Advertisement
Opinion

ಹೂವುಗಳೆಂದರೆ ಅದೇನೋ ಹೃದಯ ಬಿರಿಯುವುದು : ಆದರೆ ಈ ಪುಷ್ಪ ತರಬಲ್ಲ ಪುಷ್ಪ ಹೃದಯಾಘಾತಕ್ಕೆ ಕಾರಣವಾಗಬಲ್ಲುದು

Share

ಸಸ್ಯಗಳು ಔಷಧೀಯ ಗುಣಗಳನ್ನು(Medicinal plants) ಹೊಂದಿರುವುದು ಕೇಳಿದ್ದೇವೆ. ಅಪರೂಪಕ್ಕೆ ವಿಷಕಾರಿ ಹೂಗಳ(flower) ಬಗ್ಗೆಯೂ ತಿಳಿದುಕೊಂಡಿದ್ದೇವೆ. ಆದರೆ ಹೂವು ಹೃದಯಾಘಾತಕ್ಕೆ( Heart attack)ಕಾರಣ ಆಗಬಹುದೆಂದು ಅಧ್ಯಯನ ‌ತಿಳಿಸಿಕೊಟ್ಟಿದೆ. ಫಾಕ್ಸ್‌ಗ್ಲೋವ್‌(Foxglove)ಹೂವಿನ ಗಿಡ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಅಮೆರಿಕದ ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ.

ಹೃದಯವು ಸಾವಿರಾರು ಹೃದಯ ಕೋಶಗಳ ಮೂಲಕ ದೇಹದ ಸುತ್ತಲೂ ರಕ್ತವನ್ನು ಪಂಪ್ ಮಾಡುತ್ತದೆ. ಹೃದಯದ ಮೇಲೆ ಬಲವಾದ ಪರಿಣಾಮ ಬೀರುವ ಡಿಗೋಕ್ಸಿನ್‌ನಂತಹ ಶಕ್ತಿಯುಕ್ತ ಸಂಯುಕ್ತಗಳನ್ನು ಫಾಕ್ಸ್‌ಗ್ಲೋವ್ ಹೊಂದಿದೆ.

ಕಾರ್ಡಿಯಾಕ್ ಗೈಕೋಸೈಡ್‌ಗಳನ್ನು ಉತ್ಪಾದಿಸುವ ಫಾಕ್ಸ್‌ಗ್ಲೋವ್‌ಗಳು ಹೃದಯ ಕೋಶಗಳಲ್ಲಿನ ಸೋಡಿಯಂ, ಪೊಟ್ಯಾಸಿಯಮ್ ಪಂಪ್ ಕಾರ್ಯವನ್ನು ಪ್ರತಿಬಂಧಿಸುತ್ತದೆ. ಇದು ಹೃದಯ ಗಟ್ಟಿಯಾಗಿ ಮತ್ತು ವೇಗವಾಗಿ ಬಡಿದುಕೊಳ್ಳುವಂತೆ ಮಾಡುತ್ತದೆ. ಇದರಿಂದ ಹೃದಯ ಸ್ತಂಭನ ಆಗುವ ಸಾಧ್ಯತೆಗಳಿದೆ ಎಂದು ತಜ್ಞರು ತಿಳಿಸಿದ್ದಾರೆ. ಗುಲಾಬಿ, ನೇರಳೆ, ಬಿಳಿ ಮತ್ತು ಹಳದಿ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಕಾಣಸಿಗುವ ಫಾಕ್ಸ್‌ ಗೋವ ಮೂಲತಃ ಯುರೋಪ್ ಮತ್ತು ಉತ್ತರ ಆಫ್ರಿಕಾದಿಂದ ಈಗ ಅಮೆರಿಕದಾದ ತೋಟಗಳಲ್ಲಿ ಅರಳುವುದನ್ನು ಕಾಣಬಹುದು.

ಗಿಡಮೂಲಿಕೆ ಔಷಧದಲ್ಲಿ ಇತಿಹಾಸ ಹೊಂದಿರುವ ಪಾಕ್ಸ್ ಗ್ಲೋವ್ ಬಗ್ಗೆ ಜನಪ್ರಿಯ ಗಾದೆ ಮಾತಿದೆ. ಫಾಕ್ಸ್‌ ಗ್ಲೋವ್‌ನಿಂದ ಸತ್ತವರನ್ನು ಎಬ್ಬಿಸಬಹುದು ಮತ್ತು ಜೀವಂತವಾಗಿರುವವರನ್ನು ಕೊಲ್ಲಬಹುದು ಎಂದು ಹೇಳುತ್ತಾರೆ. ಹೃದಯಾಘಾತದ ಸಂದರ್ಭದಲ್ಲಿ ಇತರ ಔಷಧ ವಿಫಲವಾದಾಗ ಡಿಗೋಕ್ಸಿನ್ ಅನ್ನು ಪ್ರಾಯೋಗಿಕವಾಗಿ ಸೂಚಿಸಲಾಗುತ್ತದೆ ಎಂದು ಡಾ.ಝನ್ ವಾಂಗ್ ಹೇಳಿದ್ದಾರೆ.

– ಅಂತರ್ಜಾಲ ಮಾಹಿತಿ

An American scientist has warned that the foxglove flower plant can cause heart attacks. The heart pumps blood around the body through thousands of cardiac cells. Foxglove contains powerful compounds like digoxin that have a strong effect on the heart
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 17-04-2026 | ಕರ್ನಾಟಕದ ಹವಾಮಾನದಲ್ಲಿ ಬದಲಾವಣೆ – ಏಪ್ರಿಲ್ 18 ರಿಂದ ಮಳೆ ಹೆಚ್ಚಳ

ಏಪ್ರಿಲ್ 18ರಿಂದ ರಾಜ್ಯದಲ್ಲಿ ಹವಾಮಾನ ಬದಲಾವಣೆ ಕಂಡುಬರುತ್ತಿದ್ದು, ಹಂತ ಹಂತವಾಗಿ ಮಳೆಯ ಚಟುವಟಿಕೆ…

10 hours ago

ಒಡಿಶಾ ಕರಾವಳಿಯಲ್ಲಿ ಅಕ್ರಮ ಅಡಿಕೆ ಸಾಗಣೆ ಪತ್ತೆ – 700 ಕ್ಕೂ ಹೆಚ್ಚು ಗೋಣಿ ಚೀಲ ವಶಕ್ಕೆ

ಒಡಿಶಾ ಕರಾವಳಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 700 ಕ್ಕೂ ಹೆಚ್ಚು ಗೋಣಿ ಚೀಲಗಳ ಅಡಿಕೆ…

2 days ago

ರಾಸಾಯನಿಕ ಮುಕ್ತ ಕೃಷಿಗೆ ಪ್ರಧಾನಿ ಮೋದಿ ಕರೆ

ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ…

2 days ago

ವಳಲಂಬೆಯಲ್ಲಿ ಎ.19 ರಂದು ‘ಸಂಗೀತ ಸಂಭ್ರಮ’

ಸುಳ್ಯದ ವಳಲಂಬೆಯಲ್ಲಿ ಏಪ್ರಿಲ್ 19ರಂದು ‘ಸಂಗೀತ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಕಲಾವಿದರಿಂದ…

2 days ago

ಹವಾಮಾನ ವರದಿ | 15-04-2026 | ಕರ್ನಾಟಕದಲ್ಲಿ ಬಿಸಿಗಾಳಿಯ ನಡುವೆ ಮಳೆಯ ಸುಳಿವು – ಏಪ್ರಿಲ್ 18 ರಿಂದ ಮಳೆ…!

ಕರ್ನಾಟಕದಲ್ಲಿ ಏಪ್ರಿಲ್ 18ರಿಂದ ಹಂತ ಹಂತವಾಗಿ ಮಳೆಯ ಚಟುವಟಿಕೆ ಆರಂಭವಾಗುವ ಸಾಧ್ಯತೆ ಇದೆ.…

2 days ago

ವಿಷು ಹಬ್ಬದ ಅರ್ಥವೇನು ಗೊತ್ತಾ..? ಸೂರ್ಯ ಸಂಕ್ರಮಣದ ಈ ರಹಸ್ಯ ನಿಮ್ಮ ಜೀವನವೇ ಬದಲಾಯಿಸಬಹುದು..!

ವಿಷು ಹಬ್ಬವು ಸೂರ್ಯನ ಮೇಷ ಸಂಕ್ರಮಣದೊಂದಿಗೆ ಸಂಬಂಧಿಸಿದ ಆಧ್ಯಾತ್ಮಿಕ ಹಬ್ಬವಾಗಿದೆ. ವಿಷು ಕಣಿ…

3 days ago