿಕೊಳ್ಳುವ ಸ್ವಾವಲಂಬಿಗಳು.

Advertisement
Advertisement

ಕುಮಟಾ ತಾಲೂಕಿನ ಬಗ್ಗೋಣ ಎಂಬ ಊರಲ್ಲಿ ಒಂದು ನದಿ(River) ಇದೆ. ಈ ನದಿ ಉಪ್ಪುನೀರು(Salt water) ಹಾಗೂ ಸಿಹಿನೀರಿನ(Sweet water) ಸಂಗಮವಾಗುವ ಜಾಗ. ಬೆಳೆ ಬೆಳೆಯಬೇಕಾದರೆ, ಜನ ಬದುಕಬೇಕಾದರೆ ಸಿಹಿ ನೀರು ಅತ್ಯಗತ್ಯ.  ಇದು ಅನೇಕ ಊರಿಗೆ ಸಂಪರ್ಕ ಕಲ್ಪಿಸೋ ಊರು. ಇಲ್ಲಿ ಸಿಹಿ ನೀರನ್ನು ಹಲಗೆ ಹಾಗೂ ಮಣ್ಣಿನ ತಾತ್ಕಾಲಿಕ ಅಣೆಕಟ್ಟು(Dam) ಮಾಡಿಕೊಂಡು ಸಂಗ್ರಹಿಸಲಾಗುತ್ತಿತ್ತು. ಆದರೆ ಪ್ರತಿ ವರ್ಷ ಮಳೆ(Rain) ಬಂತೆಂದರೆ ಕಟ್ಟ ಪೂರ್ತಿ ಕೊಚ್ಚಿ ಹೋಗಿತ್ತು. ನಂತರ ಪ್ರತಿ ವರ್ಷ ಗ್ರಾಮಸ್ಥರು ತಮ್ಮ ಕೈಯಿಂದಲೇ 50,000-60,000 ಖರ್ಚು ಮಾಡಿ ಹೀಗೆ ಅಣೆಕಟ್ಟನ್ನು ಕಟ್ಟಿಕೊಳ್ಳುತ್ತಾರೆ. ಈ ಪರಿಪಾಠ 10 ವರ್ಷದಿಂದ ಜಾರಿಯಲ್ಲಿದೆ.

ಒಗ್ಗಟಾಗಿ ಸೇತುವೆ ನಿರ್ಮಾಣ : ಬಗ್ಗೋಣ ಊರಿಗೆ ಊರೇ ಒಗ್ಗಟ್ಟಾಗಿ ಈ ಸೇತುವೆ ಕಟ್ಟಿದೆ. ಅಡಿಕೆ ದಬ್ಬೆಗಳನ್ನು ಹಾಗೂ ಮಣ್ಣನ್ನು ಬಳಸಿಕೊಂಡು ಮಾಡಿರುವ ಈ ತಡೆಗೋಡೆಯಿಂದ ಉಪ್ಪು ನೀರು ಬೇರ್ಪಟ್ಟು ಸುಮಾರು 500 ಎಕರೆ ಕೃಷಿ ಭೂಮಿ ಸೇರಿದಂತೆ 800 ಎಕರೆ ಭೂ ಪ್ರದೇಶ ಉಪ್ಪು ನೀರಿನಿಂದ ಮುಕ್ತವಾಗಿದೆ. ಬಗ್ಗೋಣ, ಊರು ಕೇರಿ, ಹೆರವಟ್ಟಾ ಊರಿನ ಜನ ಇದರ ಲಾಭ ಪಡೆಯುತ್ತಿದ್ದಾರೆ. ಜನರೇ ಅಣೆಕಟ್ಟಿನ ತರಹ ರಚನೆಯೊಂದನ್ನು ಮಾಡಿಕೊಂಡು ಅನೇಕರಿಗೆ ಮಾದರಿಯಾಗಿದ್ದಾರೆ. ಈ ಮೂಲಕ 800 ಎಕರೆ ಜಮೀನನ್ನು ಉಪ್ಪು ನೀರಿನಿಂದ ರಕ್ಷಿಸಿಕೊಂಡಿದ್ದಾರೆ.

  • ಅಂತರ್ಜಾಲ ಮಾಹಿತಿ
Advertisement
/**/
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ನಿಮ್ಮ ಚಿತ್ರ – ನಮ್ಮ ಬೆಳಕು | ಅನಿರುದ್ಧ ಪಿ |

ಮಕ್ಕಳ ಉತ್ಸಾಹಕ್ಕೆ ಒಂದು ವೇದಿಕೆ. ಕಲೆಯ ಮೂಲಕ ಮಕ್ಕಳ ಮನಸ್ಸನ್ನು ಅರಳಿಸಲು ,…

9 hours ago

ನಿಮ್ಮ ಚಿತ್ರ – ನಮ್ಮ ಬೆಳಕು | ಅನಿರುದ್ಧ ಪಿ |

ಅನಿರುದ್ಧ ಪಿ, 7 ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆ ಸುಬ್ರಹ್ಮಣ್ಯ |…

9 hours ago

ಗ್ರಾಮೀಣ ಭಾಗದ ದುರವಸ್ಥೆ ನೋಡಿ…! ನೀರಿನ ಪೈಪಿನ ಸಂಕಷ್ಟ ಜನತೆಗೆ..! ಇಲಾಖೆಗಳು ಎಲ್ಲಿದ್ದಾವೆ..?

ಇಲಾಖೆಗಳ ಬೇಜವಾಬ್ದಾರಿ ಕಾರಣದಿಂದ ಇಂದು ಗ್ರಾಮೀಣ ಭಾಗದ ಜನರು ಸಂಕಷ್ಟ ಪಡುವಂತಾಗಿದೆ. ಇಲಾಖೆಗಳು…

13 hours ago

ಬೆಂಗಳೂರು ಗ್ರಾಮಾಂತರ ಜಿಲ್ಲೆ | ಮತ್ಸ್ಯ ಸಂಪದ ಯೋಜನೆಗೆ ಅರ್ಜಿ ಆಹ್ವಾನ

ಮೀನುಗಾರಿಕೆ ಇಲಾಖೆ ವತಿಯಿಂದ ಮತ್ಸ್ಯ ಸಂಪದ ಯೋಜನೆಯಡಿ ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದ ಯೋಜನೆಗಳಾದ…

14 hours ago

ಹಿಮಾಚಲ ಪ್ರದೇಶದಲ್ಲಿ12 ಗಂಟೆಗಳಿಂದ ಭಾರೀ ಮಳೆ | ರಾಜ್ಯದಲ್ಲಿ ರೆಡ್ ಅಲರ್ಟ್ |

ಹಿಮಾಚಲ ಪ್ರದೇಶದ ಹಲವಾರು ಭಾಗಗಳಲ್ಲಿ ಈಗಾಗಲೇ ಸುರಿದ ಮಳೆ ಹಾನಿಯನ್ನುಂಟು ಮಾಡಿದೆ. ಹೆಚ್ಚಿನ…

14 hours ago

ಬೈಂದೂರಿನಲ್ಲಿ ಗಮನಸೆಳೆದ ಹಲಸು ಹಾಗೂ ಕೃಷಿ ಮೇಳ | ಕೃಷಿಕ ಉದ್ಯಮಿಯಾದರೆ ಮಾತ್ರ ಕೃಷಿ ಉಳಿವು

ಕೃಷಿಕ ಉದ್ಯಮಿಯಾದರೆ ಮಾತ್ರ ಕೃಷಿ ಉಳಿಯಲು ಸಾಧ್ಯ,ರೈತರು ತಮ್ಮ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿಕೊಂಡು…

19 hours ago