ದೇಶದ ಅತಿ ದೊಡ್ಡ ಸಮಸ್ಯೆ ಅಂದರೆ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ. ನೀವು ದೇಶದ ಯಾವುದೇ ಮೂಲೆಗೆ ಹೋದರೂ, ಈ ಸಮಸ್ಯೆ ಇದ್ದಿದ್ದೇ. ಅಲ್ಲಿನ ಆಯಾಯ ಸರ್ಕಾರಗಳು ಕಸ ಮುಕ್ತಗೊಳಿಸಲು ಇನ್ನಿಲ್ಲದ ಶ್ರಮ ಹಾಕಿದರೂ ಯಶಸ್ವಿಯಾಗಿಲ್ಲ. ಈ ಕಸದ ಸಮಸ್ಯೆಯಿಂದ ಬೇಸತ್ತ ಕೇರಳ ಸರ್ಕಾರ ಹೊಸ ಆಫರ್ ಒಂದನ್ನು ಅಲ್ಲಿನ ನಾಗರೀಕರಿಗೆ ನೀಡಿದೆ. ಈ ಮೂಲಕವಾದರು ರಾಜ್ಯವನ್ನು ಕಸಮುಕ್ತಗೊಳಿಸಬಹುದಾ ಎಂದು ಯೋಚಿಸಿದೆ. ಇದು ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ತಂದಿರುವ ‘ಮಾಲಿನ್ಯ ಮುಕ್ತಂ ನವ ಕೇರಳಂ’ ಅಭಿಯಾನದ ಒಂದು ಭಾಗವಾಗಿದೆ.
ತ್ಯಾಜ್ಯಮುಕ್ತ ರಾಜ್ಯವನ್ನಾಗಿ ಮಾಡಲು ಕಸದ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸುವಂತೆ ಸರ್ಕಾರವು ನಾಗರಿಕರಿಗೆ ವಿನಂತಿಸಿದೆ. ತ್ಯಾಜ್ಯದ ಫೋಟೋ ಕಳುಹಿಸುವವರಿಗೆ ಹಣ ನೀಡುವುದಾಗಿಯೂ ಸರ್ಕಾರ ಆಫರ್ ನೀಡಿದೆ. ನೀವು ಮಾಡಬೇಕಿರುವುದು ಇಷ್ಟೇ, ಎಲ್ಲೇ ಕಸ ಕಂಡರೂ ಕಸ ಕಂಡ ತಕ್ಷಣ ಫೋಟೊ ಅಥವಾ ವಿಡಿಯೋ ತೆಗೆದು ಸರಕಾರಕ್ಕೆ ಕಳುಹಿಸಬೇಕು.
ಇಷ್ಟೇ ಅಲ್ಲದೇ, ಸಾರ್ವಜನಿಕ ಸ್ಥಳಗಳು, ಖಾಸಗಿ ಆಸ್ತಿಗಳು ಮತ್ತು ಜಲಮೂಲಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯವನ್ನು ಎಸೆಯುತ್ತಿರುವವರ ಬಗ್ಗೆ ವರದಿ ಮಾಡಲು ಸರ್ಕಾರ ಸೂಚನೆ ನೀಡಿದೆ.ಈ ಫೋಟೋ-ವೀಡಿಯೋಗಳನ್ನು ಸರ್ಕಾರ ನೀಡುವ ವಾಟ್ಸಾಪ್ ಸಂಖ್ಯೆ ಮತ್ತು ಇ-ಮೇಲ್ಗೆ ಕಳುಹಿಸಬೇಕು. ಮಾಹಿತಿದಾರರ ಹೆಸರು ಅಥವಾ ವಿವರಗಳನ್ನು ಗೌಪ್ಯವಾಗಿ ಇಡುವುದಾಗಿಯೂ ಪ್ರಕಟಣೆ ಹೊರಡಿಸಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯಿಂದ ಬೆಳಗಾವಿಯ ಹೋಮ್ ಪಾರ್ಕ್ ನಲ್ಲಿ…
ದೇಶಾದ್ಯಂತ ಒಂದೇ ದಿನ 47 ಸ್ಥಳಗಳಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಬೆಂಗಳೂರಿನ ಎನ್ಎಸಿಐಎ…
ಅಲ್ಲಲ್ಲಿ ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ೨…
ಹಲಸಿನ ಕಾಯಿ ಪೂರಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಕಾಯಿ 1/2 ಕಪ್, ಗೋಧಿ ಹುಡಿ.1…
ಸರಕಾರದ ಸೂಚನೆಯಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ- ಕೆವೈಸಿ ಮಾಡಲಾದ ಪಡಿತರ ಚೀಟಿ ಫಲಾನುಭವಿಗಳನ್ನು…