Advertisement
MIRROR FOCUS

ರಂಗು ರಂಗಿನ ವಿವಿಧ ತಳಿಯ ಕಬ್ಬು ಬೆಳೆದ ರೈತ | ಎಲ್ಲಿ..? ಹೇಗಿರಬಹುದು..?

Share

ಕಬ್ಬು(Sugar cane) ಬಗ್ಗೆ ಕೇಳೇ ಇರುತ್ತೀರಿ, ಉತ್ತರ ಕರ್ನಾಟಕ(North Karnataka), ಹಳೇ ಮೈಸೂರು ಭಾಗ(Old Mysore), ಉತ್ತರ ಕನ್ನಡದ(Uttar Kannada) ಕೆಲ ಭಾಗದಲ್ಲೂ ಕಬ್ಬು ಬೆಳೆಯುತ್ತಾರೆ. ಕಬ್ಬಿನಲ್ಲಿ ವಿವಿಧ ಜಾತಿಗಳಿವೆ(Sugarcane breed). ಒಬ್ಬ ರೈತ(Farmer) ಹೆಚ್ಚೆಂದರೆ 3-4 ಬಗೆಯ ಕಬ್ಬನ್ನು ಬೆಳೆಯ ಬಹುದು. ಆದರೆ ಇಲ್ಲೊಬ್ಬ ರೈತ ಬರೋಬ್ಬರಿ ಎಂಟು ಜಾತಿಯ ರಂಗು ರಂಗಿನ ಕಬ್ಬನ್ನು ಬೆಳೆದಿದ್ದಾರೆ.  ಉತ್ತರ ಕನ್ನಡದ ಯಲ್ಲಾಪುರದ ಹೆಮ್ಮಾಡಿಯ ಕಾನುಕೊಡ್ಲಿಗೆ ಹೋದರೆ ಈ  ಕಲರ್ ಕಲರ್ ಕಬ್ಬುಗಳ ಲೋಕವನ್ನು ನೋಡಬಹುದು.

8 ಜಾತಿಯ ಕಬ್ಬು ಬೆಳೆ : ಯಲ್ಲಾಪುರದ ಪ್ರಸಾದ್ ಹೆಗಡೆಯವರು ಸುಮಾರು 8 ಜಾತಿಯ ಕಬ್ಬುಗಳನ್ನು ಬೆಳೆದಿದ್ದಾರೆ, ಅವುಗಳು ಕೆಂಪು, ಬಿಳಿ, ಕಪ್ಪು, ಹಸಿರು-ಕೆಂಪು-ಕಪ್ಪು, ಗಿಳಿ ಹಸಿರು, ಕಪ್ಪು ಮಿಶ್ರಿತ ಹಿಮ ಬಣ್ಣದ ಕಬ್ಬುಗಳು ಇಲ್ಲಿವೆ. ಇವೆಲ್ಲವೂ ಕರ್ನಾಟಕದ ಹೊರಗೆ ಆಂಧ್ರ, ತಮಿಳುನಾಡು ಹಾಗೂ ಮಹಾರಾಷ್ಟ್ರ ಮೂಲದ ಕಬ್ಬುಗಳು ಕೆಲವು ಸ್ಥಳೀಯ ಕಬ್ಬುಗಳೂ ಕೂಡ ಇದರಲ್ಲಿವೆ. ಪ್ರಾಯೋಗಿಕವಾಗಿ ಬೆಳೆಯಲ್ಪಡುತ್ತಿರುವ ಈ ಕಬ್ಬುಗಳು ಬಣ್ಣದಲ್ಲಿ ಮಾತ್ರವಲ್ಲ ರುಚಿಯಲ್ಲೂ ವಿಭಿನ್ನ.

ರೈನ್ ಬೋ ಕಬ್ಬು ಇದೆ: ಇದರಲ್ಲಿ ಬಾಳೆ ಕಬ್ಬು ಥೇಟ್ ಬಾಳೆ ಗಿಡದ ಹಾಗೆ ದಪ್ಪನಾಗಿ ಬಾಳೆಗಿಡದ ರೀತಿಯೇ ಬೆಳೆಯುತ್ತದೆ. ಹಾಗೆಯೇ ಬ್ಲ್ಯಾಕ್ ಕಬ್ಬು ಇದು ಆಂಧ್ರ ಮೂಲದ ಕಬ್ಬು ಇದು ಒಂದು ಬಿದಿರಿನಷ್ಟು ದಪ್ಪ ಇರುವ ಈ ಕಬ್ಬು ಅತೀ ಹೆಚ್ಚಿನ ರುಚಿ ಇರುವ ಹಾಗೂ ತುಂಬಾ ರಸ ಇರುವ ಕಬ್ಬು. ರೈನ್ ಬೋ ಕಬ್ಬು ಒಂದೇ ಕಬ್ಬಿನ ತುಂಡಲ್ಲಿ ಒಂದೊಂದು ಗಣ್ಣಿಗೂ ಹಸಿರು, ಕೆಂಪು, ನೀಲಿ, ಕಪ್ಪು ಬಣ್ಣವನ್ನು ಹೊಂದಿರುತ್ತದೆ.

ಕಪ್ಪು ಕಬ್ಬನ್ನು ಬಿಟ್ಟರೆ ರುಚಿಯಲ್ಲಿ ಎರಡನೇ ಸ್ಥಾನ ಇದಕ್ಕೆ ನಂತರ ಕೋಣನಕಟ್ಟೆ ಕಬ್ಬು ಎಂಬ ಸ್ಥಳೀಯ ಮಲೆನಾಡಿನ ಕಬ್ಬು. ಬೀಟ್ ರೂಟ್ ಕಬ್ಬು ಅಚ್ಚ ಕೆಂಪು ಬಣ್ಣದ ಕಬ್ಬಾಗಿದೆ. ಬಿಳಿ ಮೋರಿಸ್ ಕಬ್ಬು, ದಾಸ ಕಬ್ಬುಗಳೂ ಕೂಡ ಇಲ್ಲಿವೆ. ಎಂಟು ತಳಿಯ ಥರ ಥರದ ಕಬ್ಬುಗಳನ್ನು ನೋಡಲು ಈಗ ಬೇರೆ ರಾಜ್ಯಕ್ಕೆ ಹೋಗಬೇಕಿಲ್ಲ.

ರಂಗು ರಂಗಿನ ಕಬ್ಬು : ಇಲ್ಲಿ ಬಂದು ಕಬ್ಬುಗಳನ್ನು ನೋಡಿದರೆ ಇವ್ಯಾವುದೂ ಕಬ್ಬೇ ಎನಿಸಲು ಸಾಧ್ಯವಿಲ್ಲ ಯಾಕೆಂದರೆ ಒಂದು ಬಾಳೆಗಿಡದ ಹಾಗೆ ಮತ್ತೊಂದು ಬಿದಿರು ರೂಪದ ಕಬ್ಬು ಇದಕ್ಕೆ ಪ್ರಸಾದ್ ಹೆಗಡೆಯವರು ದೇಶ-ವಿದೇಶ ಓಡಾಡಿ ಶ್ರಮಪಟ್ಟಿದ್ದಾರೆ. ನಾವು ಕೇವಲ ಎರಡು ವಿಧದ ಕಬ್ಬನ್ನು ಬೆಳೆಸುತ್ತೇವೆ. ಅದು ವಾಣಿಜ್ಯೋದ್ದೇಶಕ್ಕಾಗಿ, ಆದರೆ ಈ ನಡುವೆ ಕೃಷಿ ಮಾಡೋದೆ ಕಸರತ್ತು ಎಂದು ಕೊಂಡಿರುವವರ ನಡುವೆ ಖುಷಿಯಿಂದ ಕೃಷಿ ಮಾಡಿ ರಂಗು ರಂಗಿನ ಕಬ್ಬು ಬೆಳೆದಿರುವ ಇವರ ಶ್ರಮ ಗಮನಾರ್ಹ.

  • ಅಂತರ್ಜಾಲ ಮಾಹಿತಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ

ಕರ್ನಾಟಕದಲ್ಲಿ ಮುಂದಿನ ಕೆಲವು ದಿನಗಳವರೆಗೆ ಒಣ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ. ಗುಜರಾತ್…

45 minutes ago

ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ

ಇಂದಿನ ಅಡಿಕೆ ಮಾರುಕಟ್ಟೆಯಲ್ಲಿ ಪಿಂಗಾರ, ಮಾಸ್‌, ಟಿಎಸ್‌ಎಸ್‌, ತುಮ್ಕೋಸ್‌, ಮ್ಯಾಮ್ಕೋಸ್ ಹಾಗೂ ಕ್ಯಾಂಪ್ಕೊ…

1 hour ago

ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ

ಕಾಡಾನೆ ಹಾವಳಿ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ 28 ಸಿಬ್ಬಂದಿಯ ಎಲಿಫೆಂಟ್ ಟಾಸ್ಕ್ ಫೋರ್ಸ್…

3 hours ago

ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ

ಕೊಪ್ಪ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ನಾಡಿಗೆ ಪ್ರವೇಶಿಸದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ…

3 hours ago

ಭವಿಷ್ಯದ ಬಾಳೆ ಬೆಳೆ ಉಳಿಸುವ ಗುಟ್ಟು ಕಾಡು ಬಾಳೆ ಜಾತಿಯಲ್ಲಿ!

ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…

15 hours ago

ಕೃಷಿ ಮಾರುಕಟ್ಟೆ ವರದಿ | ಅಡಿಕೆ ಮಾರುಕಟ್ಟೆಯಲ್ಲಿ ಮಿಶ್ರ ಫಲ…!

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…

1 day ago