MIRROR FOCUS

ಬಹುಬೆಳೆ ಬೆಳೆದು ಉತ್ತಮ ಫಸಲು ಪಡೆದ ರೈತ | ಕೃಷಿಗೆ ರೈತ ಅನುಸರಿಸಿದ ಕ್ರಮಗಳಾವುವು..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಿಶ್ರ ಬೆಳೆ, ಪರ್ಯಾಯ ಬೆಳೆ, ಬಹು ಬೆಳೆ(Mixed cropping, alternating cropping, multiple cropping) ಸೇರಿದಂತೆ ಕೃಷಿಯ ಹಲವು ಪದ್ಧತಿಗಳಿಗೆ ರೈತರು ಸಾಮಾನ್ಯವಾಗಿ ಹೆಚ್ಚು ಗಮನ ನೀಡುವುದಿಲ್ಲ. ಈ ಬಗ್ಗೆ ರೈತರು ಚಿತ್ತ ಹರಿಸಿದರೆ ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ ಎನ್ನುವುದು ಕೃಷಿ ತಜ್ಞರ(Agricultural expert) ಮಾತು. ಆದರೆ ರೈತರು ಮಾತ್ರ ಈ ರೀತಿಯ ವೈವಿಧ್ಯಮಯ ಕೃಷಿಯತ್ತ ಮುಖ ಮಾಡುವುದು ಕಡಿಮೆ. ಆದರೆ ಇದೇ ಬಹುಬೆಳೆ ಬೇಸಾಯದ ಮೂಲಕ ಹಾವೇರಿ ತಾಲೂಕಿನ ಆಲದಕಟ್ಟಿಯ ರೈತ ಚಂದ್ರಶೇಖರ ಅಗಡಿ ಬಂಪರ್ ಬೆಳೆ ಬೆಳೆದಿದ್ದಾರೆ.

Advertisement
ಈ ರೈತ ತಮ್ಮ ಎರಡು ಎಕರೆ ಜಮೀನಿನಲ್ಲಿ ಹಸಿಮೆಣಸಿನಕಾಯಿ, ಒಂದು ಎಕರೆಯಲ್ಲಿ ಮಾವು, ಅಡಿಕೆ, ಚಿಕ್ಕು, ಕಬ್ಬು ಸೇರಿದಂತೆ ಬಹುಬೆಳೆ ಬೆಳೆದು ಫಸಲು ತೆಗೆದಿದ್ದಾರೆ. ಇವರು ಬೆಳೆದ ಹಸಿಮೆಣಸಿನಕಾಯಿಗೆ ಬಂಪರ್ ಬೆಲೆಯೂ ಬಂದಿದೆ. ಪ್ರತಿ ಎಕರೆಗೆ ಒಂದು ಲಕ್ಷ ರೂಪಾಯಿಯಂತೆ ಆದಾಯ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದ ರೈತ ಚಂದ್ರಶೇಖರ ಹಸಿಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಆದರೆ ಪ್ರಸ್ತುತ ವರ್ಷ ಬಿಸಿಲಿನ ಪ್ರಖರತೆ ಅಧಿಕವಾಗಿದ್ದು ರೋಗ-ರುಜಿನಗಳೂ ಅಧಿಕವಾಗಿದ್ದವು. ಈ ಸಂದರ್ಭದಲ್ಲಿ ಇವರ ಕೈ ಹಿಡಿದಿದ್ದು ಸಾವಯುವ ಕೃಷಿ ಪದ್ದತಿ ಮತ್ತು ಜೈವಿಕ ಗೊಬ್ಬರಗಳು.ಹೌದು, ಚಂದ್ರಶೇಖರ ತಮ್ಮ ಜಮೀನುಗಳಿಗೆ ಬಳಸುವುದು ತಿಪ್ಪೆ ಗೊಬ್ಬರ ಮತ್ತು ಕೋಳಿಗೊಬ್ಬರ. ತಮ್ಮ ಮನೆಯಲ್ಲಿ ಜಾನುವಾರುಗಳ ಗೊಬ್ಬರ ಕಡಿಮೆಯಾದರೆ ಬೇರೆ ರೈತರಿಂದ ತಿಪ್ಪೆಗೊಬ್ಬರ ಖರೀದಿಸಿ ಚಂದ್ರಶೇಖರ ತಮ್ಮ ಜಮೀನಿಗೆ ಹಾಕಿದ್ದಾರೆ. ಇದರ ಪರಿಣಾಮ ಎರಡು ಎಕರೆಯಲ್ಲಿ ಹಸಿಮೆಣಸಿನಕಾಯಿ ಗಿಡಗಳು ನಳನಳಿಸುತ್ತಿವೆ. ಜೊತೆಗೆ ಗಿಡಗಳ ತುಂಬಾ ಮೆಣಸಿನಕಾಯಿ ಬಿಟ್ಟಿದ್ದು ರೈತನಿಗೆ ಅಧಿಕ ಲಾಭ ಸಿಕ್ಕಿದೆ.
ಮೊದಲ ಬಾರಿ 40 ಕ್ವಿಂಟಲ್ ಹಸಿಮೆಣಸಿನಕಾಯಿ ಕಟಾವ್ ಮಾಡಲಾಗಿದೆ. ಎರಡನೇ ಬಾರಿಯೂ 40 ಕ್ವಿಂಟಲ್ ಕಟಾವ್ ಮಾಡಿದ್ದಾರೆ. ಉಳಿದಂತೆ, ಇನ್ನೂ 20 ಕ್ಟಿಂಟಲ್ ಹಿಡಿದರೆ ಈ ವರ್ಷ ಎರಡು ಎಕರೆಗೆ ನೂರು ಕ್ವಿಂಟಲ್ ಹಸಿಮೆಣಸಿನಕಾಯಿ ಬೆಳೆದಂತಾಗುತ್ತದೆ.ಕಳೆದ ಬಾರಿ ಮಾರಾಟ ಮಾಡಿದಾಗ ಕ್ವಿಂಟಲ್‌ಗೆ 3,500 ರೂಪಾಯಿ ದರದಂತೆ ಹಸಿಮೆಣಸಿನಕಾಯಿ ಮಾರಾಟ ಮಾಡಿದ್ದಾರೆ. ಈ ಬಾರಿ ಕ್ವಿಂಟಲ್‌ಗೆ 3,000 ದರದಂತೆ ಆದಾಯ ಲಭಿಸಿದೆ. ಜೈವಿಕ ಉತ್ಪನ್ನಗಳ ಬಳಕೆಯಿಂದ ಅಧಿಕ ಇಳುವರಿ ಪಡೆದಿದ್ದೇವೆ ಎನ್ನುತ್ತಾರೆ ರೈತ ಚಂದ್ರಶೇಖರ. ಉಷ್ಣಾಂಶ ಅಧಿಕವಾದಾಗ ಮೆಣಸಿನಕಾಯಿ ಬೆಳೆಯಲ್ಲಿ ರಸಹೀರುವ ಕೀಟಗಳು ಅಧಿಕ. ಕೆಂಪುನೊಣ ಬಿಳಿಜೇಡಗಳ ಕಾಟವೂ ವಿಪರೀತ. ಇದರಿಂದ ಗಿಡಕ್ಕೆ ಎಲೆಮುಟುರು ರೋಗ ಮತ್ತು ಕಾಯಿಗಳ ಗಾತ್ರ ಕಡಿಮೆ ಗಾತ್ರವಾಗಿ ಇಳುವರಿ ಕುಂಠಿತವಾಗುತ್ತದೆ. ಆದರೆ ಚಂದ್ರಶೇಖರ್ ಅವರು​ ಸಾವಯುವ ಗೊಬ್ಬರ ಮತ್ತು ಜೈವಿಕ ಉತ್ಪನ್ನಗಳ ಬಳಕೆಯಿಂದ ಗಿಡಗಳನ್ನು ಹಲವು ರೋಗಗಳಿಂದ ರಕ್ಷಿಸಿದ್ದಾರೆ. ಜೊತೆಗೆ ಬೂದಿರೋಗ, ಕೀಟಭಾದೆ ಹಾಗೂ ಶಿಲೀಂಧ್ರ ಭಾದೆಯಿಂದ ಮೆಣಸಿನಕಾಯಿ ಬೆಳೆ ರಕ್ಷಿಸಿಕೊಂಡಿದ್ದಾರೆ.ಪರಿಣಾಮ, ಇವರ ಎರಡೆಕರೆ ಜಮೀನಿನಲ್ಲಿ ಹಸಿಮೆಣಸಿನಕಾಯಿ ಇಳುವರಿ ಉತ್ತಮವಾಗಿ ಬಂದಿದ್ದು ಒಳ್ಳೆ ಆದಾಯ ದೊರೆತಿದೆ.
ಇದಕ್ಕೆಲ್ಲ ರಾಸಾಯನಿಕ ಉತ್ಪನ್ನಗಳ ಕಡಿಮೆ ಬಳಕೆ ಮತ್ತು ಹೆಚ್ಚು ಜೈವಿಕ ಉತ್ಪನ್ನಗಳ ಅಧಿಕ ಬಳಕೆ ಕಾರಣ ಎನ್ನುತ್ತಾರೆ ಚಂದ್ರಶೇಖರ ಅಗಡಿ. ಒಟ್ಟಿನಲ್ಲಿ ಇವರ ಈ ಬಹುಬೆಳೆ ಪದ್ಧತಿ, ಸಾವಯುವ ಹಾಗೂ ಜೈವಿಕ ಉತ್ಪನ್ನಗಳ ಬಳಕೆ ಉಳಿದ ಜಿಲ್ಲೆಯ ರೈತರಿಗೆ ಮಾದರಿಯಾಗಿದೆ.
  • ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಧಾರಣೆ ಏರುಪೇರು ಯಾಕಾಗಿ?

ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…

6 hours ago

ಹವಾಮಾನ ವರದಿ | 14-05-2025 | ಗುಡುಗು ಸಹಿತ ಮಳೆಯ ಮುನ್ಸೂಚನೆ | ಮೇ.27 ಸುಮಾರಿಗೆ ಕೇರಳ ಹಾಗೂ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ

ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…

9 hours ago

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ – ಈಶ್ವರ ಖಂಡ್ರೆ

ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…

10 hours ago

ಕೇತುವಿನಿಂದ 18 ತಿಂಗಳು ಈ ರಾಶಿಯವರಿಗೆಲ್ಲಾ ಉತ್ತಮವಾಗಲಿದೆ |

ಹೆಚ್ಚಿನ ವೈಯಕ್ತಿಕ ಸಲಹೆಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

13 hours ago

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

2 days ago