Advertisement
Opinion

ಎಲ್ಲರೂ ಅರಿಯಲೇ ಬೇಕಾದ ಜೀವನ ಪಾಠ : ಮನಸ್ಸಿದ್ದರೆ ಏನು ಬೇಕಾದರು ಸಾಧಿಸಬಹುದು..

Share

👴ರಂಗಣ್ಣ ಎಂಬ ಅಶಿಕ್ಷಿತ, ಬಡವ ದೇವಸ್ಥಾನವೊಂದರಲ್ಲಿ 🔔ಗಂಟೆ ಹೊಡೆಯುವ ಕೆಲಸಕ್ಕೆ ಸೇರಿಕ್ಕೋಳ್ಳುತ್ತಾನೆ. ಶ್ರದ್ದೆಯಿಂದ ಆ ಕೆಲಸ ಮಾಡುತ್ತಿದ್ದ ಆತ 🔔👴’ಗಂಟೆ ರಂಗಣ್ಣ’ ಎಂದೇ ಜನಪ್ರಿಯನಾಗುತ್ತಾನೆ. ಕಾಲಾಂತರದಲ್ಲಿ ಆ ದೇವಾಲಯ ದೊಡ್ಡ ಕ್ಷೇತ್ರವಾಗಿ ಹೊರರಾಜ್ಯದವರು,ವಿದೇಶಿಗರೆಲ್ಲ ಭೇಟಿನೀಡತೊಡಗಿದರು. ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಿದ್ದ ಕಾರಣ ಆಡಳಿತ ಮಂಡಳಿಯ ಆದಾಯವು ಹೆಚ್ಚತೊಡಗಿತು. ಆಧುನಿಕ ಬದಲಾವಣೆಗಳು ಆದವು.

ಒಂದು ದಿನ ಆಡಳಿತ ಮಂಡಳಿಯವರು 👴ರಂಗಣ್ಣನನ್ನು ಕರೆಸಿ ‘ಆದಷ್ಟು ಬೇಗ ಇಂಗ್ಲಿಷ ಕಲಿತುಕೋ’ ಎಂದರು. ನನಗೆ ಅಕ್ಷರವೇ ಬರೋದಿಲ್ಲ, ಇಂಗ್ಲೀಷ ಹೇಗೆ ಕಲಿಯಲಿ? ಎಂದು ರಂಗಣ್ಣ ಆತಂಕ ವ್ಯಕ್ತಪಡಿಸಿದ. ಹೊರಗಿನ ಭಕ್ತರ ಸಂಖ್ಯೆ ಹೆಚ್ಚುತ್ತರುವದರಿಂದ ದೇವಸ್ತಾನದ ಪ್ರತಿಯೊಬ್ಬರು ಇಂಗ್ಲೀಷ್ ಕಲಿಯಲೇಬೇಕು ಎಂದು ತಾಕೀತು ಮಾಡಿದರು. ರಂಗಣ್ಣ ಅವರಿವರನ್ನು ಹಿಡಿದು 🔡ಇಂಗ್ಲಿಷ್‌ ಕಲಿಯಲು ಯತ್ನಿಸಿದರು ಒಂದಕ್ಷರವು ತಲೆಗೆ ಹತ್ತಲಿಲ್ಲ. ಪರಿಣಾಮ ಅವನನ್ನು ಕೆಲಸದಿಂದ ಕಿತ್ತೊಗೆದರು. ರಂಗಣ್ಣ ದಿಕ್ಕು ಕಾಣದೆ ದೇವಸ್ಥಾನದ ಹೊರಬೀದಿಯಲ್ಲಿ ಚಿಂತಿಸುತ್ತ ಹೊರಟ. ತಲೆ ನೋಯಿಸುತ್ತಿದ್ದುರಿಂದ☕ ಚಹಾ ಕುಡಿಯಬೇಕೆನಿಸಿತು. ಅರ್ಧ ಕಿ.ಮೀ ಬೀದಿಯ ಎರಡು ಕಡೆ ಕಾಣುತ್ತಿದ್ದಿದ್ದು 💐🍒🍇ಹೂವು-ಹಣ್ಣು, ತೆಂಗಿನಕಾಯಿ-ದೇವರ ಫೋಟೊಗಳು ಅಂಗಡಿ. ಎಲ್ಲೂ ಚಹಾ ಸಿಗದಿದ್ದಾಗ “ಅಲ್ಲಿಗೆ ಬರುವ ಲಕ್ಷಾಂತರ ಭಕ್ತರು ಚಹಕ್ಕಾಗಿ ಎಷ್ಟು ಪರದಾಡಬಹುದೆಂದು ವಾಸ್ತವದ ಅರಿವಾಯಿತು”

ಮರುದಿನ ಅದೇ ಓಣಿಯಲ್ಲಿ ಪುಟ್ಟ ☕ಚಹಾ ಅಂಗಡಿ ಪ್ರಾರಂಭಿಸಿದ. ಕ್ರಮೇಣ ಆತನ ಹೆಂಡತಿ ಸಣ್ಣಪುಟ್ಟ ತಿಂಡಿ-ತಿನಿಸು ಮಾಡಿಡತೊಡಗಿದಳು.  🏠ಗೂಡಂಗಡಿ-ಕ್ಯಾಂಟೀನಾಗಿ, ದರ್ಶಿನಿಯಾಗಿ ಮುಂದೆ ಸ್ಟಾರ್ ಹೋಟೆಲ್ಲಾಯಿತು. ಅಷ್ಟಕ್ಕೆ ನಿಲ್ಲಿಸದೇ ಹಲವೆಡೆ
ನಾಲ್ಕಾರು ಪ್ರತ್ಯೇಕ ಹೋಟೆಲ್ಲುಗಳನ್ನು ಪ್ರಾರಂಬಿಸಿ ಕಾಲಾಂತರದಲ್ಲಿ ರಾಜ್ಯದ ಪ್ರಸಿದ್ದ ಹೋಟೆಲ್ ಉದ್ಯಮಿ ಎನಿಸಿಕೊಂಡ ಒಂದು ದಿನ ಹೊರರಾಜ್ಯದ ಉದ್ಯಮಿಯೊಬ್ಬ ತನ್ನ ರಾಜ್ಯದಲ್ಲಿ 🏢ಸ್ಟಾರ್ ಹೋಟೆಲ್ ಪ್ರಾರಂಭಿಸಲು ರಂಗಣನನ್ನು ಪಾಲುದಾರನನ್ನಾಗಿ
ಮಾಡಿಕ್ಕೊಳ್ಳಲು ಬಂದ. ಮಾತುಕತೆ ನಡೆಯಿತು. ರಂಗಣ್ಣ ಒಪ್ಪಿದ. ಒಪ್ಪಂದ ಪತ್ರಕ್ಕೆ ಸಹಿಹಾಕಬೇಕಾಗಿ ಬಂದಾಗ ರಂಗಣ್ಣ ಎಡಗೈ ಹೆಬ್ಬೆಟ್ಟನ್ನು ಮುಂದುಮಾಡಿದ.

ದಿಗ್ಬ್ರಾಂತನಾದ ಎದುರಿನ ವ್ಯಕ್ತಿ ‘ಸಹಿ ಹಾಕುವಷ್ಟು ಇಂಗ್ಲೀಷ ಬರುವದಿಲ್ಲವೇ?’ ಎಂದು ಪ್ರಶ್ನಿಶಿದ. ಕನ್ನಡದಲ್ಲೇ ಬರೆಯಲು ಬಾರದ ತನಗೆ
ಇಂಗ್ಲೀಷ ಎಲ್ಲಿಂದ ಬರಬೇಕು ಎಂದು ರಂಗಣ್ಣ ಸಹಜವಾಗಿ ಉತ್ತರಿಸಿದ. ಆಗ ಎದುರಿನವ ಭಾಷೆಯೇ ಬಾರದೆ ಇಷ್ಟೆಲ್ಲಾ ಸಾಧನೆ ಮಾಡಿದ್ದಿರಿ, ನೀವೆನಾದ್ರೂ ಸರಿಯಾಗಿ ಇಂಗ್ಲೀಷ ಕಲಿತಿದ್ರೆ ದೇಶವನ್ನೆ ಆಳುತ್ತಿದ್ದಿರಿ ಎಂದು ಪ್ರಶಂಸಿಸಿದ. ರಂಗಣ್ಣ ಮೆಲ್ಲಗೆ ನಿಮ್ಮದು ತಪ್ಪು ಕಲ್ಪನೆ. ” ಒಂದೊಮ್ಮೆ ನನಗೆ ಇಂಗ್ಲೀಷ ಬಂದಿದ್ದರೆ 🏯ದೇವಸ್ತಾನದಲ್ಲಿ ಇನ್ನು ಗಂಟೆ 🔔ಬಾರಿಸುತ್ತಲೆ ಇರುತ್ತೀದ್ದೆ..

ಸಂಗ್ರಹ ಕಥೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

4 hours ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

9 hours ago

ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು

2025-26ರಲ್ಲಿ ಕ್ಯಾಂಪ್ಕೊ ₹3,735 ಕೋಟಿ ವಹಿವಾಟು ಮತ್ತು ₹49.62 ಕೋಟಿ ಲಾಭ ದಾಖಲಿಸಿದ್ದು,…

14 hours ago

ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?

ಸಂಪತ್ತು ಮತ್ತು ಸೌಲಭ್ಯಗಳು ಹೆಚ್ಚಿರುವುದೇ ನಿಜವಾದ ಶ್ರೀಮಂತಿಕೆಯಲ್ಲ; ಅವುಗಳನ್ನು ವಿವೇಕದಿಂದ ಬಳಸುವ ಮನಸ್ಸು…

1 day ago

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

2 days ago

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ…

2 days ago